ಶೀಘ್ರದಲ್ಲೇ ಪೆಟ್ರೋಲ್, ಡೀಸೆಲ್ ಗಾಡಿಗಳಿಗೆ ಬ್ರೇಕ್?

Published : Nov 13, 2018, 03:27 PM ISTUpdated : Nov 13, 2018, 03:28 PM IST
ಶೀಘ್ರದಲ್ಲೇ ಪೆಟ್ರೋಲ್, ಡೀಸೆಲ್ ಗಾಡಿಗಳಿಗೆ ಬ್ರೇಕ್?

ಸಾರಾಂಶ

ಇಪಿಸಿಎ ಸಮಿತಿ ಅಧ್ಯಕ್ಷ ಭೂರೆ ಲಾಲ್ ತಮ್ಮ ಪತ್ರದಲ್ಲಿ ’ದೆಹಲಿಯ ಹವಾಮಾನದಲ್ಲಿ ಸುಧಾರಣೆಯಾಗುತ್ತಿಲ್ಲ. ಹೀಗಾಗಿ ರಾಷ್ಟ್ರೀಯ ರಾಜಧಾನಿಯಲ್ಲಿ ಕೇವಲ ಸಿಎನ್‌ಜಿ ವಾಹನಗಳಿಗಷ್ಟೇ ಪರವಾನಿಗೆ ನೀಡಬೇಕೆಂದು’ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಇಪಿಸಿಎ ಈ ಕುರಿತಾಗಿ ಮಂಗಳವಾರದಂದು ವಿಭಿನ್ನ ವಿಭಾಗಗಳೊಂದಿಗೆ ಮಾತುಕತೆ ನಡೆಸಲಿದೆ.

ನವದೆಹಲಿ[ನ.13]: ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಕಡಿಮೆಯಾಗದಿದ್ದಲ್ಲಿ ಎಲ್ಲಾ ಪೆಟ್ರೋಲ್- ಡೀಸೆಲ್ ವಾಹನಗಳ ಬ್ಯಾನ್ ಮಾಡುವ ಸಾಧ್ಯತೆಗಳಿವೆ. ವಾಯು ಮಾಲಿನ್ಯ ತಡೆಯಲು ಸುಪ್ರೀಂ ಕೋರ್ಟ್ ರಚಿಸಿರುವ ಇಪಿಸಿಎ ಸಮಿತಿಯ ಅಧ್ಯಕ್ಷ ಭೂರೆ ಲಾಲ್ ಈ ಕುರಿತಾಗಿ ಪತ್ರವೊಂದನ್ನು ಬರೆದು ವಾಯು ಮಾಲಿನ್ಯ ತಡೆಯಲು ಇದನ್ನು ಹೊರತುಪಡಿಸಿ ಬೇರೆ ದಾರಿ ಇಲ್ಲ. ಹೀಗಾಗಿಯೇ ಇಂತಹ ಕಠಿಣ ಹೆಜ್ಜೆ ಇಡಬೆಕಾಗುತ್ತದೆ. ಮಾಲಿನ್ಯ ತಡೆಯಲು ಸುಪ್ರಿಂ ಕೋರ್ಟ್ ರಚಿಸಿರುವ ಈ ಸಮಿತಿಯು ಕೇವಲ ಸಿಎನ್‌ಜಿ ವಾಹನಗಳನ್ನಷ್ಟೇ ಚಲಾಯಿಸುವುದು ಸೂಕ್ತ ಎಂಬ ಸಲಹೆ ನೀಡಿದ್ದಾರೆ.

ಇಪಿಸಿಎ ಸಮಿತಿ ಅಧ್ಯಕ್ಷ ಭೂರೆ ಲಾಲ್ ತಮ್ಮ ಪತ್ರದಲ್ಲಿ ’ದೆಹಲಿಯ ಹವಾಮಾನದಲ್ಲಿ ಸುಧಾರಣೆಯಾಗುತ್ತಿಲ್ಲ. ಹೀಗಾಗಿ ರಾಷ್ಟ್ರೀಯ ರಾಜಧಾನಿಯಲ್ಲಿ ಕೇವಲ ಸಿಎನ್‌ಜಿ ವಾಹನಗಳಿಗಷ್ಟೇ ಪರವಾನಿಗೆ ನೀಡಬೇಕೆಂದು’ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಇಪಿಸಿಎ ಈ ಕುರಿತಾಗಿ ಮಂಗಳವಾರದಂದು ವಿಭಿನ್ನ ವಿಭಾಗಗಳೊಂದಿಗೆ ಮಾತುಕತೆ ನಡೆಸಲಿದೆ.

'ವಾಹನಗಳ ಮೇಲೆ ನಿಯಂತ್ರಣ ಹೇರಲು ಈವರೆಗೂ ದೆಹಲಿಯಲ್ಲಿ ವಾಹನಗಳಿಗೆ ಸ್ಟಿಕರ್ ಲಗತ್ತಿಸುವ ಕೆಲಸ ಆರಂಭವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳನ್ನು ಗುರುತಿಸುವುದು ಕಷ್ಟ. ಇದೇ ಕಾರಣದಿಂದ ಎಲ್ಲಾ ವಾಹನಗಳಲ್ಲಿ ಕೆಲ ಸಮಯದವರೆಗೆ ಬ್ಯಾನ್ ಮಾಡಬೇಕಾಗುತ್ತದೆ' ಎಂದು ಇಪಿಸಿಎ ಸಮಿತಿ ಅಧ್ಯಕ್ಷ ಭೂರೆ ಲಾಲ್ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?