'ನನ್ನ ಸಮಾಧಿ ಬಳಿ ನಿಂತು ಅಳಬೇಡ': ಸುಶಾಂತ್ ಶಾಲೆ ಬರೆದ ಭಾವುಕ ಕವಿತೆ

By Suvarna NewsFirst Published Jun 27, 2020, 4:54 PM IST
Highlights

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅಗಲಿಕೆಯಿಂದ ಬಾಲಿವುಡ್ ಸಿನಿಪ್ರಿಯರು ಇನ್ನೂ ಹೊರಬಂದಿಲ್ಲ. ಈ ನಡುವೆಯೇ ಸುಶಾಂತ್ ಕಲಿತ ಪಾಟ್ನಾದ ಶಾಲೆ ವಿದ್ಯಾರ್ಥಿ ಬಗ್ಗೆ ಭಾವುಕ ಹಾಡೊಂದನ್ನು ಬರೆದಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅಗಲಿಕೆಯಿಂದ ಬಾಲಿವುಡ್ ಸಿನಿಪ್ರಿಯರು ಇನ್ನೂ ಹೊರಬಂದಿಲ್ಲ. ಈ ನಡುವೆಯೇ ಸುಶಾಂತ್ ಕಲಿತ ಪಾಟ್ನಾದ ಶಾಲೆ ವಿದ್ಯಾರ್ಥಿ ಬಗ್ಗೆ ಭಾವುಕ ಹಾಡೊಂದನ್ನು ಬರೆದಿದ್ದಾರೆ.

ಈ ಹಾಡನ್ನು ಸುಶಾಂತ್ ಫೋಟೋ ಜೊತೆಗೆ ಶೇರ್ ಮಾಡಲಾಗಿದೆ. ಸುಶಾಂತ್ ಸಿಂಗ್ ಜನನ ದಿನಾಂಕ ಮತ್ತು ಮರಣ ದಿನವನ್ನೂ ಬರೆದು, 2001ನೇ ಬ್ಯಾಚ್ ಎಂದು ನಮೂದಿಸಲಾಗಿದೆ.

Do not stand at my grave and weep
I am not there. I do not sleep.
I am a thousand winds that blow.
I am the diamond glints on snow.
I am the sunlight on ripened grain.
I am the gentle autumn rain.
When you awaken in the morning’s hush
I am the swift uplifting rush
Of quiet birds in circled flight.
I am the soft stars that shine at night.
Do not stand at my grave and cry;
I am not there. I did not die.

ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿ ಅಡ್ಮಿಶನ್ ಮಾಡಿಕೊಂಡ ಸುಶಾಂತ್ ಗ್ರಾಜುಯೇಟ್ ಆಗುವ ಕೆಲವೇ ತಿಂಗಳ ಹಿಂದೆ ಕಾಲೇಜು ಬಿಟ್ಟು ಮನೋರಂಜನಾ ಲೋಕಕ್ಕೆ ಹೆಜ್ಜೆ ಇಟ್ಟಿದ್ದರು. ಹಿನ್ನೆಲೆ ಡ್ಯಾನ್ಸರ್ ಆಗಿ ಮನೋರಂಜನಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಸುಶಾಂತ್ ನಂತರ ಟಿವಿ ಇಂಡಸ್ಟ್ರಿಗೂ ಕಾಲಿಟ್ಟು ಸಕ್ಸಸ್ ಆಗಿದ್ದರು.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನವೇ ಸಿಬ್ಬಂದಿಗೆ ಸಂಬಳ ನೀಡಿದ್ದ ಸುಶಾಂತ್ ಸಿಂಗ್!

ಸುಶಾಂತ್‌ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ವೃತ್ತಿ ಮತ್ಸರ ಮತ್ತು ಬಾಲಿವುಡ್‌ನ ಒತ್ತಡ ಕಾರಣ ಎಂಬ ಆರೋಪಗಳ ಬೆನ್ನಲ್ಲೇ, ಸುಶಾಂತ್‌ ಜೊತೆ ಮಾಡಿಕೊಂಡ ಒಪ್ಪಂದಗಳ ಕುರಿತಾಗಿ ಮಾಹಿತಿ ನೀಡುವಂತೆ ಪ್ರಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ ಯಶ್‌ರಾಜ್‌ ಫಿಲಮ್ಸ್‌ಗೆ ಪೊಲೀಸರು ಸೂಚಿಸಿದ್ದಾರೆ.

ಈ ನಡುವೆ ತಂದೆಯ ಮದುವೆ ಪ್ರಸ್ತಾಪಕ್ಕೆ ಒಪ್ಪಿದ್ದ ಸುಶಾಂತ್‌ ನವೆಂಬರ್‌ನಲ್ಲಿ ಮದುವೆಯಾಗಲು ಒಪ್ಪಿಕೊಂಡಿದ್ದರು ಎಂದು ಆಪ್ತರು ಹೇಳಿದ್ದರೆ, ಸುಶಾಂತ್‌ ಖಿನ್ನತೆಗೆ ಒಳಗಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ ಮರಣೋತ್ತರ ವರದಿಯು, ಉಸಿರುಕಟ್ಟಿದ ಸ್ಥಿತಿಯಿಂದಾಗಿ ಸಾವು ಸಂಭವಿಸಿದೆ ಎಂದು ಹೇಳಿದೆ.

click me!