
ನವದೆಹಲಿ (ಮೇ.23): ಸುಕೋಯ್-30 ಎಂಕೆಐ ಯುದ್ಧ ವಿಮಾನ ಅಸ್ಸಾಂನ ತೇಜ್ಪುರದಲ್ಲಿ ರಾಡಾರ್ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿದೆ.
ಅಸ್ಸಾಂನ ತೇಜಪುರದಲ್ಲಿ ಎಂದಿನಂತೆ ತರಬೇತಿ ನೀಡುತ್ತಿರುವಾಗ ರಾಡಾರ್ ಸಂಪರ್ಕ ಕಡಿದು ಹೋಗಿ ನಾಪತ್ತೆಯಾಗಿದೆ. ವಿಮಾನದಲ್ಲಿ ಇಬ್ಬರು ಪೈಲಟ್’ಗಳಿದ್ದರು ಎಂದು ಐಎಎಫ್ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಬೆಳಿಗ್ಗೆ ಸುಮಾರು 9.30 ರ ಸುಮಾರಿಗೆ ಅರುಣಾಚಲ ಪ್ರದೇಶದ ದೌಲಸಾಂಗ್ ಪ್ರದೇಶದಿಂದ ವಿಮಾನ ನಾಪತ್ತಯಾಗಿತ್ತು. 11.30 ಸುಮಾರಿಗೆ ಅಸ್ಸಾಂನ ತೇಜ್ಪುರದಲ್ಲಿ ಸಂಪರ್ಕಕ್ಕೆ ಬಂದಿತ್ತು. ಇದು ಚೀನಾ ಗಡಿಯಿಂದ 172 ಕಿಮೀ ದೂರದಲ್ಲಿದೆ. ಇದುವರೆಗೂ ವಿಮಾನ ಪತ್ತೆಯಾಗದಿದ್ದು, ಕಾರ್ಯಾಚರಣೆ ಮುಂದುವರೆದಿದೆ.
ಸಾಂದರ್ಭಿಕ ಚಿತ್ರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.