ನಾನು ದೇಶ ಬಿಟ್ಟು ಓಡಿ ಹೋಗಿಲ್ಲ: ಕೊಠಾರಿ

Published : Feb 20, 2018, 07:59 AM ISTUpdated : Apr 11, 2018, 01:06 PM IST
ನಾನು ದೇಶ ಬಿಟ್ಟು ಓಡಿ ಹೋಗಿಲ್ಲ: ಕೊಠಾರಿ

ಸಾರಾಂಶ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ 3695 ಕೋಟಿ ರು. ವಂಚಿಸಿದ ಆರೋಪ ಎದುರಿಸುತ್ತಿರುವ ಮತ್ತು ಸದ್ಯ ನಾಪತ್ತೆಯಾಗಿರುವ ರೊಟೊಮ್ಯಾಕ್‌ ಪೆನ್‌ ಕಂಪನಿಯ ಪ್ರವರ್ತಕ ವಿಕ್ರಮ್‌ ಕೊಠಾರಿ, ತಾನೇನು ದೇಶ ಬಿಟ್ಟು ಓಡಿ ಹೋಗಿಲ್ಲ ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ.

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ 3695 ಕೋಟಿ ರು. ವಂಚಿಸಿದ ಆರೋಪ ಎದುರಿಸುತ್ತಿರುವ ಮತ್ತು ಸದ್ಯ ನಾಪತ್ತೆಯಾಗಿರುವ ರೊಟೊಮ್ಯಾಕ್‌ ಪೆನ್‌ ಕಂಪನಿಯ ಪ್ರವರ್ತಕ ವಿಕ್ರಮ್‌ ಕೊಠಾರಿ, ತಾನೇನು ದೇಶ ಬಿಟ್ಟು ಓಡಿ ಹೋಗಿಲ್ಲ ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಸೋಮವಾರ ಹೇಳೀಕೆ ಬಿಡುಗಡೆ ಮಾಡಿರುವ ಕೊಠಾರಿ ‘ಮೊದಲಿಗೆ ಮುಖ್ಯವಾದ ವಿಚಾರವೆಂದರೆ, ಇದೇನು ಹಗರಣವಲ್ಲ. ನಾನೋರ್ವ ಭಾರತೀಯ ನಾಗರಿಕನಾಗಿದ್ದು, ನನ್ನ ಹುಟ್ಟೂರಿನಲ್ಲಿದ್ದೇನೆ.

ನನ್ನ ಒಡೆತನದ ಕಂಪನಿಯನ್ನು ಬ್ಯಾಂಕ್‌ಗಳು ಅನುತ್ಪಾದಕ ಆಸ್ತಿ ಎಂದು ಘೋಷಣೆ ಮಾಡಿವೆ. ಆದರೆ, ನಾನು ಸುಸ್ತಿದಾರನಲ್ಲ. ರಾಷ್ಟ್ರೀಯ ಕಂಪನಿ ಕಾನೂನು ಟ್ರಿಬ್ಯುನಲ್‌(ಎನ್‌ಸಿಎಲ್‌ಟಿ) ಕಾನೂನಿನಡಿ ವಿಚಾರಣೆಗೊಳಪಡಬೇಕಿದೆ. ಬ್ಯಾಂಕ್‌ಗಳ ಜತೆ ನಿಕಟವರ್ತಿಯಾಗಿದ್ದು, ಅವುಗಳು ನೀಡಿದ ಸಾಲವನ್ನು ಶೀಘ್ರದಲ್ಲೇ ಮರುಪಾವತಿಸುತ್ತೇನೆ,’ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಿಳಾ ಆಯೋಗ ವಿರೋಧಕ್ಕೂ ಡೋಂಟ್ ಕೇರ್ , 569 ಮದ್ಯದ ಲೈಸೆನ್ಸ್ ಇ-ಹರಾಜು; ಸರ್ಕಾರದ ಖಜಾನೆಗೆ ಬರಲಿದೆಯೇ ₹1,000 ಕೋಟಿ?
ಆಟವಾಡುತ್ತಿದ್ದ 6 ವರ್ಷದ ಮಗು ಮೊದಲ ಮಹಡಿಯಿಂದ ಬಿದ್ದು ಗಂಭೀರ ಗಾಯ, ಪ್ರಾಣಾಪಾಯದಿಂದ ಪಾರು!