
ಕೊಲಂಬೋ[ಆ.17]: ದಷ್ಟಪುಷ್ಟವಾದ ಆನೆಗೆ ಅಲಂಕಾರ ಮಾಡಿ ಅದನ್ನು ಮೆರವಣಿಗೆ ಮಾಡಿದರೆ ಅದಕ್ಕೊಂದು ಗತ್ತು. ಆದರೆ, ಶ್ರೀಲಂಕಾದಲ್ಲಿ ವಯಸ್ಸಾಗಿ ಬಡಕಲಾಗಿರುವ ಆನೆಯೊಂದನ್ನು ವಾರ್ಷಿಕ ಬೌದ್ಧ ಉತ್ಸವಕ್ಕೆ ಬಳಸಿಕೊಳ್ಳಲಾಗಿದೆ.
ಈ ಆನೆಯು ಪರೇಡ್ ಮಧ್ಯೆಯೇ ಕುಸಿದು ಬಿದ್ದಿದೆ. ಟಿಕಿರಿ ಎಂಬ ಹೆಸರಿನ 70 ವರ್ಷ ದ ಆನೆ ಕಾಯಿಲೆಯಿಂದ ಬೆನ್ನುಮೂಳೆಗಳು ಕಾಣುವ ಸ್ಥಿತಿ ತಲುಪಿರುವ ಫೋಟೋ ಬಹಿರಂಗವಾಗಿದ್ದರಿಂದ ಆನೆಯನ್ನು ಉತ್ಸವದಿಂದ ಹಿಂಪಡೆಯಲಾಗಿದೆ.
ಉತ್ಸವ ಆಯೋಜಕರ ಬಗ್ಗೆ ವ್ಯಾಪಕ ಟೀಕೆಗಳೂ ವ್ಯಕ್ತವಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.