
ಹೈದರಾಬಾದ್: ನೀರವ್ ಮೋದಿ ಬ್ಯಾಂಕ್ ಹಗರಣ ಬಯಲಾದ ಬೆನ್ನಲ್ಲೇ ಬೇರೆ ಬೇರೆ ಬ್ಯಾಂಕುಗಳಲ್ಲಿ ನಡೆದ ಹಗರಣಗಳು ಬಯಲಿಗೆ ಬರುತ್ತಿವೆ.
ಇದೀಗ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಡೆದ ಹಗರಣವೊಂದು ಹೊರಬಿದ್ದಿದೆ.
ಟೋಟೆಮ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಎಂಬ ಹೈದರಾಬಾದಿನ ಖಾಸಗಿ ಕಂಪನಿಯೊಂದು ಬ್ಯಾಂಕಿಗೆ ₹313.84 ಕೋಟಿ ವಂಚಿಸಿರುವ ಬಗ್ಗೆ ಸಿಬಿಐ ಪ್ರಕರಣ ದಾಖಲಿಸಿದೆ. ಇದನ್ನು 30 ಜೂನ್ 2012 ರಂದು ಎನ್’ಪಿಏ ಎಂದು ಘೋಷಿಸಲಾಗಿತ್ತು ಎಂದು ತಿಳಿದು ಬಂದಿದೆ.
ಒಟ್ಟು 8 ಬ್ಯಾಂಕುಗಳಿಗೆ 1394.43 ಕೋಟಿ ಹಣವನ್ನು ಸಾಲ ಬಾಕಿಯಿದೆಯೆಂದು ಹೇಳಲಾಗಿದೆ.
ಕಂಪನಿಯ ನಿರ್ದೇಶಕರಾಗಿರುವ ಟೋಟೆಂಪುಡಿ ಸಲಲಿತ್ ಹಾಗೂ ಟೋಟೆಂಪುಡಿ ಕವಿತಾ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.