ನಕ್ಸಲರಿಂದ ಸಿಆರ್‌ಪಿಎಫ್ ವಾಹನ ಸ್ಫೋಟ: ನಾಲ್ವರು ಹುತಾತ್ಮ!

Published : Oct 27, 2018, 07:47 PM IST
ನಕ್ಸಲರಿಂದ ಸಿಆರ್‌ಪಿಎಫ್ ವಾಹನ ಸ್ಫೋಟ: ನಾಲ್ವರು ಹುತಾತ್ಮ!

ಸಾರಾಂಶ

ಚುನಾವಣೆ ಎದುರಿಸುತ್ತಿರುವ ಛತ್ತೀಸ್‌ಗಢ್ ದಲ್ಲಿ ನಕ್ಸಲರ ಅಟ್ಟಹಾಸ! ಸಿಆರ್‌ಪಿಎಫ್ ಸಿಬ್ಬಂದಿ ತೆರಳುತ್ತಿದ್ದ ವಾಹನವನ್ನು ಸ್ಫೋಟಿಸಿದ ನಕ್ಸಲರು! ಘಟನೆಯಲ್ಲಿ ನಾಲ್ವರು ಸಿಆರ್‌ಪಿಎಫ್ ಯೋಧರು ಹುತಾತ್ಮ! ಪ್ರಬಲ ನೆಲಬಾಂಬ್ ಸ್ಫೋಟಿಸಿ ಯೋಧರನ್ನು ಬಲಿ ಪಡೆದ ನಕ್ಸಲರು  

ರಾಯಪುರ್(ಅ.27): ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಛತ್ತೀಸ್‌ಗಢ್‌ದಲ್ಲಿ ನಕ್ಸಲರು ಸಿಆರ್‌ಪಿಎಫ್ ಸಿಬ್ಬಂದಿ ತೆರಳುತ್ತಿದ್ದ ವಾಹನವನ್ನು ಸ್ಫೋಟಿಸಿದ್ದು, ಘಟನೆಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.

ಇಂದು ಸಂಜೆ 4 ಗಂಟೆಯ ಸುಮಾರಿಗೆ ಬಿಜಾಪುರ್ ಜಿಲ್ಲೆಯ ಮುರ್ದಂದ್ ಸಿಆರ್‌ಪಿಎಫ್ ಕ್ಯಾಂಪ್ ಸಮೀಪ ಸಿಆರ್‌ಪಿಎಫ್ ವಾಹನದ ಮೇಲೆ ನಕ್ಸಲರು ದಾಳಿ ನಡೆಸಿದ್ದಾರೆ.

ಈ ಕುರಿರು ಮಾಹಿತಿ ನೀಡಿದ ಬಿಜಾಪುರ್ ಪೊಲೀಸ್ ಅಧೀಕ್ಷಕ ಮೋಹಿತ್ ಗರ್ಗ್, ಘಟನೆಯಲ್ಲಿ ನಾಲ್ವರು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಕ್ಯಾಂಪ್ ನಿಂದ 1 ಕಿ.ಮೀ.ದೂರದಲ್ಲಿ ಸಿಆರ್‌ಪಿಎಫ್ ನ 6 ಸಿಬ್ಬಂದಿ ತೆರಳುತ್ತಿದ್ದ ಎಂಪಿವಿ(ಸ್ಫೋಟ ನಿರೋಧಕ ವಾಹನ) ವಾಹನವನ್ನು ಪ್ರಬಲ ನೆಲಬಾಂಬ್ ಬಳಸಿ ಸ್ಫೋಟಿಸಿಲಾಗಿದೆ ಎಂದು ಗರ್ಗ್ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲಂಡನ್‌ನಲ್ಲಿ ವಿಜಯ್‌ ಮಲ್ಯ 70ನೇ ಬರ್ತ್‌ಡೇಗೆ ಲಲಿತ್ ಮೋದಿಯಿಂದ ಅದ್ದೂರಿ ಪಾರ್ಟಿ: ಕಿರಣ್ ಮಜುಂದಾರ್ ಭಾಗಿ
ತನ್ನ ಮೊದಲ ಕ್ರೆಡಿಟ್‌ ಕಾರ್ಡ್‌ ಬಿಡುಗಡೆ ಮಾಡಿದ Google Pay, ಏನಿದರ ವಿಶೇಷತೆ?