
ಮುಂಬೈ(ಮೇ.04): ಕನ್ನಡಿಗ ಸುದೀಪ್ ಅಭಿನಯದ 2012ರ ತೆಲುಗು ಸೂಪರ್ ಹಿಟ್ ಚಿತ್ರ ‘ಈಗ’ ಹಿಂದಿ ಧಾರವಾಹಿಯಾಗುವ ಸಾಧ್ಯತೆ ಇದೆ ಎಂದು, ‘ಈಗ’ ಚಿತ್ರಕಥೆ ಬರೆದಿದ್ದ, ಕೆ.ವಿ.ವಿಜಯೇಂದ್ರ ಪ್ರಸಾದ್ (ಎಸ್.ಎಸ್.ರಾಜವೌಳಿ ಅವರ ತಂದೆ) ಹೇಳಿದ್ದಾರೆ. ಎಸ್.ಎಸ್. ರಾಜವೌಳಿ ನಿರ್ದೇಶನದ ಬ್ಲಾಕ್ಬಸ್ಟರ್ ‘ಈಗ’ದ ಮುಂದುವರಿದ ಭಾಗವಾಗಿರುವ ‘ಈಗ-2’ ಚಿತ್ರದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರು ಅಭಿನಯಿಸಲಿದ್ದಾರೆ ಎಂಬ ಸುದ್ದಿಗಳ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ ಪ್ರಸಾದ್, ‘ಈ ಕುರಿತು ನಾನು ನಿಶ್ಚಯಿಸಿದ್ದೆ. ಆದರೆ, ಈಗ ಚಿತ್ರವನ್ನು ಹಿಂದಿಯಲ್ಲಿ ಟೀವಿ ಧಾರಾವಾಹಿ ನಿರ್ಮಾಣವಾಗುವ ಸಾಧ್ಯತೆಯಿರುವುದರಿಂದ ಈಗ-2 ಕೈಗೂಡಲಿಲ್ಲ,’ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.