ಕೇವಲ 4 ಸೆಕೆಂಡ್‌ ತಡವಾಗಿದ್ದರೆ, ನಾನು ಸಾಯುತ್ತಿದ್ದೆ: ಕಮಲ್ ಹಾಸನ್

Kannadaprabha News   | Asianet News
Published : Feb 21, 2020, 08:13 AM ISTUpdated : Feb 21, 2020, 08:14 AM IST
ಕೇವಲ 4 ಸೆಕೆಂಡ್‌ ತಡವಾಗಿದ್ದರೆ, ನಾನು ಸಾಯುತ್ತಿದ್ದೆ: ಕಮಲ್ ಹಾಸನ್

ಸಾರಾಂಶ

ಕೂದಲೆಳೆ ಅಂತರದಲ್ಲಿ ಕಮಲ್‌, ಶಂಕರ್‌ ಪಾರು| 4 ಸೆಕೆಂಡ್‌ ತಡವಾಗಿದ್ದರೆ, ನಾನು, ನಿರ್ದೇಶಕನೂ ಸಾಯುತ್ತಿದ್ದೆವು| ಕ್ರೇನ್‌ ಕುಸಿದುಬಿದ್ದ ದುರ್ಘಟನೆ ಬಗ್ಗೆ ನಟ ಕಮಲ್‌ ವಿವರಣೆ|ಅವಘಡದಲ್ಲಿ ಮೃತರ ಕುಟುಂಬಕ್ಕೆ .1 ಕೋಟಿ ಪರಿಹಾರ|

ಚೆನ್ನೈ(ಫೆ.21): 3 ಜನರನ್ನು ಬಲಿ ಪಡೆದ ಇಂಡಿಯನ್‌ -2 ಚಿತ್ರದ ಶೂಟಿಂಗ್‌ ವೇಳೆ ನಟ ಕಮಲ್‌ಹಾಸನ್‌ ಮತ್ತು ಖ್ಯಾತ ನಿರ್ದೇಶಕ ಶಂಕರ್‌ ಕೂಡಾ ಕೂದಲೆಳೆ ಅಂತರದಿಂದ ಪ್ರಾಣಾಪಾಯಾದಿಂದ ಪಾರಾಗಿರುವ ವಿಷಯ ಬೆಳಕಿಗೆ ಬಂದಿದೆ.

ಕಮಲ್‌ ಹಾಸನ್‌ ಚಿತ್ರದ ಶೂಟಿಂಗ್‌ ವೇಳೆ ಕ್ರೇನ್ ಬಿದ್ದು 3 ಬಲಿ!

ಬುಧವಾರ ಚೆನ್ನೈ ಹೊರವಲಯದಲ್ಲಿ ನಡೆದ ದುರ್ಘಟನೆ ಬಗ್ಗೆ ಮಾಹಿತಿ ನೀಡಿರುವ ಕಮಲ್‌, ‘ಚಿತ್ರೀಕರಣದ ವೇಳೆ ಭಾರೀ ಗಾತ್ರದ ಕ್ರೇನ್‌ ಕುಸಿದುಬಿದ್ದ ಘಟನೆಯಲ್ಲಿ ನಾನೂ ಸಾಯುತ್ತಿದ್ದೆ. ಆದರೆ, ಈ ಘಟನೆ ಸಂಭವಿಸುವ ಕೇವಲ 4 ಸೆಕೆಂಡ್‌ ಮುನ್ನ ನಾನು, ನಿರ್ದೇಶಕ ಶಂಕರ್‌, ಕ್ಯಾಮೆರಾಮನ್‌ ಹಾಗೂ ನಟಿ ಬೇರೆಡೆ ತೆರಳಿದ್ದೆವು. ಹೀಗಾಗಿ, ನಾವು ಬದುಕಿ ಉಳಿದೆವು. ಒಂದು ವೇಳೆ ನಾವು 4 ಸೆಕೆಂಡ್‌ ತಡ ಮಾಡಿದ್ದರೆ, ನಮ್ಮ ಜಾಗದಲ್ಲಿ ಬೇರೊಬ್ಬರು ನಿಂತು ಮಾತನಾಡಬೇಕಿತ್ತು’ ಎಂದು ಹೇಳಿದ್ದಾರೆ.

ಪರಿಹಾರ: 

ಇದೇ ವೇಳೆ ಈ ಘಟನೆಯಲ್ಲಿ ಮೃತರಾದ ಕುಟುಂಬ ಸದಸ್ಯರಿಗೆ ಕಮಲ್‌ ಹಾಸನ್ ತಲಾ 1 ಕೋಟಿ ರು. ಪರಿಹಾರ ಘೋಷಿಸಿದ್ದಾರೆ.

ಏನಾಗಿತ್ತು:

ಚೆನ್ನೈ ಹೊರವಲಯದಲ್ಲಿರುವ ಇವಿಪಿ ಸ್ಟುಡಿಯೋದಲ್ಲಿ ಬುಧವಾರ ಲೈಟಿಂಗ್‌ಗೆಂದು ಬಳಸಲಾಗಿದ್ದ ಭಾರೀ ಗಾತ್ರದ ಕ್ರೇನ್‌ 150 ಅಡಿ ಎತ್ತರದಿಂದ ಕುಸಿದು ಬಿದ್ದು ದುರ್ಘಟನೆ ಸಂಭವಿಸಿತ್ತು. ಈ ಘಟನೆಯಲ್ಲಿ ಸಹಾಯಕ ನಿರ್ದೇಶಕ ಕೃಷ್ಣ, ಸಹಾಯಕ ಕಲಾವಿದ ಚಂದ್ರನ್‌ ಹಾಗೂ ಮಧು ಅವರು ಸಾವನ್ನಪ್ಪಿದ್ದರು.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?