ಹಳೆ ನೋಟು ಪಡೆವಾಗ ತೆರಿಗೆಗಳ್ಳರ ಬಿಡುವುದಿಲ್ಲ: ಅರುಣ್ ಜೇಟ್ಲಿ ಖಡಕ್ ಎಚ್ಚರಿಕೆ

Published : Nov 10, 2016, 05:14 AM ISTUpdated : Apr 11, 2018, 12:59 PM IST
ಹಳೆ ನೋಟು ಪಡೆವಾಗ ತೆರಿಗೆಗಳ್ಳರ ಬಿಡುವುದಿಲ್ಲ: ಅರುಣ್ ಜೇಟ್ಲಿ ಖಡಕ್ ಎಚ್ಚರಿಕೆ

ಸಾರಾಂಶ

ಪ್ರಧಾನಿ ಮೋದಿ ಅವರು ಕೈಗೊಂಡಿ­ರುವ ನಿರ್ಧಾರವನ್ನು ಅತ್ಯಂತ ದಿಟ್ಟಎಂದು ಬಣ್ಣಿಸಿದ ವಿತ್ತ ಸಚಿವ ಅರುಣ್‌ ಜೇಟ್ಲಿ, ಈ ಕ್ರಮದಿಂದ ಸಮಾಜದ ಸರ್ವಜನರಿಗೂ ಅನುಕೂಲವಾಗಲಿದೆ, ಎಲ್ಲ ವರ್ಗವೂ ಈ ಕ್ರಮವನ್ನು ಸ್ವಾಗತಿಸಬೇಕು ಎಂದಿದ್ದಾರೆ.

ನವದೆಹಲಿ: ಹಳೆಯ ನೋಟುಗಳನ್ನು ಹೊಸ ನೋಟು­­­­ಗಳಿಗೆ ಬದಲಾಯಿಸಿ­ಕೊಳ್ಳುವಾಗ ಎಲ್ಲಾ ತೆರಿಗೆ ಕಾನೂನುಗಳೂ ಅನ್ವಯ­ವಾಗುತ್ತವೆ, ಇದು ತೆರಿಗೆಗಳ್ಳರಿಗೆ ಕ್ಷಮಾದಾನ ಯೋಜನೆ ಅಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.

ಜತೆಗೆ, ಕಪ್ಪು ಹಣ ನಿಯಂತ್ರಣ ಮತ್ತು ಆರ್ಥಿಕ ಭಯೋತ್ಪಾದನೆ ನಿಗ್ರಹ­ಕ್ಕಾಗಿ 500 ಮತ್ತು 1000 ರೂ. ನೋಟು­ಗಳನ್ನು ರದ್ದುಮಾಡುವ ಕ್ರಮದಿಂದ ಆರ್ಥಿಕತೆ ದೃಢಗೊಳ್ಳಲಿದ್ದು, ಜಾಗತಿಕ ಮಟ್ಟದಲ್ಲಿ ರಾಷ್ಟ್ರದ ವಿಶ್ವಾಸಾರ್ಹತೆ ವೃದ್ಧಿಸಲಿದೆ ಎಂದೂ ಹೇಳಿ​ದ್ದಾರೆ. 

ಈ ನಡುವೆ ನೋಟು ಬದಲಾಯಿಸಿ­ಕೊಡುವ ಸಲುವಾಗಿ ಎಲ್ಲಾ ಬ್ಯಾಂಕುಗಳು ಶನಿವಾರ ಮತ್ತು ಭಾನುವಾರ ದಿನವಿಡೀ ಕಾರ್ಯ­ನಿರ್ವಹಿಸಲಿವೆ. ಹಳೆ ನೋಟು ನೀಡಿ ಹೊಸ ನೋಟು ಬದಲಾಯಿಸಿ­ಕೊಳ್ಳುವ ಪ್ರಕ್ರಿಯೆಯನ್ನು ಸರಳ ಮತ್ತು ಸುಸೂತ್ರಗೊಳಿಸಲು ಆರ್‌ಬಿಐ ಬ್ಯಾಂಕು­ಗಳಿಗೆ ಸೂಚನೆ ನೀಡಿದೆ. 

ಆದಾಯ ಘೋಷ​ಣೆ​ಯಲ್ಲಿ ನಮೂ​ದಿ​ಸಿದ ಮೊತ್ತಕ್ಕಿಂತ ಹೆಚ್ಚಾದ ಹಣಕ್ಕೆ ಶೇ.200 ರಷ್ಟುದಂಡ ವಿಧಿ​ಸ​ಲಾ​ಗು​ತ್ತದೆ ಎಂದು ಕೇಂದ್ರ ಎಚ್ಚ​ರಿ​ಸಿದೆ. ಇದು ಅಕ್ರಮ ತಡೆ​ಗ​ಟ್ಟುವ ನಿಟ್ಟಿ​ನಲ್ಲಿ ದಿಟ್ಟಕ್ರಮ ಎಂದೇ ಭಾವಿ​ಸ​ಲಾ​ಗಿ​ದೆ.
ಇದೇ ವೇಳೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ನವೆಂಬರ್‌ 11ರವರೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ರದ್ದು ಮಾಡಲಾಗಿದೆ. ತೆರಿಗೆ ವಿನಾಯ್ತಿ ಮಿತಿ ವ್ಯಾಪ್ತಿಗೆ ಬರುವ ರೈತರು, ಗೃಹಿಣಿ­ಯರು, ಕಾರ್ಮಿಕರು .2.50 ಲಕ್ಷ ಮೌಲ್ಯದ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ಎಂದು ಬ್ಯಾಂಕ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರು ಕೈಗೊಂಡಿ­ರುವ ನಿರ್ಧಾರವನ್ನು ಅತ್ಯಂತ ದಿಟ್ಟಎಂದು ಬಣ್ಣಿಸಿದ ವಿತ್ತ ಸಚಿವ ಅರುಣ್‌ ಜೇಟ್ಲಿ, ಈ ಕ್ರಮದಿಂದ ಸಮಾಜದ ಸರ್ವಜನರಿಗೂ ಅನುಕೂಲವಾಗಲಿದೆ, ಎಲ್ಲ ವರ್ಗವೂ ಈ ಕ್ರಮವನ್ನು ಸ್ವಾಗತಿಸಬೇಕು ಎಂದಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮತಾನಾಡಿದ ಅವರು, ದೇಶದ ಆರ್ಥಿಕತೆಯನ್ನು ಉತ್ತೇಜಿಸಲು ಎರಡೂವರೆ ವರ್ಷದಲ್ಲಿ ಸರ್ಕಾರ ಹಲವು ಕ್ರಮಕೈಗೊಂಡಿದೆ. ಜನರು ತಮ್ಮ ಕಪ್ಪುಹಣವನ್ನು ಘೋಷಿಸಿ­ಕೊಂಡು ಅದನ್ನು ಅಧಿಕೃತಗೊಳಿಸಿ­ಕೊಳ್ಳಲು ಕಪ್ಪು ಹಣ ಕಾಯ್ದೆಯನ್ನು ರೂಪಿಸಿದ್ದೇವೆ ಎಂದರು.

ನಮ್ಮ ನಿರ್ಧಾರದಿಂದ ಕಪ್ಪುಹಣದ ಪರ್ಯಾಯ ಆರ್ಥಿಕತೆಗೆ ಹಿನ್ನಡೆಯಾ­ಗಲಿದೆ, ಏಕೆಂದರೆ ವ್ಯವಸ್ಥೆಯ ಹೊರಗಿ­ರುವ ನಗದು ಈಗ ನೇರವಾಗಿ ಬ್ಯಾಂಕಿಂಗ್‌ ವ್ಯವಸ್ಥೆಗೆ ಬರಲಿದೆ. ನಾಗರಿಕರಿಗೆ ಕೆಲವು ಅನನುಕೂಲ­ಗಳಾಗುತ್ತವೆ. ಇವುಗಳನ್ನು ತಪ್ಪಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳುತ್ತಿದೆ. ಪರಿಸ್ಥಿತಿ ಮೇಲೆ ನಿಗಾ ಇಟ್ಟಿದೆ. ಕೆಲವು ಪ್ರಕರಣಗಳಲ್ಲಿ ಪ್ರಧಾನಿ 72 ಗಂಟೆಗಳ ಅವಧಿ ವರಿಗೆ ನೋಟು ಸ್ವೀಕರಿಸಲು ಅವಕಾಶ ನೀಡಿದ್ದಾರೆ. ಪರಿಸ್ಥಿತಿಯನ್ನು ನಾವು ಅವಲೋಕಿಸುತ್ತಿದ್ದೇವೆæ. ಮೆಟ್ರೋ, ಔಷಧ ಅಂಗಡಿ ಮತ್ತಿತರ ಕಡೆ­ಗಳಲ್ಲಿ .500, .1000 ನೋಟು­ಗಳನ್ನು ಸ್ವೀಕರಿಸಲಾಗಿದೆ ಎಂದರು. ಈ ನಿರ್ಧಾರದಿಂದ ಕೇಂದ್ರ­ಸರ್ಕಾ­ರವಷ್ಟೇ ಅಲ್ಲ ರಾಜ್ಯಸರ್ಕಾರಗಳೂ ಅನುಕೂಲ ಪಡೆಯಲಿವೆ ಎಂದರು. ಸುಧಾರಣಾ ಕ್ರಮಗಳಿಂದ ಬಡವರಿಗೆ ಅನನು­ಕೂಲವಾಗುವುದಿಲ್ಲ, ಪ್ರಮಾ­ಣಿಕ­­ವಾಗಿ ತೆರಿಗೆ ಪಾವತಿಸು­ವವರಲ್ಲಿ ನಮ್ಮ ನಿರ್ಧಾರದಿಂದ ತೃಪ್ತಭಾವ ಬಂದಿದೆ ಎಂದರು. 

(ಕೃಪೆ: ಕನ್ನಡಪ್ರಭ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಟಿ ಬೆಲೆಬಾಳುವ ಲ್ಯಾಂಬೋರ್ಗಿನಿ ಕಾರಿದ್ದರೇನು? ಆರ್‌ಟಿಒ ಅಧಿಕಾರಿಗಳ ಮುಂದೆ ಮಂಡಿಯೂರಿದ ಮಾಲೀಕ!
ಈ ಟ್ರೆಂಡ್ ಶುರು ಮಾಡಿದ್ದು ಮೆಹಬೂಬಾ: ನಿತೀಶ್‌ಕುಮಾರ್ ಬುರ್ಖಾ ಎಳೆದಿದ್ದಕ್ಕೆ ಮುಫ್ತಿಗೆ ಒಮರ್ ಟಾಂಗ್