ಪವಿತ್ರಾ ಲೋಕೇಶ್ ಬಗ್ಗೆ ಹೇಳಿ ಮತ್ತೆ ಸುದ್ದಿಯಾದ ನರೇಶ್; ಈ ಹೇಳಿಕೆ ಈಗ ಭಾರೀ ವೈರಲ್!

Published : May 14, 2025, 12:20 PM IST
ಪವಿತ್ರಾ ಲೋಕೇಶ್ ಬಗ್ಗೆ ಹೇಳಿ ಮತ್ತೆ ಸುದ್ದಿಯಾದ ನರೇಶ್;  ಈ ಹೇಳಿಕೆ ಈಗ ಭಾರೀ ವೈರಲ್!

ಸಾರಾಂಶ

ನಟ ನರೇಶ್, ಪವಿತ್ರಾ ಲೋಕೇಶ್ ಜೊತೆಗಿನ ಬದುಕು "ಟೈಟಾನಿಕ್ ಹಡಗು ದಡ ಸೇರಿದಂತೆ" ಸುಖಮಯವೆಂದಿದ್ದಾರೆ. ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಸುದ್ದಿ ಮಾಡಿರುವ ನರೇಶ್, ತಾಯಿ ವಿಜಯ ನಿರ್ಮಲಾ ಮತ್ತು ಕೃಷ್ಣ ಜೊತೆ ಹೈದರಾಬಾದ್ ಹೊರವಲಯದ ೧೨ ಎಕರೆ ಜಮೀನಿನಲ್ಲಿ ವಾಸಿಸುತ್ತಿದ್ದ ಬಗ್ಗೆ ಹಂಚಿಕೊಂಡಿದ್ದಾರೆ. ಈಗ ಸಾವಿರ ಕೋಟಿ ಆಸ್ತಿಯ ಒಡೆಯನಾಗಿರುವ ನರೇಶ್, ರಮ್ಯಾ ರಘುಪತಿಯಿಂದ ವಿಚ್ಛೇದನ ಪಡೆದು ಪವಿತ್ರಾಳನ್ನು ವಿವಾಹವಾಗಿದ್ದಾರೆ.

ತೆಲುಗು ಚಿತ್ರರಂಗದ ನಟ, ಸದ್ಯಕ್ಕೆ ಪೋಷಕ ನಟರಾಗಿ ಚಾಲ್ತಿಯಲ್ಲಿರುವ ನರೇಶ್ (Naresh) ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿ ಇರುವುದು ಗೊತ್ತೇ ಇದೆ. ರಮ್ಯಾ ರಘುಪತಿ ಡಿವೋರ್ಸ್, ಅದಕ್ಕೂ ಮೊದಲು ಆಗಿದ್ದ ಮದುವೆ, ಬಳಿಕ ಕನ್ನಡದ ನಟಿ ಪವಿತ್ರಾ ಲೋಕೇಶ್ ಜೊತೆಗಿನ ಸಂಬಂಧ ಹೀಗೆ ಅನೇಕ ಸಂಗತಿಗಳು ಅವರ ವೈಯಕ್ತಿಕ ಜೀವನದಲ್ಲಿ ಘಟಿಸುವ ಮೂಲಕ ಅವರು ಮೀಡಿಯಾ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಸದಾ ಸುದ್ದಿಯಲ್ಲಿ ಇದ್ದಾರೆ. ಇದೀಗ ಹೊಸದೊಂದು ಸುದ್ದಿಯನ್ನು ನಟ ನರೇಶ್ ಸ್ಫೋಟಿಸಿದ್ದು, ಅದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. 

ಟಾಲಿವುಡ್ ನಟ ನರೇಶ್ ಅವರ ವಿಷಯಕ್ಕೆ ಬಂದರೆ, ಅವರು ಸಿನಿಮಾಗಿಂತ ಹೆಚ್ಚಾಗಿ ವೈಯಕ್ತಿಕವಾಗಿ ಸುದ್ದಿಯಾಗಿದ್ದೇ ಹೆಚ್ಚು. ನರೇಶ್ ಅವರು ಮೊದಲು ರೇಖಾ ಪ್ರಿಯಾ ಎಂಬವರನ್ನು ವಿವಾಹ ಆಗಿದ್ದರು. ಬಳಿಕ ಅವರಿಂದ ಡಿವೋರ್ಸ್ ತೆಗೆದುಕೊಂಡರು. ಅದಾದ ಮೇಲೆ ನರೇಶ್ ಅವರು ರಮ್ಯಾ ರಘುಪತಿ ಅವರನ್ನು ಎರಡನೇ ಹೆಂಡತಿಯಾಗಿ ಮದುವೆ ಮಾಡಿಕೊಂಡರು. ಆದರೆ, ಆ ಸಂಬಂಧ ಕೂಡ ಅಷ್ಟೇನೂ ಕಾಲ ಬಾಳಲಿಲ್ಲ. ರಮ್ಯಾ ರಘುಪತಿ ಅವರಿಗೆ ವಿಚ್ಛೇದನ ನೀಡಿ ನರೇಶ್ ಅವರು 2023ರಲ್ಲಿ ಕನ್ನಡ ಮೂಲದ ನಟಿ ಪವಿತ್ರಾ ಲೋಕೇಶ್ ಅವರನ್ನು ಮದುವೆ ಮಾಡಿಕೊಂಡರು. 

ಇತ್ತೀಚಿಗೆ ನರೇಶ್ ಅವರು 'ಪವಿತ್ರಾ ನನ್ನ ಬಾಳಿನಲ್ಲಿ ಬಂದ ಬಳಿಕ ನನ್ನ ಬದುಕು ಸುಧಾರಿಸಿದೆ. ಈಗ ಟೈಟಾನಿಕ್ ಹಡಗು ದಡ ತಲುಪಿದಂತೆ ಆಗಿದೆ. ನಾನೀಗ ಜೀವನದಲ್ಲಿ ಸುಖವಾಗಿದ್ದೇನೆ. ಈಗ 'ಟೈಟಾನಿಕ್ ಹಡಗು ದಡ ತಲುಪಿದಂತೆ ಆಗಿದೆ, ನನ್ನ ಜೀವನ' ಎಂದು ಮಾರ್ಮಿಕವಾಗಿ ತಮ್ಮದೇ ಆದ ಶೈಲಿಯಲ್ಲಿ ಹೇಳಿದ್ದಾರೆ. ಜೊತೆಗೆ, ನಮ್ಮ ಜೀವನದಲ್ಲಿ ತಿಳುವಳಿಕೆಯುಳ್ಳವರು ಇದ್ದರೆ, ಎಲ್ಲವೂ ಒಳಿತಾಗುತ್ತದೆ' ಎಂದಿದ್ದಾರೆ ತೆಲುಗು ನಟ ನರೇಶ್. ಇದೀಗ ನಟ ನರೇಶ್ ಅವರ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. 

ಚಂದನವನದ ಚೆಲುವೆ ಪವಿತ್ರಾ ಲೋಕೇಶ್ (Pavitra Lokesh) ಪತಿ ನರೇಶ್ (Actor Naresh) ಮೊದಲ ಬಾರಿಗೆ ಖಾಸಗಿ ವಿಷಯಗಳನ್ನು ಮಾಧ್ಯಮವೊಂದರ ಜೊತೆಯಲ್ಲಿ ಮಾತನಾಡಿದ್ದಾರೆ. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು (Tollywood Actor Mahesh Babu) ಮಲಸೋದರನಾಗಿರುವ ನರೇಶ್, ತಂದೆ-ತಾಯಿ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ. ತಾಯಿ ವಿಜಯ ನಿರ್ಮಲಾ ಮತ್ತು ತಂದೆ ಕೃಷ್ಣ (Vijay Nirmala And Krishna) ಅಂತಿಮ ಕಾಲದಲ್ಲಿ ಹೈದರಾಬಾದ್ ನಗರದಿಂದ ದೂರ ಬಂದು ತೋಟದ ಮನೆಯಲ್ಲಿ ಉಳಿದುಕೊಂಡಿದ್ಯಾಕೆ ಎಂಬುದನ್ನು ನರೇಶ್ ರಿವೀಲ್ ಮಾಡಿದ್ದಾರೆ. 

ನರೇಶ್ ಕಲಾವಿದರ ಕುಟುಂಬದಲ್ಲಿ ಜನಿಸಿದವರು. ಹಾಗಾಗಿ ಬಾಲ್ಯ ಕಲಾವಿದನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನರೇಶ್ ಹಾಸ್ಯ ಪಾತ್ರಗಳ ಮೂಲಕವೇ ಗುರುತಿಸಿಕೊಂಡವರು. ತದನಂತರ ಗಂಭೀರ ಪಾತ್ರಗಳ ಮೂಲಕವೂ ಸಿನಿಮಾದಲ್ಲಿ ಸೆಂಟರ್ ಆಫ್ ಆಟ್ರಾಕ್ಷನ್ ಆಗುತ್ತಿದ್ದರು. ನರೇಶ್ ನಟನೆಗೆ ಮನಸೋಲದವರೇ ಇಲ್ಲ. ಹಾಗಾಗಿ ನರೇಶ್‌ಗೆ ಪೋಷಕ ಪಾತ್ರಗಳು ಹುಡುಕಿಕೊಂಡು ಬಂದವು ಅಂದ್ರೆ ತಪ್ಪಾಗಲಾರದು.

ನರೇಶ್ ಕಲಾವಿದರ ಕುಟುಂಬದಲ್ಲಿ ಜನಿಸಿದವರು. ಹಾಗಾಗಿ ಬಾಲ್ಯ ಕಲಾವಿದನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನರೇಶ್ ಹಾಸ್ಯ ಪಾತ್ರಗಳ ಮೂಲಕವೇ ಗುರುತಿಸಿಕೊಂಡವರು. ಆ ಬಳಿಕ ನರೇಶ್ ಗಂಭೀರ ಪಾತ್ರಗಳ ಮೂಲಕವೂ ಸಿನಿಮಾದಲ್ಲಿ ಸೆಂಟರ್ ಆಫ್ ಆಟ್ರಾಕ್ಷನ್ ಆಗುತ್ತಿದ್ದರು. ನರೇಶ್ ನಟನೆಗೆ ಮನಸೋಲದವರೇ ಇಲ್ಲ. ಹೀಗಾಗಿ ನರೇಶ್‌ಗೆ ಪೋಷಕ ಪಾತ್ರಗಳು ಹುಡುಕಿಕೊಂಡು ಬಂದವು ಅಂದ್ರೆ ತಪ್ಪಾಗಲಾರದು. 

12 ಎಕರೆ ಭೂಮಿ ಖರೀದಿ:
ನರೇಶ್ ಅವರಿಗೆ ಟಾಲಿವುಡ್ ನಟ ಕೃಷ್ಣ ಮಲತಂದೆಯಾಗಿದ್ದರು. ಜೀವನದ ಕೊನೆಯ ಕಾಲದವರೆಗೂ ತಾಯಿ ನಿರ್ಮಲಾ ಮತ್ತು ಕೃಷ್ಣ ಜೊತೆಯಾಗಿದ್ದರು. ಹೈದರಾಬಾದ್‌ ನಗರ ಹೊರವಲಯದಲ್ಲಿ 12 ಎಕರೆ ಕೃಷಿ ಜಮೀನು ಖರೀದಿಸಿದ ನಿರ್ಮಲಾ ಕುಟುಂಬ ಸಮೇತರಾಗಿ ಅಲ್ಲಿಯೇ ಉಳಿಯಲು ನಿರ್ಧರಿಸಿದರು. ಈ 12 ಎಕರೆ ಭೂಮಿಯನ್ನು ಅಂದು ಯಾವ ಬೆಲೆ ಖರೀದಿಸಿದರು ಮತ್ತು ಇಂದಿನ ದರ ಎಷ್ಟಿದೆ ಎಂಬುದನ್ನು ನರೇಶ್ ರಿವೀಲ್‌ ಮಾಡಿದ್ದಾರೆ.  

ಅಮ್ಮನ ಜೊತೆಗಿನ ಒಡನಾಡ ಹಂಚಿಕೊಂಡ ನರೇಶ್ :
ನರೇಶ್ ತಾಯಿ ನಿರ್ಮಲಾ ರೈತ ಮಹಿಳೆಯಾಗಿದ್ದು, ಕೃಷಿಗಾಗಿಯೇ 12 ಎಕರೆ ಭೂಮಿಯನ್ನು ಖರೀದಿಸಿದ್ದರು. 'ಅಂದು ತಾಯಿ ಒಂದು ಎಕರೆಗೆ 1.3 ಲಕ್ಷ ರೂಪಾಯಿ ನೀಡಿದ್ದರು. ಅಂದು ನಗರದ ಹೊರವಲಯದಲ್ಲಿದ್ದ ಈ ಭೂಮಿ ಇದೀಗ ಹೈದರಾಬಾದ್‌ ಹೃದಯ ಭಾಗದಲ್ಲಿದೆ. ತೋಟದಲ್ಲಿಯೇ ಮನೆ ಕಟ್ಟಿಕೊಂಡ ನಂತರ ನಾನು ಪೋಷಕರ ಜೊತೆ ಅಲ್ಲಿಗೆ ಹೋದ. ಈ ವೇಳೆ ಕೃಷ್ಣ ಅವರನ್ನು ಮೂಲೆಗುಂಪು ಮಾಡಲಾಯ್ತು ಅಂತ ಕೆಲವರು ಮಾತನಾಡಿದರು. ಆ ಸಮಯದಲ್ಲಿ ನನ್ನಲ್ಲಿಯೂ ಆ ಭಾವನೆ ಬಂದಿತ್ತು' ಎಂದು ನರೇಶ್ ಹೇಳಿಕೊಂಡಿದ್ದಾರೆ. 

ಜೊತೆಗೆ, 'ಜಮೀನಿನಲ್ಲಿ ಇರೋ ಪ್ರತಿ ಮರವೂ ಅಮ್ಮ ನೆಟ್ಟಿದ್ದು. ಇಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ಅಮ್ಮ ತರಕಾರಿ ಬೆಳೆಯುತ್ತಿದ್ದರು. ಒಮ್ಮೆ ತರಕಾರಿ ಮಾರಾಟ ಮಾಡಿದಾಗ ಕೇವಲ 300 ರೂಪಾಯಿ ಬಂದಿದ್ದಕ್ಕೆ ನೊಂದುಕೊಂಡಿದ್ದರು' ಎಂದು ನರೇಶ್ ಬಾಲ್ಯದ ವಿಷಯವನ್ನು ನೆನಪು ಮಾಡಿಕೊಂಡರು. 

ನರೇಶ್ ಸಾವಿರ ಕೋಟಿ ಆಸ್ತಿಯ ಒಡೆಯ: 
ಅಂದು ಕೇವಲ ಒಂದು ಲಕ್ಷ ರೂಪಾಯಿಗೆ ಎಕರೆ ಜಮೀನು ಖರೀದಿಸಿದ್ದರು. ಇದೀಗ ಇದರ ಬೆಲೆ ಕೋಟಿ ಮೇಲೆ ಆಗಿದೆ ಎಂದರು. ನರೇಶ್ ಆಸ್ತಿ 1,000 ಕೋಟಿ ರೂಪಾಯಿಗೂ ಅಧಿಕ ಎಂಬ ಮಾತಿದೆ. ತಾಯಿ ನಿರ್ಮಲಾ ಅವರಿಂದ ಮಗ ನಟ ನರೇಶ್‌ಗೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಬಂದಿದೆಯಂತೆ. ಹಾಗಾಗಿ ನರೇಶ್ ಆಸ್ತಿ ಸಾವಿರ ಕೋಟಿಗೂ ಅಧಿಕ ಎಂಬ ಮಾತಿದೆ. 

ಕಳೆದ ಎರಡು-ಮೂರು ವರ್ಷಗಳಿಂದ ಪವಿತ್ರಾ ಲೋಕೇಶ್ ಮತ್ತು ನರೇಶ್ ಜೊತೆಯಾಗಿ ವಾಸಿಸುತ್ತಿದ್ದಾರೆ. ಪತ್ನಿ ರಮ್ಯಾ ಜೊತೆಗಿನ ಡಿವೋರ್ಸ್ ಪ್ರಕರಣ ನ್ಯಾಯಾಲಯದಲ್ಲಿದೆ. ನಟಿ ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ತಮ್ಮ ಜೀವನದ ಕಥೆಯನ್ನು ಸಿನಿಮಾ ಮಾಡಿ ತಾವೇ ನಟಿಸಿದ್ದರು. ಇದೀಗ ಈ ಹೇಳಿಕೆ ಕೊಟ್ಟು ಮತ್ತೆ ಸುದ್ದಿಯಾಗಿದ್ದಾರೆ ನರೇಶ್. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌