
ನವದೆಹಲಿ (ಡಿ.31): ಭೂಸೇನೆಯ ನೂತನ ಮುಖ್ಯಸ್ಥರಾಗಿ ಲೆ| ಜ| ಬಿಪಿನ್ ರಾವತ್ ಇಂದು ಲೆ| ಜ| ದಲ್ಬೀರ್ ಸಿಂಗ್ ಅವರಿಂದ ಅಧಿಕಾರ ಸ್ವೀಕರಿಸಿದ್ದಾರೆ.
ಅಧಿಕಾರ ಹಸ್ತಾಂತರಿಸುವ ಮೊದಲು ನಿವೃತ್ತಿ ಹೊಂದಲಿರುವ ಲೆ| ಜ| ದಲ್ಬೀರ್ ಸಿಂಗ್ ಹಾಗೂ ವಾಯುಪಡೆ ಮುಖ್ಯಸ್ಥ ಅನುಪ್ ರಾಹಾ ಇಂಡಿಯಾ ಗೇಟ್’ನಲ್ಲಿರುವ ಅಮರ್ ಜವಾನ್ ಜ್ಯೋತಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು.
ದೇಶದ ಗೌರವವನ್ನು ಕಾಪಾಡಲು ತ್ಯಾಗ-ಬಲಿದಾನಗಳನ್ನು ನೀಡಿದ ಯೋಧರಿಗೆ ನನ್ನ ನಮನಗಳು, ಎಂದು ಲೆ| ಜ| ದಲ್ಬೀರ್ ಸಿಂಗ್ ಹೇಳಿದರು.
ಏಕ ಶ್ರೇಣಿ ಏಕ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತಂದಿರುವುದಕ್ಕೆ ಪ್ರಧಾನಿ ಮೋದಿ ಹಾಗೂ ಸರ್ಕಾರಕ್ಕೆ ಲೆ| ಜ| ದಲ್ಬೀರ್ ಸಿಂಗ್ ಧನ್ಯವಾದ ಸಲ್ಲಿಸಿದ್ದಾರೆ.
ಭಾರತೀಯ ಸೇನೆಯು ಆಂತರೀಕ ಹಾಗೂ ಬಾಹ್ಯ ಸವಾಲಗಳೆನ್ನದುರಿಸಲು ಸಮರ್ಥವಾಗಿದೆ ಎಂದಿರುವ ಅವರು ಮಾತುಗಳಿಗಿಂತ ಕೃತಿಯೇ ಮುಖ್ಯವಾಗಿರಬೇಕೆಂದು ನಂಬಿದವನು ನಾನು, ಎಂದು ಹೇಳಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.