ದೇವರಹಿಪ್ಪರಗಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿಕಾಂಗ್ರೆಸ್'ನಿಂದ ಮುನಿಸಿಕೊಂಡು ಜೆಡಿಎಸ್'ನತ್ತ ಮುಖ ಮಾಡಿದ್ದರು. ಆದರೆ ದೇವರಹಿಪ್ಪರಗಿ ಬಿಟ್ಟು ಮುದ್ದೆ ಬಿಹಾಳದಿಂದ ಸ್ಪರ್ಧಿಸಲು ವರಿಷ್ಠರು ಸೂಚಿಸಿದ ಕಾರಣ ತೆನೆಹೊತ್ತ ಪಕ್ಷಕ್ಕೂ ಬಾಯ್ ಹೇಳಿದ್ದಾರೆ
ಬೆಂಗಳೂರು(ಮಾ.17): ಕಾಂಗ್ರೆಸ್'ನಿಂದ ದೂರವಾಗಿ ಜೆಡಿಎಸ್'ನತ್ತ ಮುಖ ಮಾಡಿದ್ದ ಶಾಸಕ'ರೊಬ್ಬರು ಸೂಕ್ತ ಪ್ರಾತಿನಿದ್ಯ ಸಿಗದೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ದೇವರಹಿಪ್ಪರಗಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಕಾಂಗ್ರೆಸ್'ನಿಂದ ಮುನಿಸಿಕೊಂಡು ಜೆಡಿಎಸ್'ನತ್ತ ಮುಖ ಮಾಡಿದ್ದರು. ಆದರೆ ದೇವರಹಿಪ್ಪರಗಿ ಬಿಟ್ಟು ಮುದ್ದೆ ಬಿಹಾಳದಿಂದ ಸ್ಪರ್ಧಿಸಲು ವರಿಷ್ಠರು ಸೂಚಿಸಿದ ಕಾರಣ ತೆನೆಹೊತ್ತ ಪಕ್ಷಕ್ಕೂ ಬಾಯ್ ಹೇಳಿದ್ದಾರೆ. ಅಲ್ಲದೆ ಈಗಾಗಲೇ ಮುದ್ದೆಬಿಹಾಳದಿಂದ ಜೆಡಿಎಸ್ ವರಿಷ್ಠರು ಸ್ಪರ್ಧಿಸಲು ಘೋಷಿಸಿದ್ದರು. ರಾಜ್ಯಸಭೆ ಚುನಾವಣೆ ಬಳಿಕ ತಮ್ಮ ನಿರ್ಧಾರ ತಿಳಿಸಲಿದ್ದಾರೆ.