ಅಖಿಲೇಶ್, ರಾಮಗೋಪಾಲ್ ಉಚ್ಛಾಟನೆ ವಾಪಸ್

Published : Dec 31, 2016, 10:22 AM ISTUpdated : Apr 11, 2018, 12:56 PM IST
ಅಖಿಲೇಶ್, ರಾಮಗೋಪಾಲ್ ಉಚ್ಛಾಟನೆ ವಾಪಸ್

ಸಾರಾಂಶ

ಪಕ್ಷದ ಹಿತಾಸಕ್ತಿ ದೃಷ್ಟಿಯಿಂದ ಅಖಿಲೇಶ್ ಹಾಗೂ ರಾಮಗೋಪಾಲ್ ಯಾದವ್ ಅವರನ್ನು 6 ವರ್ಷಗಳ ಅವಧಿಗೆ ಪಕ್ಷದಿಂದ ಮುಲಾಯಂ ಸಿಂಗ್ ನಿನ್ನೆ ಉಚ್ಛಾಟಿಸಿದ್ದರು.

ಲಕ್ನೋ (ಡಿ.31): ಉತ್ತರ ಪ್ರದೇಶ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಉಚ್ಛಾಟನೆ ಅಧ್ಯಾಯವು ಇಂದು ಹೊಸ ತಿರುವನ್ನು ಪಡೆದುಕೊಂಡಿದೆ. ಪಕ್ಷದಿಂದ ಹೊರಹಾಕಿದ 24 ಗಂಟೆಯೊಳಗೆ ಅಖಿಲೇಶ್ ಯಾದವ್ ಹಾಗೂ ರಾಮಗೋಪಾಲ್ ಯಾದವ್ ಅವರ ಉಚ್ಛಾಟನೆಯನ್ನು ಪಕ್ಷವು ಹಿಂಪಡೆದಿದೆ.

ಪಕ್ಷದ ವರಿಷ್ಠ ಮುಲಾಯಮ್ ಸಿಂಗ್ ಯಾದವ್ ಆದೇಶದ ಮೇರೆಗೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಪ್ರಧಾನ ಕಾರ್ಯದರ್ಶಿ ರಾಮಗೋಪಾಲ್ ಯಾದವ್ ಅವರ ಉಚ್ಛಾಟನೆ ಆದೇಶವನ್ನು ತಕ್ಷಣದಿಂದ ವಾಪಾಸು ಪಡೆಯಲಾಗಿದೆ ಎಂದು  ಸಮಾಜವಾದಿ ಪಕ್ಷದ ಉತ್ತರ ಪ್ರದೇಶ ರಾಜ್ಯಾಧ್ಯಕ್ಷ ಶಿವಪಾಲ್ ಯಾದವ್ ಹೇಳಿದ್ದಾರೆ.

ಪಕ್ಷದ ಹಿತಾಸಕ್ತಿ ದೃಷ್ಟಿಯಿಂದ ಅಖಿಲೇಶ್ ಹಾಗೂ ರಾಮಗೋಪಾಲ್ ಯಾದವ್ ಅವರನ್ನು 6 ವರ್ಷಗಳ ಅವಧಿಗೆ ಪಕ್ಷದಿಂದ ಮುಲಾಯಂ ಸಿಂಗ್ ನಿನ್ನೆ ಉಚ್ಛಾಟಿಸಿದ್ದರು.

ಪಕ್ಷದೊಳಗಿದ್ದ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲಾಗಿದೆ. ಮುಂದಿನ ಚುನಾವಣೆಯಲ್ಲಿ ಕೋಮುಶಕ್ತಿಗಳನ್ನು ನಾವು ಒಗ್ಗಟ್ಟಾಗಿ ಎದುಸರಿಲಿದ್ದೇವೆ, ಹಾಗೂ ಮುಂದಿನ ಬಾರಿಯೂ ಸರ್ಕಾರ ರಚಿಸಲಿದ್ದೇವೆ, ಎಂದು ಶಿವಪಾಲ್ ಯಾದವ್  ಸಂದರ್ಭದಲ್ಲಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಂದ್ಯದ ವೇಳೆ ಕಬಡ್ಡಿ ಪಟು ಹತ್ಯೆ ಪ್ರಕರಣ, ಆರೋಪಿಯನ್ನು ಎನ್‌ಕೌಂಟರ್ ಮಾಡಿ ಮುಗಿಸಿದ ಪೊಲೀಸ್
Oil Scam: 1996ರ ಕ್ರಿಕೆಟ್‌ ವಿಶ್ವಕಪ್‌ ವಿಜೇತ ನಾಯಕ ಅರ್ಜುನ್‌ ರಣತುಂಗಾ ಬಂಧನ?