ಗಾಯಕ್ವಾಡ್'ಗೆ ಮುಂದುವರಿದ ವಿಮಾನ 'ಯಾತನೆ'; 7ನೇ ಬಾರಿಯೂ ಟಿಕೆಟ್ ಬುಕ್ ಮಾಡಲು ವಿಫಲ

Published : Apr 07, 2017, 02:08 AM ISTUpdated : Apr 11, 2018, 12:48 PM IST
ಗಾಯಕ್ವಾಡ್'ಗೆ ಮುಂದುವರಿದ ವಿಮಾನ 'ಯಾತನೆ'; 7ನೇ ಬಾರಿಯೂ ಟಿಕೆಟ್ ಬುಕ್ ಮಾಡಲು ವಿಫಲ

ಸಾರಾಂಶ

ಏರ್ ಇಂಡಿಯಾ ಅಧಿಕಾರಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಆರೋಪದಲ್ಲಿ ಗಾಯಕ್ವಾಡ್, ವಿಮಾನಯಾನ ಸಂಸ್ಥೆಗಳಿಂದ ನಿಷೇಧಕ್ಕೊಳಗಾಗಿದ್ದಾರೆ.

ನವದೆಹಲಿ (ಏ.07):  ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್’ ಅವರ ಟಿಕೆಟ್ ಕಾಯ್ದಿರಿಸುವ ಪ್ರಯತ್ನವನ್ನು ಏರ್ ಇಂಡಿಯಾ ಮತ್ತೊಮ್ಮೆ ವಿಫಲಗೊಳಿಸಿದೆ.

ಏರ್ ಇಂಡಿಯಾ ಅಧಿಕಾರಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಆರೋಪದಲ್ಲಿ ಗಾಯಕ್ವಾಡ್, ವಿಮಾನಯಾನ ಸಂಸ್ಥೆಗಳಿಂದ ನಿಷೇಧಕ್ಕೊಳಗಾಗಿದ್ದಾರೆ. ನಿಷೇಧಕ್ಕೊಳಗಾದ ಬಳಿಕ ಟಿಕೆಟ್ ಬುಕ್ ಮಾಡುವ 7ನೇ ವಿಫಲ ಪ್ರಯತ್ನವಾಗಿದೆ.

ಇಂದು ಬೆಳಗ್ಗೆ 5 ಗಂಟೆಗೆ ದೆಹಲಿಯಿಂದ ಮುಂಬೈ ಹಾಗೂ ಮುಂಬೈಯಿಂದ ದೆಹಲಿಗೆ ರವೀಂದ್ರ ಗಾಯಕ್ವಾಡ್ ಹೆಸರಿನಲ್ಲಿ ಟಿಕೆಟ್ ಕಾಯ್ದಿರಿಸಲು ಪ್ರಯತ್ನಿಸಿದ್ದಾರೆ, ಆದರೆ ನಮ್ಮ ಟ್ರಾಕ್ರರ್ ವ್ಯವಸ್ಥೆ ಆ ಪ್ರಯತ್ನವನ್ನು ವಿಫಲಗೊಳಿಸಿದೆಯೆಂದು ಎಂದು ಮೂಲಗಳು ತಿಳಿಸಿವೆ.

ನಿಷೇಧಕ್ಕೊಳಗಾದ ಬಳಿಕ ಇಂಡಿಗೋ ಹಾಗೂ  ಸ್ಪೈಸ್ ಜೆಟ್’ನಲ್ಲೂ ಟಿಕೆಟ್ ಕಾಯ್ದಿರಿಸಲು ಗಾಯಕ್ವಾಡ್ ಈ ಹಿಂದೆ ವಿಫಲ ಯತ್ನ ನಡೆಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲೋಕಾಯುಕ್ತ ದಾಳಿ: ₹50 ಸಾವಿರ ಹಣ ಟಾಯ್ಲಟ್ ಕಮೋಡ್‌ನಲ್ಲಿ ಹಾಕಿ ಫ್ಲಶ್ ಮಾಡಿದ ಕೃಷಿ ಅಧಿಕಾರಿ!
ಒಜಿ ನಿರ್ದೇಶಕನಿಗೆ 3 ಕೋಟಿ ರೂ ಕಾರು ಗಿಫ್ಟ್ ಕೊಟ್ಟ ಪವನ್ ಕಲ್ಯಾಣ್, ಭಾವುಕರಾದ್ ಸುಜೀತ್