
ಬೆಂಗಳೂರು(ಮಾ.17): ಕಾಂಗ್ರೆಸ್'ನಿಂದ ದೂರವಾಗಿ ಜೆಡಿಎಸ್'ನತ್ತ ಮುಖ ಮಾಡಿದ್ದ ಶಾಸಕ'ರೊಬ್ಬರು ಸೂಕ್ತ ಪ್ರಾತಿನಿದ್ಯ ಸಿಗದೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ದೇವರಹಿಪ್ಪರಗಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಕಾಂಗ್ರೆಸ್'ನಿಂದ ಮುನಿಸಿಕೊಂಡು ಜೆಡಿಎಸ್'ನತ್ತ ಮುಖ ಮಾಡಿದ್ದರು. ಆದರೆ ದೇವರಹಿಪ್ಪರಗಿ ಬಿಟ್ಟು ಮುದ್ದೆ ಬಿಹಾಳದಿಂದ ಸ್ಪರ್ಧಿಸಲು ವರಿಷ್ಠರು ಸೂಚಿಸಿದ ಕಾರಣ ತೆನೆಹೊತ್ತ ಪಕ್ಷಕ್ಕೂ ಬಾಯ್ ಹೇಳಿದ್ದಾರೆ. ಅಲ್ಲದೆ ಈಗಾಗಲೇ ಮುದ್ದೆಬಿಹಾಳದಿಂದ ಜೆಡಿಎಸ್ ವರಿಷ್ಠರು ಸ್ಪರ್ಧಿಸಲು ಘೋಷಿಸಿದ್ದರು. ರಾಜ್ಯಸಭೆ ಚುನಾವಣೆ ಬಳಿಕ ತಮ್ಮ ನಿರ್ಧಾರ ತಿಳಿಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.