
ಬೆಂಗಳೂರು(ಡಿ.21): ಇನ್ನು ಮುಂದೆ ಸಂಬಳವನ್ನು ಕ್ಯಾಷ್ ಮೂಲಕ ಕೊಡುವುದನ್ನು ನಿಷೇಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ದೇಶದ ಹಲವಾರು ಫ್ಯಾಕ್ಟರಿಗಳಲ್ಲಿ ಈಗಲೂ ಕೂಡಾ ಕಾರ್ಮಿಕರಿಗೆ ನಗದಿನಲ್ಲೇ ಸಂಬಳ ನೀಡುತ್ತಿವೆ. ಇದನ್ನು ಪಾರದರ್ಶಕವಾಗಿಸಲು ಹಾಗೂ ಕಾರ್ಮಿಕರಿಗೆ ಆಗುತ್ತಿರುವ ನಷ್ಟ ತಪ್ಪಿಸಲು ಕೇಂದ್ರ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಸಂಬಳವನ್ನು ಕಾರ್ಖಾನೆ, ಎಸ್ಟೇಟ್ ಗಳ ಮಾಲೀಕರು ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೇ ಹಾಕಬೇಕು ಅಥವಾ ಚೆಕ್ನಲ್ಲಿ ನೀಡಬೇಕು. ಸದ್ಯಕ್ಕೆ ಕಾನೂನಿನಲ್ಲಿ ಇದನ್ನು ಕಡ್ಡಾಯ ಮಾಡಲು ಅವಕಾಶವಿಲ್ಲ. ಹೀಗಾಗಿ ಈ ಕುರಿತು ಮೊದಲು ಸುಗ್ರೀವಾಜ್ಞೆ ಹೊರಡಿಸಿ, ನಂತರ ಮಸೂದೆ ಅಂಗೀಕರಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಕ್ಯಾಷ್ಲೆಸ್ ವಹಿವಾಟಿಗೆ ಮುಂದಾಗಿರುವ ಸರ್ಕಾರ, ಕಾರ್ಮಿಕರ ಹಿತರಕ್ಷಣೆಗೆ ಈ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.