ಮನೆ ನಿರ್ಮಾಣ ಮುಗಿಯದಿದ್ದರೆ ಮುಂಗಡ ಹಣ ವಾಪಸ್

Published : Nov 01, 2016, 06:52 PM ISTUpdated : Apr 11, 2018, 12:55 PM IST
ಮನೆ ನಿರ್ಮಾಣ ಮುಗಿಯದಿದ್ದರೆ ಮುಂಗಡ ಹಣ ವಾಪಸ್

ಸಾರಾಂಶ

ಮನೆ ಖರೀದಿ ವಿಚಾರದಲ್ಲಿ ಮನಸ್ಸು ಬದಲಾಯಿಸಿ ಹಣ ಹಿಂದಕ್ಕೆ ಪಡೆಯಬೇಕೆಂದು ನೀವು ತೀರ್ಮಾನಿಸಿದರೂ, ರಿಯಲ್ ಎಸ್ಟೇಟ್ ಕಂಪನಿಗಳು 45 ದಿನಗಳ ಒಳಗಾಗಿ ಶೇ.2ರಷ್ಟು ಬಡ್ಡಿ ಸೇರಿಸಿ ಹಣ ಹಿಂದಿರುಗಿಸಬೇಕು.

ನವದೆಹಲಿ/ಬೆಂಗಳೂರು(ನ.2): ನೀವು ಅಪಾರ್ಟ್‌ಮೆಂಟ್ ಅಥವಾ ಮನೆ ಖರೀದಿಗಾಗಿ ಮುಂಗಡ ಹಣ ಪಾವತಿ ಮಾಡಿದ್ದೀರಾ? ಒಂದು ವೇಳೆ ನಿಗದಿತ ಅವಯಲ್ಲಿ ಯೋಜನೆ ಪೂರ್ಣಗೊಳ್ಳದಿದ್ದರೆ, ಹಣ ಪುನಃ ನಿಮಗೆ ಸಿಗುತ್ತದೆ. ಅದೂ ಶೇ.10.9ರ ಬಡ್ಡಿ ದರದಲ್ಲಿ. ಇನ್ನು, ಯಾವುದೋ ಕಾರಣಕ್ಕೆ ಮನೆ ಖರೀದಿ ವಿಚಾರದಲ್ಲಿ ಮನಸ್ಸು ಬದಲಾಯಿಸಿ ಹಣ ಹಿಂದಕ್ಕೆ ಪಡೆಯಬೇಕೆಂದು ನೀವು ತೀರ್ಮಾನಿಸಿದರೂ, ರಿಯಲ್ ಎಸ್ಟೇಟ್ ಕಂಪನಿಗಳು 45 ದಿನಗಳ ಒಳಗಾಗಿ ಶೇ.2ರಷ್ಟು ಬಡ್ಡಿ ಸೇರಿಸಿ ಹಣ ಹಿಂದಿರುಗಿಸಬೇಕು. ಇದರ ಜತೆಗೆ ರಾಜ್ಯ ಸರ್ಕಾರಗಳೂ ಕೂಡ ತಮ್ಮ ವ್ಯಾಪ್ತಿಯಲ್ಲಿ ಪ್ರಾಕಾರ ರಚಿಸುವಂತೆ ಕೇಂದ್ರ ಸರ್ಕಾರ ಸಲಹೆ ಮಾಡಿದೆ. ಉತ್ತರ ಪ್ರದೇಶ ಸರ್ಕಾರ ವಿವಿಧ ನಗರಾಭಿವೃದ್ಧಿ ಪ್ರಾಕಾರಗಳ ಜತೆಗೆ ಮಾತುಕತೆ ನಡೆಸಿದ್ದರೆ, ಮಹಾರಾಷ್ಟ್ರ ಸರ್ಕಾರ ಕರಡು ನಿಯಮಗಳನ್ನು ಬಿಡುಗಡೆ ಮಾಡಿ, ಸಾರ್ವಜನಿಕರಿಂದ ಸಲಹೆ ಆಹ್ವಾನಿಸಿದೆ.

ಮನೆ ಖರೀದಿಯಲ್ಲಿ ಗ್ರಾಹಕರಿಗೆ ಉಂಟಾಗುವ ಮೋಸ, ಅನ್ಯಾಯ ತಪ್ಪಿಸಲು ಜಾರಿಗೆ ತರಲು ಉದ್ದೇಶಿಸಿರುವ ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆ (ಆರ್‌ಇಆರ್‌ಎ)ಯ ನಿಯಮಗಳನ್ನು ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದೆ. ಈ ಬಗ್ಗೆ ‘ದ ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ. ಇಷ್ಟು ಮಾತ್ರವಲ್ಲದೆ ಆಯಾ ರಾಜ್ಯಗಳ ಮಟ್ಟದಲ್ಲಿ ರಚನೆಯಾಗಲಿರುವ ರಿಯಲ್ ಎಸ್ಟೇಟ್ ನಿಯಂತ್ರಣ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಿಲ್ಡರ್‌ಗಳು ತಮ್ಮ ಹೆಸರು ನೋಂದಾಯಿಸಿಕೊಂಡಿರಬೇಕು.

ಹಣ ಹಿಂದಕ್ಕೆ ನೀಡುವುದರ ಜತೆಗೆ ಸದ್ಯ ಕಾಮಗಾರಿ ನಡೆಯುತ್ತಿರುವ ಯೋಜನೆಗಳಿಗಾಗಿ ಗ್ರಾಹಕರಿಂದ ಸಂಗ್ರಹಿಸಿದ ಹಣದ ಶೇ.70ನ್ನು ಠೇವಣಿಯಾಗಿ ಇರಿಸಿಬೇಕೆಂದು ಅಂತಿಮ ನಿಯಮಾವಳಿಗಳಲ್ಲಿ ಉಲ್ಲೇಖಿಸಲಾಗಿದೆ. ಒಂದು ವೇಳೆ ಆ ಮೊತ್ತವನ್ನು ಉಪಯೋಗಿಸದೇ ಇದ್ದರೆ ಮನೆ ಅಥವಾ ಅಪಾರ್ಟ್‌ಮೆಂಟ್‌ನ ರಿಜಿಸ್ಟ್ರೇಷನ್ ಮಾಡುವ ಮೂರು ತಿಂಗಳು ಮೊದಲು ಪ್ರತ್ಯೇಕ ಖಾತೆಗೆ ವರ್ಗಾಯಿಸಬೇಕು. ಕಾಯ್ದೆಯ ಮೂಲ ಪ್ರಸ್ತಾಪದಲ್ಲಿ ಈ ಅಂಶ ಸೇರ್ಪಡೆಯಾಗಿರಲಿಲ್ಲ. ಕಾಯ್ದೆಯ ನಿಯಮಗಳನ್ನು ಪ್ರಕಟಿಸುವ ವೇಳೆಯಲ್ಲಿ ಗ್ರಾಹಕರ ಹಿತ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಹಾಗೂ ಹಾಲಿ ಕಾಮಗಾರಿ ಪೂರ್ಣಗೊಳಿಸದೆ ಪಡೆದುಕೊಂಡ ಮೊತ್ತವನ್ನು ಮತ್ತೊಂದು ಯೋಜನೆಗಾಗಿ ಬಿಲ್ಡರ್ ವರ್ಗಾಯಿಸದಂತೆ ಮಾಡಲು ನಿಯಮ ಸೇರ್ಪಡೆಗೊಳಿಸಲಾಗಿದೆ.

ಕೇಂದ್ರ ಸರ್ಕಾರ ನಿಯಮಗಳನ್ನು ಪ್ರಕಟಿಸಿರುವುದರಿಂದ 2017ರ ಏ.30ರ ಒಳಗಾಗಿ ರಾಜ್ಯಗಳಲ್ಲಿಯೂ ಕೂಡ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಕಾರಗಳನ್ನು ರಚಿಸಬೇಕಾಗಿದೆ.

ಎಲ್ಲಿಗೆ ಅನ್ವಯ? ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳು, ಚಂಡೀಗಡ, ದಾದ್ರಾ ಮತ್ತು ನಾಗರ್ ಹವೇಲಿ, ಡಾಮನ್ ಮತ್ತು ಡಿಯುಗಳಿಗೆ ಸದ್ಯಕ್ಕೆ ಈ ನಿಯಮ ಅನ್ವಯ.

ಸಲಹೆ ಕೇಳಿದ ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರ ಕೂಡ ರಾಜ್ಯ ಮಟ್ಟದಲ್ಲಿ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಕಾರ ರಚಿಸಲು ನಿರ್ಧರಿಸಿದೆ. ಅದಕ್ಕೆ ಪೂರಕವಾಗಿ ಕರಡು ನಿಯಮಗಳನ್ನು ಬಿಡುಗಡೆ ಮಾಡಿದ್ದು, ಡೆವಲಪರ್‌ಗಳಿಂದ ಅಭಿಪ್ರಾಯ ಆಹ್ವಾನಿಸಿದೆ. ನ.10ರ ಒಳಗಾಗಿ ಸಲಹೆಗಳು, ಆಕ್ಷೇಪಗಳು ಇದ್ದಲ್ಲಿ ಸಲ್ಲಿಸಲು ಅವಕಾಶ ಉಂಟು. ಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿದ ನಿಯಮಗಳನ್ನೇ ರಾಜ್ಯದ ನಿಯಮಗಳೂ ಇವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಟೈಲಿಶ್ ಲುಕ್ ಮತ್ತು ಸ್ಮಾರ್ಟ್ ಫೀಚರ್‌ಗಳೊಂದಿಗೆ ಮಾರುಕಟ್ಟೆಗೆ ಬಂದ ಟಿವಿಎಸ್ ಎನ್‌ಟಾರ್ಕ್ 150
ಮುಂದಿನ ಪೀಳಿಗೆಗಾಗಿ ತುಂಗಭದ್ರಾ ನದಿಯನ್ನು ರಕ್ಷಿಸಿ: ಸಚಿವ ಶಿವರಾಜ ತಂಗಡಗಿ