
ಹೊಳೆನರಸೀಪುರ: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಸಿಗ್ನಲ್ ದೋಷದಿಂದಾಗಿ ಎರಡು ರೈಲುಗಳು ಒಂದೇ ಟ್ರ್ಯಾಕಿನಲ್ಲಿ ಆಗಮಿಸಿದರೂ ಕೊನೇ ಕ್ಷಣದಲ್ಲಿ ಸಿಬ್ಬಂದಿ ಸಮಯಪ್ರಜ್ಞೆಯಂದಾಗಿ ದುರಂತ ತಪ್ಪಿದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
ತಾಳಗುಪ್ಪದಿಂದ ಮೈಸೂರಿಗೆ ಸಾಗಬೇಕಿದ್ದ ಇಂಟರ್ಸಿಟಿ ರೈಲು ಮತ್ತು ಮೈಸೂರಿನಿಂದ ಅರಸೀಕೆರೆಗೆ ಹೋಗುವ ಪ್ಯಾಸೆಂಜರ್ ರೈಲುಗಳಿಗೆ ನಗರದ ರೈಲು ನಿಲ್ದಾಣದಲ್ಲಿ ಕ್ರಾಸಿಂಗ್ ವ್ಯವಸ್ಥೆ ಇತ್ತು. ಇಂಟರ್ಸಿಟಿ ಮೊದಲ ಟ್ರ್ಯಾಕ್ನಲ್ಲೂ, ಪ್ಯಾಸೆಂಜರ್ ರೈಲು 2ನೇ ಟ್ರ್ಯಾಕ್ನಲ್ಲೂ
ಆಗಮಿಸಬೇಕಿತ್ತು. ಆದರೆ ಎರಡೂ ರೈಲು ಒಂದೇ ಟ್ರ್ಯಾಕ್ನಲ್ಲಿ ಆಗಮಿಸಿ ಆತಂಕ ನಿರ್ಮಾಣವಾಗಿತ್ತು. ತಕ್ಷಣ ಇದನ್ನು ಗಮಿಸಿದ ಸಿಬ್ಬಂದಿ ನಿಲ್ದಾಣದ ಸಮೀಪವೇ ಎರಡೂ ರೈಲನ್ನು ನಿಲ್ಲಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ 1 ಗಂಟೆ ಕಾಲ ರೈಲು ಸಂಚಾರ ವಿಳಂಬವಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.