
ಬೆಂಗಳೂರು (ಡಿ. 21): ಶ್ಯಾಂ ಭಟ್ ಕೆಪಿಎಸ್ಸಿ ಅಧ್ಯಕ್ಷರಾಗಿದ್ದೇ ಕೆಪಿಎಸ್ಸಿ ಮುಚ್ಚುವುದಕ್ಕೆ. ಇದುವರೆಗೂ ಒಂದೇ ಒಂದು ನೋಟಿಫಿಕೇಶನ್ ಹೊರಡಿಸಿಲ್ಲ.ಕೆಪಿಎಸ್ಸಿಯಲ್ಲಿ ಪಾರರ್ದಶಕತೆ ಇಲ್ಲವೆಂದು ಬಿಜೆಪಿ ಕಚೇರಿಯಲ್ಲಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಕೆಪಿಎಸ್ಸಿ ಯಲ್ಲಿ ಸಂದರ್ಶನ ತೆಗದುಹಾಕಿ,ಲಿಖಿತ ಪರೀಕ್ಷೆ ನೀಡಬೇಕು. ಮೆರಿಟ್ ನಲ್ಲಿ ಪಾಸ್ ಆದವರಿಗೆ ಆದ್ಯತೆ ನೀಡಬೇಕು. ನಾನು ಗ್ರಾಮೀಣಾಭಿವೃದ್ಧಿ ಸಚಿವನಾಗಿದ್ದಾಗ 2000 ಗ್ರಾಮೀಣಾಭಿವೃದ್ಧಿ ಇಲಾಖೆಯ ಪಿಡಿಓ ಗಳನ್ನ ನೇಮಕ ಮಾಡಿದ್ದೆ. ಅದೇ ರೀತಿ ಈ ಸರ್ಕಾರ ವೈವಾ ರದ್ದು ಮಾಡಬೇಕು. ಲಿಖಿತ ಪರೀಕ್ಷೆಯಲ್ಲಿ ಮೆರಿಟ್ ನಲ್ಲಿ ಪಾಸ್ ಆದವರಿಗೆ ಆದ್ಯತೆ ನೀಡಬೇಕು ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.