ಸಚಿವರ ವಿರುದ್ಧ ಫೇಸ್'ಬುಕ್ನಲ್ಲಿ ಅಮಿನ್ ಮಟ್ಟು ಪೋಸ್ಟ್: ಮಾಧ್ಯಮ ಸಲಹೆಗಾರರನ್ನು ಬದಲಿಸುವಂತೆ ಒತ್ತಾಯ

Published : Mar 01, 2017, 03:52 PM ISTUpdated : Apr 11, 2018, 01:00 PM IST
ಸಚಿವರ ವಿರುದ್ಧ ಫೇಸ್'ಬುಕ್ನಲ್ಲಿ ಅಮಿನ್ ಮಟ್ಟು ಪೋಸ್ಟ್: ಮಾಧ್ಯಮ ಸಲಹೆಗಾರರನ್ನು ಬದಲಿಸುವಂತೆ ಒತ್ತಾಯ

ಸಾರಾಂಶ

ಬೆಂಗಳೂರು(ಮಾ.02): ಡೈರಿ ವಿಚಾರವಾಗಿ  ಸಾಮಾಜಿಕ ಜಾಲತಾಣದಲ್ಲಿ  ಸಚಿವರ ರಾಜೀನಾಮೆ ಬಗ್ಗೆ  ಉಲ್ಲೇಖಿಸಿದ್ದ  ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್​ ಅಮೀನ್​ ಮಟ್ಟು ವಿರುದ್ಧ ಸಚಿವರಿಂದ ಅಸಮಾಧಾನ ವ್ಯಕ್ತವಾಗಿದೆ. ಈ ಮಧ್ಯೆ ನಾಲ್ಕು ದಿನಗಳ ಹಿಂದೆಯೇ ಮುಖ್ಯಮಂತ್ರಿಗಳಿಗೆ ಕೆಪಿಸಿಸಿ ಪದಾಧಿಕಾರಿಗಳಿಂದ ಪತ್ರ ಬರೆಯಲ್ಪಟ್ಟಿದ್ದು, ಸಚಿವ ಸಂಪುಟ ಸಭೆಯಲ್ಲೂ ಅಸಮಾಧಾನ ವ್ಯಕ್ತಗೊಂಡಿದೆ.

ಬೆಂಗಳೂರು(ಮಾ.02): ಡೈರಿ ವಿಚಾರವಾಗಿ  ಸಾಮಾಜಿಕ ಜಾಲತಾಣದಲ್ಲಿ  ಸಚಿವರ ರಾಜೀನಾಮೆ ಬಗ್ಗೆ  ಉಲ್ಲೇಖಿಸಿದ್ದ  ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್​ ಅಮೀನ್​ ಮಟ್ಟು ವಿರುದ್ಧ ಸಚಿವರಿಂದ ಅಸಮಾಧಾನ ವ್ಯಕ್ತವಾಗಿದೆ. ಈ ಮಧ್ಯೆ ನಾಲ್ಕು ದಿನಗಳ ಹಿಂದೆಯೇ ಮುಖ್ಯಮಂತ್ರಿಗಳಿಗೆ ಕೆಪಿಸಿಸಿ ಪದಾಧಿಕಾರಿಗಳಿಂದ ಪತ್ರ ಬರೆಯಲ್ಪಟ್ಟಿದ್ದು, ಸಚಿವ ಸಂಪುಟ ಸಭೆಯಲ್ಲೂ ಅಸಮಾಧಾನ ವ್ಯಕ್ತಗೊಂಡಿದೆ.

ಅಮಿನ್​ ಮಟ್ಟು ಬದಲಾವಣೆಗೆ ಆಗ್ರಹ

ಮೊನ್ನೆಯಷ್ಟೇ ಸಿಎಂ ಮಾಧ್ಯಮ ಸಲಹೆಗಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್​ ಮಾಡಿದ್ದ ಸಚಿವ ಆರ್​. ವಿ. ದೇಶಪಾಂಡೆ,  ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಅಮೀನ್​ ಮಟ್ಟು ಅವರಿಗೆ ಅಂತಹ ಅಧಿಕಾರ ಕೊಟ್ಟಿಲ್ಲ, ಅವರು ತಮ್ಮ ಇತಿಮಿತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದಿದ್ದಾರೆ.

ಇನ್ನು ಅಮೀನ್​ ಮಟ್ಟು ಫೇಸ್​ ಬುಕ್​ ಸ್ಟೇಟಸ್​ ವಿಚಾರ ನಿನ್ನೆಯ ಸಚಿವ ಸಂಪುಟ ಸಭೆಯಲ್ಲೂ ಪ್ರಸ್ತಾಪವಾಗಿದ್ದು, ಮಾಧ್ಯಮ ಸಲಹೆಗಾರರನ್ನು ಬದಲಿಸುವಂತೆಯೂ ಸಭೆಯಲ್ಲಿ ಹಿರಿಯ ಸಚಿವರು ಆಗ್ರಹಿಸಿದ್ದಾರೆ. ಈ ಬಗ್ಗೆ ಮಾತುಕತೆ ನಡೆಸಿ ವಿವಾದ ಪರಿಹರಿಸುವುದಾಗಿ ಸಂಪುಟ ಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ ಭರವಸೆ  ನೀಡಿದ್ದಾರೆ.

ಇನ್ನು ದಿನೇಶ್​  ಅಮೀನ್​ ಮಟ್ಟು ಅವರನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರ ಹುದ್ದೆಯಿಂದ ಬದಲಿಸಿ ಬೇರೆಯವರನ್ನು ನೇಮಕ ಮಾಡಿಕೊಳ್ಳುವಂತೆ ಕೆಪಿಸಿಸಿಯ ಕೆಲವು ಪದಾಧಿಕಾರಿಗಳು ಸಿಎಂ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಒಟ್ಟಾರೆ, ಡೈರಿ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಮಾಧ್ಯಮ ಸಲಹೆಗಾರರ ಸ್ಟೇಟಸ್​ ಈಗ ಸಚಿವರ ಕೋಪ ನೆತ್ತಿಗೇರುವಂತೆ ಮಾಡಿದೆ.

ವರದಿ: ಕಿರಣ್​ ಹನಿಯಡ್ಕ, ಸುವರ್ಣ ನ್ಯೂಸ್​.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ