
ನವದೆಹಲಿ(ನ.10): ದಿಢೀರ್ ಬೆಳವಣಿಗೆಯೊಂದರಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ 500 ಮತ್ತು 1000 ರೂಪಾಯಿ ನೋಟುಗಳನ್ನ ರದ್ದು ಮಾಡಿ ಕಪ್ಪುಹಣ ಮತ್ತು ಭಯೋತ್ಪಾದನೆ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸಿದರು. ಅಂದಹಾಗೆ, ಈ ಆಲೋಚನೆ ನರೇಂದ್ರಮೋದಿಗೆ ಹೇಗೆ ಬಂತು..? ಈ ಐಡಿಯಾ ಕೊಟ್ಟವರ್ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ನರೇಂದ್ರಮೋದಿಗೆ ಈ ಐಡಿಯಾ ಕೊಟ್ಟವರು ಐಎಎಸ್ ಆಫೀಸರ್`ಗಳಲ್ಲ ಒಬ್ಬ ಚಾರ್ಟೆಡ್ ಅಕೌಂಟೆಂಟ್.ಔರಂಗಾಬಾದ್ ಮೂಲದ `ಅರ್ಥಕ್ರಾಂತಿ' ಎಂಬ ಸಿದ್ಧಾಂತವನ್ನ ಪ್ರತಿಪಾದಿಸಿದ ಚಾರ್ಟೆಡ್ ಅಕೌಂಟೆಂಟ್ ಅನಿಲ್ ಬೋಕಿಲ್, 500 ಮತ್ತು 1000 ರೂಪಾಯಿ ನೋಟುಗಳನ್ನ ರದ್ದುಮಾಡುವ ಈ ಐಡಿಯಾವನ್ನ ಮೋದಿಗೆ ಕೊಟ್ಟಿದ್ದರು.
ಕಪ್ಪುಹಣ ತಡೆ ಕುರಿತಾಗಿ ತಮ್ಮ ಸಿದ್ಧಾಂತವನ್ನ ಮಂಡಿಸಲು ಅನಿಲ್ ಬೋಕಿಲ್, ಜುಲೈನಲ್ಲಿ ಪ್ರಧಾನಮಮತ್ರಿ ಮೋದಿಯವರನ್ನ ಭೇಟಿಮಾಡಿದ್ದರು. ವರದಿಗಳ ಪ್ರಕಾರ, 8 ನಿಮಿಷ ಮಾತ್ರ ಮೋದಿ ಭೇಟಿಗೆ ಅವಕಾಶ ಸಿಕ್ಕಿತ್ತು. ಅನಿಲ್ ಸಿದ್ಧಾಂತಗಳನ್ನ ಆಲಿಸಿದ ಮೋದಿ 2 ಗಂಟೆಗಳ ಕಾಲ ಚರ್ಚೆ ನಡೆಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.