ಮನೆಯಲ್ಲಿ ಕೂಡಿ ಹಾಕಿದ್ದ 17 ಬಾಲಕಾರ್ಮಿಕರ ರಕ್ಷಣೆ

Published : Dec 01, 2016, 03:42 PM ISTUpdated : Apr 11, 2018, 12:48 PM IST
ಮನೆಯಲ್ಲಿ ಕೂಡಿ ಹಾಕಿದ್ದ 17 ಬಾಲಕಾರ್ಮಿಕರ ರಕ್ಷಣೆ

ಸಾರಾಂಶ

ನಗರದ ಸೊಂತಲಿಂಗಣ್ಣ ಕಾಲೋನಿಯ ಬಸಲಿಂಗರೆಡ್ಡಿ ಎಂಬುವರ ಮನೆಯನ್ನು ಬಾಡಿಗೆ ಪಡೆದ ಮೋಹನ್ ರೆಡ್ಡಿ  ಎಂಬಾತ, ಬಳ್ಳಾರಿ, ಕೂಡ್ಲಿಗಿ ಸೇರಿದಂತೆ ಆಂಧ್ರದ ಕೆಲ ಹಳ್ಳಿಗಳಿಂದ ಬಾಲಕರನ್ನು ಕರೆತಂದು ಕೂಡಿಹಾಕಿದ್ದನು.

ಬಳ್ಳಾರಿ (ಡಿ.01): ಮದ್ಯದಂಗಡಿಗಳಲ್ಲಿ ಕೆಲಸ ಮಾಡಲು, ಬಾಲಕರನ್ನು ಕರೆತಂದು ಮನೆಯೊಂದಕ್ಕೆ ಕೂಡಿಹಾಕಿ ಕೆಲಸಕ್ಕೆ ಕಳುಹಿಸುತ್ತಿದ್ದ ಜಾಲವನ್ನೊಂದು ಬಳ್ಳಾರಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ನಗರದ ಸೊಂತಲಿಂಗಣ್ಣ ಕಾಲೋನಿಯ ಬಸಲಿಂಗರೆಡ್ಡಿ ಎಂಬುವರ ಮನೆಯನ್ನು ಬಾಡಿಗೆ ಪಡೆದ ಮೋಹನ್ ರೆಡ್ಡಿ  ಎಂಬಾತ, ಬಳ್ಳಾರಿ, ಕೂಡ್ಲಿಗಿ ಸೇರಿದಂತೆ ಆಂಧ್ರದ ಕೆಲ ಹಳ್ಳಿಗಳಿಂದ ಬಾಲಕರನ್ನು ಕರೆತಂದು ಕೂಡಿಹಾಕಿದ್ದನು.

ಇಲ್ಲಿಂದ ಮಕ್ಕಳನ್ನು ಪ್ರತಿದಿನ ವಾಹನಗಳ ಮೂಲಕ ಬಾರ್ &ರೆಸ್ಟೋರೆಂಟ್ ಗಳಲ್ಲಿ ಕೆಲಸ ಮಾಡಲು‌ಕಳುಹಿಸುತ್ತಿದ್ದನು.

ಸುತ್ತಮುತ್ತಲಿನ ಜನರಿಗೆ ವಿಷಯ ತಿಳಿಯದಂತೆ ಮನೆಯ‌ ಕಿಟಕಿ ಮತ್ತು ಬಾಗಿಲು ಮುಚ್ಚಿ ಹೊರಹೋಗದಂತೆ ನೋಡಿಕೊಳ್ಳುತ್ತಿದ್ದನು.

ಈ ಮಾಹಿತಿ ತಿಳಿದ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ಅಧಿಕಾರಿಗಳು ಮನೆಯ ಮೇಲೆ ದಾಳಿ ನಡೆಸಿ 17 ಮಕ್ಕಳನ್ನು ರಕ್ಷಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದರೂ ಸೂರ್ಯವಂಶಿ ಕುಟುಂಬಕ್ಕೆ ಅಘಾತ, ಆರಕ್ಕೆ 6 ಸದಸ್ಯರಿಗೆ ಸೋಲು
ಬಿಡದಿ ಟೌನ್ ಶಿಪ್ ಜಿದ್ದಿನಿಂದ ಅನುಷ್ಠಾನ ಮಾಡುತ್ತಿಲ್ಲ: ಶಾಸಕ ಎಚ್.ಸಿ.ಬಾಲಕೃಷ್ಣ