
ಉದಯ್’ಪುರ : ಉದಯ್’ಪುರದಲ್ಲಿ ವ್ಯಕ್ತಿಯೋರ್ವರು ತಮ್ಮ 48 ವರ್ಷಗಳ ಸಹಜೀವನವನ್ನು ಅಂತ್ಯಗೊಳಿಸಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. 80 ವರ್ಷದ ವ್ಯಕ್ತಿ 76 ವರ್ಷದ ಮಹಿಳೆಯನ್ನು ವರಿಸಿದ್ದಾರೆ. ಮಾದ್ರಿ ಪಂಚಾಯತ್’ನಲ್ಲಿ ವಾಸವಿದ್ದ ದೇವದಾಸ್ ಕಲಸುವಾ ಹಾಗೂ ಮಗದು ಬಾಯ್ ಇಬ್ಬರೂ ಕೂಡ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.
ಸುಮಾರು 48 ವರ್ಷಗಳಿಂದ ಸಹಜೀವನವನ್ನು ನಡೆಸುತ್ತಿದ್ದ ಇಬ್ಬರಿಗೂ ಕೂಡ ಇದೀಗ ವಿವಾಹದ ಯೋಗ ಒಲಿದು ಬಂದಿದೆ. ಗ್ರಾಮಸ್ಥರೆಲ್ಲರೂ ಸೇರಿ ಇದೀಗ ಹಿರಿಯ ಜೀವಗಳನ್ನು ಒಂದು ಗೂಡಿಸಿದ್ದಾರೆ.
ದೇವದಾಸ್ ಅವರಿಗೆ ಈ ಮೊದಲೇ ವಿವಾಹವಾಗಿದ್ದು, ಮೊದಲ ಪತ್ನಿ ಚಂಪಾಬಾಯಿ ತಮ್ಮ ಪುತ್ರನೊಂದಿಗೆ ವಾಸವಾಗಿದ್ದಾರೆ. ದೇವದಾಸ್ ಅವರ ಇಬ್ಬರು ಪತ್ನಿಯರೂ ಕೂಡ ಅನ್ಯೋನ್ಯವಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.