ತಡರಾತ್ರಿಯಲ್ಲಿ ಸಚಿವರ ಸಭೆ ಕರೆದ ಎಐಎಡಿಎಂಕೆ: ಸಚಿವರ ಸಭೆಯಲ್ಲಿ ನಡೆದಿದ್ದೇನು?

Published : Oct 09, 2016, 03:06 AM ISTUpdated : Apr 11, 2018, 01:07 PM IST
ತಡರಾತ್ರಿಯಲ್ಲಿ ಸಚಿವರ ಸಭೆ ಕರೆದ ಎಐಎಡಿಎಂಕೆ: ಸಚಿವರ ಸಭೆಯಲ್ಲಿ ನಡೆದಿದ್ದೇನು?

ಸಾರಾಂಶ

ಚೆನ್ನೈ(ಅ.09): ತಮಿಳುನಾಡು ಸಿಎಂ ಜಯಲಲಿತಾ ಅವರ ಆರೋಗ್ಯದಲ್ಲಿ ಏರುಪೇರಾಗಿ  ದಿನಗಳೇ ಕಳೆದಿದೆ. ಆದರೆ ಈವರೆಗೂ ಸಂಪೂರ್ಣವಾಗಿ ಅಮ್ಮ ಗುಣಮುಖರಾಗಿಲ್ಲ. ಇನ್ನೊಂದೆಡೆ ರಾಜ್ಯದ ಸಿಎಂ ಸ್ಥಾನ ಅಲಂಕರಿಸಿರುವ ಜಯಾ ಬಳಿ ಎಲ್ಲಾ ಪ್ರಮುಖ ಖಾತೆಗಳಿದೆ. ಅರಣ್ಯ, ಗೃಹ, ಪೊಲೀಸ್, ಸಾಮಾನ್ಯ ಆಡಳಿತ ಹಾಗೂ ಆಡಳಿತ ಸುಧಾರಣೆ ಹೀಗೆ ಎಲ್ಲವೂ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಪ್ರಮುಖ ಖಾತೆಗಳಿದೆ. ಇತ್ತ ಅಮ್ಮ ಆಸ್ಪತ್ರೆಯ ಪಾಲಾಗಿ 17 ದಿನಗಳೇ ಕಳೆದಿದ್ದು, ಯಾವಾಗ ಅವರು ಮನೆಗೆ ಮರುಳಿ ಮೊದಲಿನಂತೆ ಆಗ್ತಾರೋ ಎಂದು ಅವರ ಅಭಿಮಾನಿಗಳು ಮತ್ತು ಪಕ್ಷದ ಮುಖಂಡರು ಕಾಯುತ್ತಿದ್ದಾರೆ. ಆದ್ರೆ ಅಚ್ಚರಿ ಬೆಳವಣಿಗೆಯೆಂಬಂತೆ ನಿನ್ನೆ ತಡರಾತ್ರಿ ಎಐಎಡಿಎಂಕೆ ಪಕ್ಷವು ಸಚಿವರ ಸಭೆಯನ್ನು ಕರೆದಿತ್ತು. ಚೆನ್ನೈನ ಎಐಎಡಿಎಂಕೆ ಕಚೇರಿಯಲ್ಲಿ ನಡೆದ ಸಭೆಗೆ ಎಲ್ಲ 32 ಸಚಿವರು ಆಗಮಿಸಿದ್ದು, ಓ.ಪನ್ನೀರ್ ಸೆಲ್ವಂ ಇದರ ನೇತೃತ್ವವನ್ನು ವಹಿಸಿಕೊಂಡಿದ್ದರು.

ಚೆನ್ನೈ(ಅ.09): ತಮಿಳುನಾಡಿನ ಸಿಎಂ ಆಸ್ಪತ್ರೆಗೆ ದಾಖಲಾಗಿ ದಿನಗಳೇ ಕಳೆಯುತ್ತಿದೆ. ಆದರೆ ಜಯಾ ಸಚಿವ ಸಂಪುಟದ ಮಂತ್ರಿಗಳು ಮಾತ್ರ  ಅವರ ಮೇಲೆ ಯಾವುದೇ ಕಳಂಕ ಬರದಂತೆ,  ಜನತೆಗೆ ಯಾವುದೇ ತಪ್ಪು ಸಂದೇಶ ಹೋಗದಂತೆ ಪಕ್ಷದ ವರ್ಚಿಸ್ಸಿಗೂ  ತೊಂದರೆಯಾಗದಂತೆ ನೋಡಿಕೊಳ್ಳಲು ನಾನಾ ಕಸರತ್ತು ಮಾಡುತ್ತಿದ್ದಾರೆ.

ತಡರಾತ್ರಿಯಲ್ಲಿ ಸಚಿವರ ಸಭೆ ಕರೆದ ಎಐಎಡಿಎಂಕೆ: ಓ.ಪನ್ನೀರ್ ಸೆಲ್ವಂ ನೇತೃತ್ವದಲ್ಲಿ ನಡೆದ ಮಹತ್ವದ ಸಭೆ

ತಮಿಳುನಾಡು ಸಿಎಂ ಜಯಲಲಿತಾ ಅವರ ಆರೋಗ್ಯದಲ್ಲಿ ಏರುಪೇರಾಗಿ  ದಿನಗಳೇ ಕಳೆದಿದೆ. ಆದರೆ ಈವರೆಗೂ ಸಂಪೂರ್ಣವಾಗಿ ಅಮ್ಮ ಗುಣಮುಖರಾಗಿಲ್ಲ. ಇನ್ನೊಂದೆಡೆ ರಾಜ್ಯದ ಸಿಎಂ ಸ್ಥಾನ ಅಲಂಕರಿಸಿರುವ ಜಯಾ ಬಳಿ ಎಲ್ಲಾ ಪ್ರಮುಖ ಖಾತೆಗಳಿದೆ. ಅರಣ್ಯ, ಗೃಹ, ಪೊಲೀಸ್, ಸಾಮಾನ್ಯ ಆಡಳಿತ ಹಾಗೂ ಆಡಳಿತ ಸುಧಾರಣೆ ಹೀಗೆ ಎಲ್ಲವೂ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಪ್ರಮುಖ ಖಾತೆಗಳಿದೆ. ಇತ್ತ ಅಮ್ಮ ಆಸ್ಪತ್ರೆಯ ಪಾಲಾಗಿ 17 ದಿನಗಳೇ ಕಳೆದಿದ್ದು, ಯಾವಾಗ ಅವರು ಮನೆಗೆ ಮರುಳಿ ಮೊದಲಿನಂತೆ ಆಗ್ತಾರೋ ಎಂದು ಅವರ ಅಭಿಮಾನಿಗಳು ಮತ್ತು ಪಕ್ಷದ ಮುಖಂಡರು ಕಾಯುತ್ತಿದ್ದಾರೆ. ಆದ್ರೆ ಅಚ್ಚರಿ ಬೆಳವಣಿಗೆಯೆಂಬಂತೆ ನಿನ್ನೆ ತಡರಾತ್ರಿ ಎಐಎಡಿಎಂಕೆ ಪಕ್ಷವು ಸಚಿವರ ಸಭೆಯನ್ನು ಕರೆದಿತ್ತು. ಚೆನ್ನೈನ ಎಐಎಡಿಎಂಕೆ ಕಚೇರಿಯಲ್ಲಿ ನಡೆದ ಸಭೆಗೆ ಎಲ್ಲ 32 ಸಚಿವರು ಆಗಮಿಸಿದ್ದು, ಓ.ಪನ್ನೀರ್ ಸೆಲ್ವಂ ಇದರ ನೇತೃತ್ವವನ್ನು ವಹಿಸಿಕೊಂಡಿದ್ದರು.

ಸಚಿವರ ಸಭೆಯಲ್ಲಿ ನಡೆದಿದ್ದೇನು?

ಸಭೆಯ ಆರಂಭದಲ್ಲೇ ಎಡಪ್ಪಾಡಿ ಪಳನೀಸ್ವಾಮಿ, ಸಿಎಂ ಬಳಿಯಿರುವ ಖಾತೆಗಳನ್ನು ಹಂಚಿಕೆ ಮಾಡೋಣ ಎಂದರು. ಆದರೆ ಸಭೆಗೆ ಆಗಮಿಸಿದ್ದ, ಸಚಿವೆ ವಲರ್​ಮತಿ ಮಾತ್ರ ಸಿಎಂ ಬಳಿಯಿರುವ ಖಾತೆಯನ್ನು ಈಗ ಹಂಚಿಕೆ ಮಾಡಿದರೆ ರಾಜ್ಯದ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದಿದ್ದಾರೆ. ಹೀಗಾಗಿ ಸಭೆಯಲ್ಲಿ ಸಿಎಂ ಬಳಿಯಿರುವ ಗೃಹ, ಪೊಲೀಸ್, ಸಾಮಾನ್ಯ ಆಡಳಿತ ಮತ್ತು ಸುಧಾರಣೆ ಹಾಗೂ ಅರಣ್ಯ ಇಲಾಖೆಗಳು ಜಯಲಲಿತಾ ಬಳಿಯಲ್ಲಿಯೇ ಇರುವುದು ಸೂಕ್ತ ಎಂಬ ತೀರ್ಮಾನಕ್ಕೆ ಎಲ್ಲರೂ ಬಂದಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ತಮಿಳುನಾಡಿನ ಸಿಎಂ ಬಳಿಯಿರುವ ಖಾತೆಗಳನ್ನು ಈಗ ಸದ್ಯಕ್ಕೆ ಹಂಚಿಕೆ ಮಾಡಿದ್ರೆ ಏನೇನು ಆಗುತ್ತೆ ಎಂದು ಲೆಕ್ಕಚಾರ ಹಾಕಿರುವ ಸಚಿವರು, ಸದ್ಯಕ್ಕೆ ಏನನ್ನೂ ಮಾಡುವುದು ಬೇಡ ಎಂಬ ಆಲೋಚನೆ ಬಂದಿದ್ದಾರೆ. ಮತ್ತೊಂದೆಡೆ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರಯುವ ಸಿಎಂ ಜಯಲಲಿತಾರನ್ನು ಹೆಚ್ಚಿನ  ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದೊಯ್ಯುವ ಸಾಧ್ಯತೆಯಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

HD Kumaraswamy birthday: ಎಚ್‌ಡಿಕೆಗೆ  ₹3.50 ಲಕ್ಷದ 25 ಗ್ರಾಂನ ಚಿನ್ನದ ಸರ ಕೊಟ್ಟ ಅಭಿಮಾನಿ!
ಆಜಾನ್‌ ಚರ್ಚೆ ವೇಳೆ ದೀಪಾವಳಿ ಪಟಾಕಿ ವಿಚಾರ ಎತ್ತಿದ ಖಂಡ್ರೆ Congress-BJP ನಡುವೆ ಗದ್ದಲ