ಹೊಸ ಅಧ್ಯಕ್ಷರ ಬಗ್ಗೆ ಅಪಸ್ವರ, ರಾಜ್ಯ ರೈತ ಸಂಘ ಇಬ್ಭಾಗ?

Published : Feb 07, 2019, 04:58 PM ISTUpdated : Feb 07, 2019, 05:00 PM IST
ಹೊಸ ಅಧ್ಯಕ್ಷರ ಬಗ್ಗೆ ಅಪಸ್ವರ, ರಾಜ್ಯ ರೈತ ಸಂಘ ಇಬ್ಭಾಗ?

ಸಾರಾಂಶ

ರಾಜ್ಯದಲ್ಲಿ ರೈತ ಪರ ಹೋರಾಟದ ದನಿ ಆಗಬೇಕಿದ್ದ.. ರೈತರನ್ನು ಒಗ್ಗೂಡಿಸಿ ಒಂದೇ  ವೇದಿಕೆಗೆ ಕರೆ ತರಬೇಕಿದ್ದ ಸಂಘಟನೆಗಳಲ್ಲೇ ಕಚ್ಚಾಟ ಶುರುವಾಗಿದೆ. 

ಮೈಸೂರು[ಫೆ.07]   ಮತ್ತೆ ಇಬ್ಭಾಗದ ಹಾದಿಯಲ್ಲಿ ರಾಜ್ಯ ರೈತ ಸಂಘ ಬಂದು ನಿಂತಿದೆ. ಬಡಗಲಪುರ ನಾಗೇಂದ್ರ ರೈತ ಸಂಘ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಅಪಸ್ವರ ಶುರುವಾಗಿದೆ.

ಕೆ.ಎಸ್. ಪುಟ್ಟಣ್ಣಯ್ಯ ನಿಧನ ಬಳಿಕ ನಡೆದ ಆಯ್ಕೆಯಲ್ಲಿ ಪುಟ್ಟಣ್ಣಯ್ಯ ಬಣಕ್ಕೆ‌ ನಿಷ್ಠರಾಗಿದ್ದ ಬಡಗಲಪುರ ನಾಗೇಂದ್ರ ನೇಮಕವಾಗಿದ್ದರು. ಪ್ರೊ.ಎಂ.ಡಿ.ನಂಜುಂಡಸ್ವಾಮಿ ಕುಟುಂಬವನ್ನು ಹೊರಗಿಟ್ಟು ಪದಾಧಿಕಾರಿಗಳನ್ನು ಆಯ್ಕೆ ಮಾಡಿದ ಆರೋಪ ಸಹ ಕೇಳಿ ಬಂದಿದೆ.

ಪಚ್ಚೆ ಹಾಗೂ ಚುಕ್ಕಿ ನಂಜುಂಡಸ್ವಾಮಿಗೆ ಸಭೆಗೆ ಆಮಂತ್ರಣವನ್ನೇ ನೀಡಿರಲಿಲ್ಲ.  ಸಭೆಗೆ ಆಹ್ವಾನ‌ ಕೊಡದೆ ಒಳಗೊಳಗೆ ನೂತನ ಅಧ್ಯಕ್ಷರ ಆಯ್ಕೆ ಮಾಡಲಾಗಿದೆ ಎಂದು  ನಂಜನಗೂಡು ರೈತ ಮುಖಂಡ ವಿದ್ಯಾಸಾಗರ್ ಮತ್ತು ಬೆಂಬಲಿಗರು ಆರೋಪ ಮಾಡಿದ್ದಾರೆ.

ಮಣ್ಣಲ್ಲಿ ಮಣ್ಣಾದ ರೈತ ಹೋರಾಟಗಾರ ಕೆ.ಎಸ್ ಪುಟ್ಟಣ್ಣಯ್ಯ

ವಿದ್ಯಾಸಾಗರ್ ಪ್ರೊ.ಎಂ.ಡಿ.ಎನ್. ಬಣದಲ್ಲಿ ಗುರುತಿಸಿಕೊಂಡಿದ್ದ ರೈತ ಮುಖಂಡರಾಗಿದ್ದು  ಧ್ವನಿ ಎತ್ತಿದ ರೈತ ಮುಖಂಡರನ್ನು ರೈತ ಸಂಘದಿಂದ ನೂತನ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅಮಾನತು ಮಾಡಿದ್ದಾರೆ. ಪ್ರೊ.ಎಂ.ಡಿ.ಎನ್ ಬಣದ ವಿರುದ್ಧ ಹೊಸತಾಗಿ ನೇಮಕರಾದವರು ದ್ವೇಷ ಸಾಧಿಸುತ್ತಿದ್ದಾರೆ ಎಂದು ಆರೋಪ ಮಾಡಲಾಗಿದ್ದು  ಪಚ್ಚೆ ಮತ್ತು ಚುಕ್ಕಿಯಿಂದ ಪ್ರತ್ಯೇಕ ರೈತ ಬಣ  ನಿರ್ಮಾಣ ಮಾಡಿ ಅದರಲ್ಲಿಯೇ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಶಸ್ತಿ ಸಮಾರಂಭಕ್ಕೆ ‘ಡ್ಯೂಪ್’ ಕಳಿಸಿ ಬೇಸ್ತು ಬೀಳಿಸಿದ್ರಾ ನಟಿ ಅದಾ ಶರ್ಮಾ..? ‘AI ತದ್ರೂಪು’ ಕಳಿಸಿದ್ದು ನಿಜಾನಾ?
ರಾಮೇಶ್ವರಂ ಕೆಫೆಗೆ ಬಿಗ್ ರಿಲೀಫ್: ವಿಮಾನ ನಿಲ್ದಾಣ ಮಳಿಗೆ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ