ಐವರು ಪೊಲೀಸರು ಹಾಗೂ ಓರ್ವ ಭದ್ರತಾ ಸಿಬ್ಬಂದಿಯನ್ನು ಕೊಂದು ಹಣದ ವ್ಯಾನನ್ನು ದೋಚಿದ ಉಗ್ರರು

Published : May 01, 2017, 01:06 PM ISTUpdated : Apr 11, 2018, 12:35 PM IST
ಐವರು ಪೊಲೀಸರು ಹಾಗೂ ಓರ್ವ ಭದ್ರತಾ ಸಿಬ್ಬಂದಿಯನ್ನು ಕೊಂದು ಹಣದ ವ್ಯಾನನ್ನು ದೋಚಿದ ಉಗ್ರರು

ಸಾರಾಂಶ

ವಾಹನಗಳಲ್ಲಿ ಬಂದಿದ್ದ ಶಂಕಿತರು 6 ಮಂದಿಯನ್ನು ಕೊಂದು 50 ಲಕ್ಷ ರೂ.ವಿದ್ದ ಹಣವನ್ನು ದೋಚಿ ತಮ್ಮ ವಾಹನಗಳಲ್ಲಿ ಪರಾರಿಯಾಗಿದ್ದಾರೆ.

ಶ್ರೀನಗರ(ಮೇ.01): ದಕ್ಷಿಣ ಕಾಶ್ಮೀರದ ಕುಲ್ಗಾಂ'ನಲ್ಲಿ ಶಂಕಿತ ಉಗ್ರರು ಐವರು ಪೊಲೀಸರು ಹಾಗೂ ಓರ್ವ ಭದ್ರತಾ ಸಿಬ್ಬಂದಿಯನ್ನು ಕೊಂದಿರುವ ಸರ್ಕಾರಿ ಸ್ವಾಮ್ಯದ ಹಣದ ವ್ಯಾನನ್ನು ದೋಚಿದ್ದಾರೆ.

ವಾಹನಗಳಲ್ಲಿ ಬಂದಿದ್ದ ಶಂಕಿತರು 6 ಮಂದಿಯನ್ನು ಕೊಂದು 50 ಲಕ್ಷ ರೂ.ವಿದ್ದ ಹಣವನ್ನು ದೋಚಿ ತಮ್ಮ ವಾಹನಗಳಲ್ಲಿ ಪರಾರಿಯಾಗಿದ್ದಾರೆ. ಈ ಹಣವನ್ನು ಸರ್ಕಾರಿ ಸ್ವಾಮ್ಯದ ಸ್ಥಳೀಯ ಶಾಖೆಗಳಿಗೆ ವಿತರಿಸಬೇಕಾಗಿತ್ತು' ಎಂದು ಕಾಶ್ಮೀರ ಡಿಜಿಪಿ ಎಸ್'ಪಿ ಪಣಿ ತಿಳಿಸಿದ್ದಾರೆ.

ಈ ಘಟನೆಯ ಮೂಲಕ ಕಣಿವೆ ರಾಜ್ಯದಲ್ಲಿ ಮತ್ತೆ ಅಶಾಂತಿ ಸಂಭವಿಸಿದೆ.ಕಳೆದ ವರ್ಷದ ಜುಲೈನಲ್ಲಿ ಸ್ಥಳೀಯ ಉಗ್ರ ಬುರ್ಹನ್ ವಾನಿಯನ್ನು ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ ನಂತರ ಹಲವು ತಿಂಗಳು ಗಲಭೆಯೊಂದಿಗೆ ಪ್ರತ್ಯೇಕವಾದದ ಕೂಗು ಕೇಳಿ ಬಂದಿತ್ತು. ಸ್ಥಳೀಯರು ಮತ್ತು ಸೈನಿಕರು ಸೇರಿದಂತೆ ನೂರಾರು ಮಂದಿ ಮೃತಪಟ್ಟಿದ್ದರು.

ನಿನ್ನೆಯಷ್ಟೆ ಕೃಷ್ಣಘತಿ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಮಾಡಿದ ಅಪ್ರಚೋದಿತ ರಾಕೇಟ್ ದಾಳಿಯಿಂದ ಇಬ್ಬರು ಸೈನಿಕರು ಹುತಾತ್ಮರಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೂಪಾಯಿ ಕುಸಿದರೂ ಪ್ರಗತಿಯತ್ತ ಭಾರತ: ನಿಜಕ್ಕೂ ಏನಾಗುತ್ತಿದೆ?‌
87 ವರ್ಷದ ಪ್ರಸಿದ್ಧ ಪೇಂಟರ್ ಮಗುವಿಗೆ ತಾಯಿಯಾದ 37 ವರ್ಷದ ಪತ್ನಿ, ಉಳಿದ ಮಕ್ಕಳೊಂದಿಗೆ ಬಂಧವೇ ಕಟ್