ಎಂಸಿಡಿ ಚುನಾವಣೆ: ಐವರು ಕೌನ್ಸಲರ್ ಸೇರಿ 21 ಮಂದಿ ಬಿಜೆಪಿ ಸದಸ್ಯರ ಉಚ್ಚಾಟನೆ

Published : Apr 15, 2017, 04:56 PM ISTUpdated : Apr 11, 2018, 12:41 PM IST
ಎಂಸಿಡಿ ಚುನಾವಣೆ: ಐವರು ಕೌನ್ಸಲರ್ ಸೇರಿ 21 ಮಂದಿ ಬಿಜೆಪಿ ಸದಸ್ಯರ ಉಚ್ಚಾಟನೆ

ಸಾರಾಂಶ

ಏ.23 ರಂದು ನಡೆಯಲಿರುವ ಎಂಸಿಡಿ (ಮುನಿಸಿಪಲ್ ಕಾರ್ಪೋರೇಶನ್ ಆಫ್ ಡೆಲ್ಲಿ) ಚುನಾವಣಾ ಹಿನ್ನೆಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿದ್ದಾರೆನ್ನುವ ಆರೋಪದಡಿ ಐವರು ಹಾಲಿ ಕೌನ್ಸಲರ್ ಸೇರಿದಂತೆ 21 ಮಂದಿ ಸದಸ್ಯರನ್ನು ದೆಹಲಿ ಬಿಜೆಪಿ ಇಂದು ಉಚ್ಚಾಟಿಸಿದೆ.

ನವದೆಹಲಿ (ಏ.15): ಏ.23 ರಂದು ನಡೆಯಲಿರುವ ಎಂಸಿಡಿ (ಮುನಿಸಿಪಲ್ ಕಾರ್ಪೋರೇಶನ್ ಆಫ್ ಡೆಲ್ಲಿ) ಚುನಾವಣಾ ಹಿನ್ನೆಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿದ್ದಾರೆನ್ನುವ ಆರೋಪದಡಿ ಐವರು ಹಾಲಿ ಕೌನ್ಸಲರ್ ಸೇರಿದಂತೆ 21 ಮಂದಿ ಸದಸ್ಯರನ್ನು ದೆಹಲಿ ಬಿಜೆಪಿ ಇಂದು ಉಚ್ಚಾಟಿಸಿದೆ.

ರಾನ್ ಹೋಲಾ ಕೌನ್ಸಲರ್ ಡಾ. ಪಂಕಜ್ ಸಿಂಗ್, ನಾವಡಾ ಕೌನ್ಸಲರ್ ಕೃಷ್ಣ ಗೆಹಲಾಟ್, ಸಾಗರ್ ಪುರ್ (ವೆಸ್ಟ್) ಕೌನ್ಸಲರ್ ಪ್ರವೀಣ್ ರಜಪೂತ್, ನ್ಯೂ ಅಶೋಕ್ ನಗರದಿಂದ ಸಂಧ್ಯಾ ವರ್ಮಾರನ್ನು ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ಹೇಳಿದೆ.

ಅದೇ ರೀತಿ ಬಿಜೆಪಿ ಮುಖಂಡ ಹಾಗೂ ದೆಹಲಿ ಯೂನಿವರ್ಸಿಟಿ ಸ್ಟುಡೆಂಟ್ ಯೂನಿಯನ್ ಮಾಜಿ ಅಧ್ಯಕ್ಷ ಮನೋಜ್ ಚೌಧರಿಯನ್ನೂ ಸಹ ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಉಚ್ಚಾಟಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿ ‘ಇಯರ್‌ರಿಂಗ್‌’ ಸೃಷ್ಟಿಸಿದ ಕುತೂಹಲ!
ಸುಧಾಮೂರ್ತಿ ಡೀಪ್‌ಫೇಕ್‌ ವಿಡಿಯೋ ವೈರಲ್‌ : ನಂಬಿ ಮೋಸಹೋಗದಂತೆ ವಿನಂತಿ