
ನವದೆಹಲಿ: ಮಂಗಳೂರಿನಲ್ಲಿರುವ ಕಚ್ಚಾತೈಲ ಸಂಗ್ರಹ ಘಟಕಕ್ಕೆ ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ (ಎಡಿಎನ್ಒಸಿ) 60 ಲಕ್ಷ ಬ್ಯಾರೆಲ್ ಕಚ್ಚಾತೈಲವನ್ನು ಪೂರೈಸಲಿದೆ.
ಮೋದಿ ಅವರ ಅಬುಧಾಬಿ ಭೇಟಿಯ ವೇಳೆ ಈ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ. ಮಂಗಳೂರಿನಲ್ಲಿರುವ ಕಚ್ಚಾತೈಲ ಸಂಗ್ರಹಾಗಾರದಲ್ಲಿ ಎರಡು ವಿಭಾಗಗಳಲ್ಲಿ 15 ಲಕ್ಷ ಟನ್ (1.1 ಕೋಟಿ ಬ್ಯಾರೆಲ್) ಕಚ್ಚಾತೈಲವನ್ನು ಸಂಗ್ರಹಿಸಬಹುದಾಗಿದೆ.
ಇಲ್ಲಿ ಸಂಗ್ರಹವಾಗುವ ಕಚ್ಚಾತೈಲದ ಸ್ವಲ್ಪ ಭಾಗವನ್ನು ಎಡಿಎನ್ಒಸಿ ತನ್ನ ವಾಣಿಜ್ಯ ವ್ಯವಹಾರಕ್ಕೆ ಬಳಸಿಕೊಳ್ಳಲಿದೆ. ಇದಕ್ಕೆ ಅದು ಯಾವುದೇ ಬಾಡಿಗೆ ತೆರಬೇಕಿಲ್ಲ. ಉಳಿದ ತೈಲ ಭಾರತಕ್ಕೆ ಸೇರಿದ್ದು, ತುರ್ತು ವೇಳೆ ಬಳಕೆಯಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.