ಭಾರತ- ಪಾಕ್‌ ಸಂಬಂಧ ವೃದ್ಧಿಗೆ ಅಮೆರಿಕದಿಂದ 2 ಸೂತ್ರ ಸಿದ್ಧ

Published : Aug 25, 2019, 12:05 PM IST
ಭಾರತ- ಪಾಕ್‌ ಸಂಬಂಧ ವೃದ್ಧಿಗೆ ಅಮೆರಿಕದಿಂದ 2 ಸೂತ್ರ ಸಿದ್ಧ

ಸಾರಾಂಶ

ಭಾರತ- ಪಾಕ್‌ ಸಂಬಂಧ ವೃದ್ಧಿಗೆ ಅಮೆರಿಕದಿಂದ 2 ಸೂತ್ರ ಸಿದ್ಧ |  ಉಗ್ರವಾದ ಹತ್ತಿಕ್ಕಲು ಪಾಕ್‌ಗೆ ಸೂಚನೆ |  ಸಹಸ ಸ್ಥಿತಿ ನಿರ್ಮಾಣಕ್ಕೆ ಭಾರತದ ಮನವೊಲಿಕೆ

ವಾಷಿಂಗ್ಟನ್‌ (ಆ. 25): ಸಂವಿಧಾನದ 370ನೇ ವಿಧಿ ತೆರವು ಮಾಡಿದ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಘರ್ಷ ಸ್ಥಗಿತಕ್ಕೆ ಕಾರ್ಯಪ್ರವೃತ್ತವಾಗಿರುವ ಅಮೆರಿಕ, ಉಭಯ ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿಗಾಗಿ ದ್ವಿ ಸೂತ್ರದ ಮೊರೆ ಹೋಗಿದೆ.

ಪ್ರಧಾನಿ ನರೇಂದ್ರ ಮೋದಿಗೆ ಯುಎಇ ಅತ್ಯುನ್ನತ ನಾಗರಿಕ ಪ್ರಶಸ್ತಿಯ ಗೌರವ

ಮೊದಲನೆಯದಾಗಿ, ಭಾರತದಲ್ಲಿ ಯಾವುದೇ ರೀತಿಯ ಭಯೋತ್ಪಾದನೆ ಅಥವಾ ಭಯೋತ್ಪಾದಕ ಕೃತ್ಯಗಳಿಗೆ ಹಣ ಸಂದಾಯ ಅಥವಾ ಇತರೆ ಸಹಕಾರ, ಗಡಿಯಲ್ಲಿ ಉಗ್ರರ ಅಕ್ರಮ ನುಸುಳುವಿಕೆಯಲ್ಲಿ ಪಾಲ್ಗೊಳ್ಳದಂತೆ ಪಾಕಿಸ್ತಾನದ ಮೇಲೆ ಅಮೆರಿಕ ತೀವ್ರ ಒತ್ತಡ ಹೇರುವುದು.

ಎರಡನೇಯದಾಗಿ, 370ನೇ ವಿಧಿ ರದ್ದುಗೊಳಿಸಿದ ಬಳಿಕ ನಿಷೇಧಾಜ್ಞೆ ಹಾಗೂ ಭೀತಿಯಲ್ಲೇ ಇರುವ ಜಮ್ಮು-ಕಾಶ್ಮೀರದಲ್ಲಿ ಸಾಮಾನ್ಯ ಸ್ಥಿತಿ ನಿರ್ಮಾಣ ಮಾಡಲು ಭಾರತ ಮುಂದಾಗಬೇಕು. ಅಲ್ಲದೆ, ಅಲ್ಲಿನ ಜನತೆಯ ಮಾನವ ಹಕ್ಕುಗಳ ರಕ್ಷಣೆ ಬಗ್ಗೆ ಭರವಸೆ, ಗೃಹ ಬಂಧನದಲ್ಲಿರುವ ಇತರ ರಾಜಕೀಯ ಮುಖಂಡರ ಬಿಡುಗಡೆ ಹಾಗೂ ಸಂವಹನ ಮಾಧ್ಯಮಗಳ ಮುಕ್ತ ಸ್ವಾತಂತ್ರ್ಯಕ್ಕೆ ಅನುವಾಗುವಂತೆ ಭಾರತದ ಮನವೊಲಿಸುವುದಾಗಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಭಾರಿ ಮುಖಭಂಗ, ವಹಿಸಿಕೊಂಡು ಮಂಗನಾದ ಚೀನಾ!

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು, ‘ಗಡಿ ರೇಖೆ ಮೂಲಕ ಉಗ್ರರನ್ನು ಭಾರತಕ್ಕೆ ರವಾನಿಸುವ ಕೃತ್ಯವನ್ನು ಪಾಕಿಸ್ತಾನ ನಿಲ್ಲಿಸಬೇಕು. ಅಲ್ಲದೆ, ಈ ಹಿಂದೆ ಭಾರತದ ಮೇಲೆ ದಾಳಿ ಎಸಗಿದ ತನ್ನ ನೆಲದಲ್ಲಿರುವ ಉಗ್ರ ಸಂಘಟನೆಗಳನ್ನು ಪತ್ತೆ ಮಾಡಬೇಕು ಎಂದು ಟ್ರಂಪ್‌ ಅವರು ಪಾಕಿಸ್ತಾನಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ’ ಎಂದು ಹೇಳಿದರು.

ಕಾಶ್ಮೀರದಲ್ಲಿನ ಪ್ರಸ್ತುತ ಸಂದರ್ಭ ದುರುಪಯೋಗಪಡಿಸಿಕೊಂಡು, ಭಾರೀ ಪ್ರಮಾಣದಲ್ಲಿ ಉಗ್ರರನ್ನು ಭಾರತದೊಳಕ್ಕೆ ನುಗ್ಗಿಸಿ 1989ರ ರೀತಿ ಭಾರತದ ಗಡಿಯಲ್ಲಿ ರಾಜಕೀಯ ಪ್ರಭಾವ ಬೀರುವ ಯತ್ನ ನಡೆಸಿದ್ದೆ ಆದಲ್ಲಿ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ಸಂದೇಶ ರವಾನಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗಡೀಪಾರು ಸಂಕಷ್ಟದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ್ ದೇಗುಲದ್ಲಿ ಪ್ರಾರ್ಥನೆ
ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!