ಉತ್ತರ ಪ್ರದೇಶದಲ್ಲಿರಬೇಕಾದರೆ ಯೋಗಿ ಯೋಗಿ ಜಪಿಸಬೇಕು: ಮೀರಠ್'ನಲ್ಲಿ ಹೋರ್ಡಿಂಗ್ ಬರಹ

Published : Apr 15, 2017, 04:50 PM ISTUpdated : Apr 11, 2018, 12:53 PM IST
ಉತ್ತರ ಪ್ರದೇಶದಲ್ಲಿರಬೇಕಾದರೆ ಯೋಗಿ ಯೋಗಿ ಜಪಿಸಬೇಕು: ಮೀರಠ್'ನಲ್ಲಿ ಹೋರ್ಡಿಂಗ್ ಬರಹ

ಸಾರಾಂಶ

ಹೋರ್ಡಿಂಗ್’ನಲ್ಲಿ ಯುವ ವಾಹಿನಿಯ ಜಿಲ್ಲಾಧ್ಯಕ್ಷ ನೀರಜ್ ಕುಮಾರ್ ಪಾಂಚಾಲಿ ಜತೆ ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಅವರ ಫೋಟೋಗಳನ್ನು ಕೂಡಾ ಹಾಕಲಾಗಿದೆ.

ಮೀರಠ್ (ಏ. 15): ಉತ್ತರ ಪ್ರದೇಶದಲ್ಲಿ ಜೀವಿಸಬೇಕಾದರೆ ‘ಯೋಗಿ ಯೋಗಿ’ ಜಪಿಸಬೇಕು ಎಂದು ಹೇಳಿರುವ ಹೋರ್ಡಿಂಗ್’ಗಳು ಮೀರಠ್ ಜಿಲ್ಲೆಯಲ್ಲಿ ಕಾಣಿಸಿಕೊಂಡಿವೆಯೆಂಬ ಆಘಾತಕಾರಿ ಸುದ್ದಿ ವರದಿಯಾಗಿದೆ. ಯೋಗಿ ಆದಿತ್ಯನಾಥ್ ಸ್ಥಾಪಿಸಿರುವ ಹಿಂದೂ ಯುವವಾಹಿನಿಯ ಜಿಲ್ಲಾ ಘಟಕವು ಈ ಹೋರ್ಡಿಂಗ್’ಗಳನ್ನು ಹಾಕಿದೆಯೆನ್ನಲಾಗಿದೆ.

ಬೆಚ್ಚಿಬೀಳಿಸುವ ಸಂಗತಿಯೆಂದರೆ ಈ ಹೋರ್ಡಿಂಗ್’ಗಳನ್ನು ಹಿರಿಯ ಸರ್ಕಾರಿ ಅಧಿಕಾರಿ, ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ನಿವಾಸದ ಬಳಿಯೇ ಹಾಕಲಾಗಿದೆ ಎಂಉ ಪಿಟಿಐ ವರದಿ ಮಾಡಿದೆ.

ಹೋರ್ಡಿಂಗ್’ನಲ್ಲಿ ಯುವ ವಾಹಿನಿಯ ಜಿಲ್ಲಾಧ್ಯಕ್ಷ ನೀರಜ್ ಕುಮಾರ್ ಪಾಂಚಾಲಿ ಜತೆ ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಅವರ ಫೋಟೋಗಳನ್ನು ಕೂಡಾ ಹಾಕಲಾಗಿದೆ.

ಹೋರ್ಡಿಂಗ್ ಹಾಕಿರುವ ಕುರಿತು ಸ್ಥಳೀಯ ಗುಪ್ತಚರ ಇಲಾಖೆಯಿಂದ ವರದಿ ಕೇಳಿದ್ದೇನೆಂದು  ಪೊಲೀಸ್ ವರಿಷ್ಠಾಧಿಕಾರಿ ಪಿಟಿಐಗೆ ತಿಳಿಸಿದ್ದಾರೆ. ವರದಿ ಬಂದ ಬಳಿಕ  ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದೆಂದು ಅವರು ಹೇಳಿದ್ದಾರೆ.

ಈ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಹಿಂದೂ ಯುವವಾಹಿನಿಯ ರಾಜ್ಯ ನಾಯಕ ನಾಗೇಂದ್ರ ಪ್ರತಾಪ್ ಸಿಂಗ್, ಸಂಘಟನೆಯಿಂದ ವಜಾಗೊಳಿಸಲ್ಪಟ್ಟಿರುವ ಜಿಲ್ಲಾ ನಾಯಕನ ಕುಕೃತ್ಯವಾಗಿದ್ದು, ಸಂಘಟನೆ ಹೆಸರಿಗೆ ಮಸಿ ಬಳಿಯಲು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿ ‘ಇಯರ್‌ರಿಂಗ್‌’ ಸೃಷ್ಟಿಸಿದ ಕುತೂಹಲ!
ಸುಧಾಮೂರ್ತಿ ಡೀಪ್‌ಫೇಕ್‌ ವಿಡಿಯೋ ವೈರಲ್‌ : ನಂಬಿ ಮೋಸಹೋಗದಂತೆ ವಿನಂತಿ