ಚೂಡಿದಾರ ಧರಿಸಿ ಪರಾರಿಯಾಗಲು ಯತ್ನಿಸಿದ ಅಗಸ್ಟಾ ವೆಸ್ಟ್‌ಲ್ಯಾಂಡ್ ದಲ್ಲಾಳಿ!

Published : Dec 06, 2018, 12:36 PM ISTUpdated : Dec 06, 2018, 12:41 PM IST
ಚೂಡಿದಾರ ಧರಿಸಿ ಪರಾರಿಯಾಗಲು ಯತ್ನಿಸಿದ ಅಗಸ್ಟಾ ವೆಸ್ಟ್‌ಲ್ಯಾಂಡ್ ದಲ್ಲಾಳಿ!

ಸಾರಾಂಶ

ಅಗಸ್ಟಾವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಹಗರಣದ ಮಧ್ಯವರ್ತಿ ಕ್ರಿಸ್ಟಿಯನ್‌ ಮಿಶೆಲ್‌ನನ್ನು ಗಡೀಪಾರಾದ ಮಾರನೇ ದಿವಸವೇ ದಿಲ್ಲಿ ನ್ಯಾಯಾಲಯವು 5 ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಿದೆ. ಹೀಗಿರುವಾಗ ಈ ಮಧ್ಯವರ್ತಿ ಖರೀದಿಯಲ್ಲಿ ಪಾಲುದಾರರಾದ ದೊಡ್ಡವರ ಹೆಸರನ್ನು ಬಾಯಿ ಬಿಡುತ್ತಾರಾ ಎಂಬ ಕುತೂಹಲ ಮನೆ ಮಾಡಿದೆ.

ನವದೆಹಲಿ[ಡಿ.06]: ಸುಮಾರು 3,600 ಕೋಟಿ ರು. ಮೌಲ್ಯದ ಅಗಸ್ಟಾವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಹಗರಣದ ಮಧ್ಯವರ್ತಿ ಕ್ರಿಸ್ಟಿಯನ್‌ ಮಿಶೆಲ್‌ನನ್ನು ಗಡೀಪಾರಾದ ಮಾರನೇ ದಿವಸವೇ ದಿಲ್ಲಿ ನ್ಯಾಯಾಲಯವು 5 ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಿದೆ. ವಿಚಾರಣೆ ವೇಳೆ ‘ದೊಡ್ಡವರ’ ಹೆಸರುಗಳನ್ನೇನಾದರೂ ಮಿಶೆಲ್‌ ಬಾಯಿಬಿಡಲಿದ್ದಾನಾ ಎಂಬುದು ಕುತೂಹಲಕಾರಿಯಾಗಿದೆ.

ಬ್ರಿಟನ್‌ ನಾಗರಿಕನಾದ ಮಿಶೆಲ್‌ನನ್ನು ದುಬೈನಿಂದ ಮಂಗಳವಾರ ರಾತ್ರಿ ಗಡೀಪಾರು ಮಾಡಿ ದಿಲ್ಲಿಗೆ ಕರೆತರಲಾಗಿತ್ತು. ಬುಧವಾರ ಸಂಜೆ ಆತನನ್ನು ಸಿಬಿಐ, ವಿಶೇಷ ಸಿಬಿಐ ನ್ಯಾಯಾಧೀಶ ಅರವಿಂದ ಕುಮಾರ್‌ ಅವರ ಮುಂದೆ ಹಾಜರು ಮಾಡಿತು. ಈ ವೇಳೆ 14 ದಿನ ತನ್ನ ವಶಕ್ಕೆ ನೀಡುವಂತೆ ಸಿಬಿಐ ಕೇಳಿತಾದರೂ 5 ದಿನಗಳ ಅನುಮತಿ ಮಾತ್ರ ದೊರಕಿತು.

ಇದನ್ನೂ ಓದಿ:ಭಾರತಕ್ಕೆ ಬೇಕಾಗಿದ್ದ ವಂಚಕನ ಗಡಿಪಾರಿಗೆ ದುಬೈ ನಿರ್ಧಾರ!

ವಶಕ್ಕೆ ಪಡೆಯಲು ಇ.ಡಿ. ಯತ್ನ:

ಈ ನಡುವೆ, ಜಾರಿ ನಿರ್ದೇಶನಾಲಯ (ಇ.ಡಿ.) ಕೂಡ ಮಿಶೆಲ್‌ನನ್ನು ತನ್ನ ವಶಕ್ಕೆ ಪಡೆಯಲು ಯತ್ನಿಸಲಿದೆ. ನಕಲಿ ಕಂಪನಿಗಳನ್ನು ಸೃಷ್ಟಿಸಿ ಲಂಚದ ಹಣದ ಹರಿವನ್ನು ಈತ ಮಾಡಿದ್ದನೇ ಎಂದು ತಿಳಿದು ಹೆಚ್ಚುವರಿ ಆರೋಪಪಟ್ಟಿದಾಖಲಿಸಲು ಇ.ಡಿ. ತೀರ್ಮಾನಿಸಿದೆ.

ಇದನ್ನೂ ಓದಿ: ಮೋದಿ ಬೇಟೆ ಯಶಸ್ವಿ: ಭಾರತಕ್ಕೆ ಮೈಕೆಲ್ ಬರೋದು ಗ್ಯಾರಂಟೀ!

ಮಿಶೆಲ್‌ ಪರ ವಕೀಲ ಕಾಂಗ್ರೆಸ್ಸಿಗ!

ನವದೆಹಲಿ: ಅಗಸ್ಟಾಹಗರಣದ ಮಧ್ಯವರ್ತಿ ಕ್ರಿಸ್ಟಿಯನ್‌ ಮಿಶೆಲ್‌ ಪರ ಯುವ ಕಾಂಗ್ರೆಸ್‌ ಕಾನೂನು ಘಟಕದ ಉಸ್ತುವಾರಿ ಆಲ್ಜೋ ಕೆ. ಜೋಸೆಫ್‌ ವಕಾಲತ್ತು ವಹಿಸಿದ್ದಾರೆ. ಈ ಪ್ರಕರಣದಲ್ಲಿ ಕಾಂಗ್ರೆಸ್ಸಿಗರ ಹೆಸರು ಕೇಳಿಬಂದಿರುವ ನಡುವೆಯೇ, ಆರೋಪಿಯ ಪರ ಕಾಂಗ್ರೆಸ್‌ ಮುಖಂಡ ಜೋಸೆಫ್‌ ವಕಾಲತ್ತು ವಹಿಸಿರುವುದು ನಾನಾ ಪ್ರಶ್ನೆ ಹುಟ್ಟುಹಾಕಿದೆ.

ಇದನ್ನೂ ಓದಿ: ಕಾಂಗ್ರೆಸ್ ಭೋಪಾಲ್ ಕ್ರಿಮಿನಲ್ ಹಿಡಿಲಿಲ್ಲ: ಮೋದಿ ಅಗಸ್ಟಾ ದಲಾಲ್‌ನನ್ನು ಬಿಡಲಿಲ್ಲ!

ಚೂಡಿದಾರ್‌ ಧರಿಸಿ ಪರಾರಿ ಯತ್ನ

3 ತಿಂಗಳ ಹಿಂದಷ್ಟೇ ಸ್ಕಲ್‌ಕ್ಯಾಪ್‌ ಹಾಗೂ ಚೂಡಿದಾರ್‌ ಧರಿಸಿ ದುಬೈನಿಂದ ಪರಾರಿಯಾಗಲು ಮಿಶೆಲ್‌ ಯತ್ನಿಸಿದ್ದ. ಆದರೆ ಮಿಶೆಲ್‌ ಮೇಲೆ ಭಾರತದ ಭದ್ರತಾ ಸಲಹೆಗಾರ ಅಜಿತ್‌ ಕೆ. ದೋವಲ್‌ ರಚಿಸಿದ್ದ ತಂಡ ಒಂದು ಕಣ್ಣಿಟ್ಟಿತ್ತು. ದುಬೈ ಸರ್ಕಾರಕ್ಕೆ ಈ ಬಗ್ಗೆ ಸುಳಿವು ನೀಡಿ ಆತನ ಪರಾರಿಯನ್ನು ತಪ್ಪಿಸಿತ್ತು ಎಂದು ಮೂಲಗಳು ಹೇಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು