ರಸ್ತೆ ದುರಸ್ತಿ, ಕೆರೆ ಅಭಿವೃದ್ಧಿ ಸೇರಿ ಬೆಂಗಳೂರು ಸಮಸ್ಯೆ ಬಗೆಹರಿಸಲು ನಟ ಅನಿರುದ್ಧ ರಾಜ್ಯ ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿಯಾಗಿರುವ ಅನಿರುದ್ಧ್ ಜಟ್ಕರ್, ಮನವಿ ಪತ್ರ ಸಲ್ಲಿಸಿದ್ದಾರೆ. ಬೆಂಗಳೂರಿನ ನಗರದಾದ್ಯಂತ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದ್ದು ದಯಮಾಡಿ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿ ವಿನಂತಿ – ಬಹುತೇಕ ರಸ್ತೆಗಳ ಡಾಂಬರೀಕರಣ ಆಗಬೇಕು, ಬೀದಿ ದೀಪಗಳ ಸಮಸ್ಯೆ, ರಸ್ತೆಗಳ ತುಂಬಾ ಕಸದ ಸಮಸ್ಯೆ, ಫುಟ್ಪಾತ್ ಗಳ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದಿದ್ದಾರೆ. ಇದೇ ವೇಳೆ ಕೆರೆಗಳ ಅಭಿವೃದ್ಧಿಗೂ ಮನವಿ ಸಲ್ಲಿಲಿಸಿದ್ದಾರೆ.

09:14 PM (IST) Jun 23
ಮಜಾಭಾರತ ಕಾಮಿಡಿ ಶೋ ಮೂಲಕ ಫೇಮಸ್ ಆಗಿರೋ ನಟಿ ಸುಶ್ಮಿತಾ ಗೌಡ ತಮ್ಮ ಬದುಕಿನ ಕಹಿ ಘಟನೆಗಳನ್ನು ತೆರೆದಿಟ್ಟಿದ್ದಾರೆ. ಏನದು ನೋಡಿ!
07:08 PM (IST) Jun 23
ಗೌರವ್ ಖನ್ನಾರಿಂದ ಅವಿಕಾ ಗೌರ್ವರೆಗೆ, ಹಲವು ಪ್ರಸಿದ್ಧ ಮುಖಗಳು ಮತ್ತೆ ಟಿವಿಯಲ್ಲಿ ರಾರಾಜಿಸಲು ಬರ್ತಿದ್ದಾರೆ. ಹೊಸ ಶೋಗಳು, ಹೊಸ ಪಾತ್ರಗಳು, ಮತ್ತು ಹೊಸ ಮನರಂಜನೆ, ನಿಮ್ಮ ನೆಚ್ಚಿನ ನಟರು ಯಾರು ವಾಪಸ್ ಬರ್ತಿದ್ದಾರೆ ನೋಡಿ.
07:00 PM (IST) Jun 23
ಮೆಗಾ ಡಾಟರ್ ನಿಹಾರಿಕ ಮತ್ತೆ ಮದುವೆ ಆಗೋ ಬಗ್ಗೆ ಮೆಗಾ ಬ್ರದರ್ ನಾಗಬಾಬು ಮಾತಾಡಿದ್ದಾರೆ. ಈ ಸಲ ನಾವು ಸೇರಲ್ಲ ಅಂತ ಹೇಳಿದ್ದಾರೆ.
06:48 PM (IST) Jun 23
'ಪುಷ್ಪ' ಮತ್ತು 'ಅನಿಮಲ್' ಚಿತ್ರಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಭಾರಿ ಯಶಸ್ಸು ಗಳಿಸಿ, ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿರುವ ರಶ್ಮಿಕಾ ಮಂದಣ್ಣ ಅವರಿಗೆ ನಾಗಾರ್ಜುನ ಅವರ ಈ ಪ್ರಶಂಸೆಯು ಮತ್ತಷ್ಟು ಹುಮ್ಮಸ್ಸು ಮತ್ತು ಜವಾಬ್ದಾರಿಯನ್ನು ಹೆಚ್ಚಿಸಿದೆ.
05:59 PM (IST) Jun 23
ಬಾಲಿವುಡ್ ಅನ್ನು ಟೀಕಿಸುವುದರ ಜೊತೆಗೆ, ದಕ್ಷಿಣ ಭಾರತದ ಚಿತ್ರರಂಗಗಳಾದ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಉದ್ಯಮಗಳನ್ನು ಅವರು ಮನಸಾರೆ ಹೊಗಳಿದರು. "ನಮ್ಮ ಚಿತ್ರಗಳು ನಮ್ಮ ನೆಲದ ಕಥೆಗಳನ್ನು ಹೇಳುತ್ತವೆ. ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತವೆ.
04:52 PM (IST) Jun 23
"ರಾಮಾ ರಾಮಾ ರೇ" ಸಿನಿಮಾ ಮಾಡಿದ ಖ್ಯಾತಿ ಎಲ್ಲರಿಗೂ ಗೊತ್ತಿದೆ. ಈ ಸಿನಿಮಾದ ನಿರ್ದೇಶಕ ಡಿ.ಸತ್ಯಪ್ರಕಾಶ್ ಅವರೇ ನಿರ್ಮಿಸಿ, ನಿರ್ದೇಶಿಸುವುದರ ಜೊತೆಗೆ ಪ್ರಮುಖಪಾತ್ರದಲ್ಲೂ ನಟಿಸಿರುವ ಬಹು ನಿರೀಕ್ಷಿತ "X&Y" ಚಿತ್ರ ರಿಲೀಸ್ಗೆ ರೆಡಿಯಿದೆ.
04:45 PM (IST) Jun 23
ಕೇವಲ ನಟರ ದೃಷ್ಟಿಕೋನದಿಂದ ನೋಡುವುದು ಸರಿಯಲ್ಲ. ನಿರ್ಮಾಪಕರ ಬಜೆಟ್, ಸ್ಥಳದ ಲಭ್ಯತೆ, ಮತ್ತು ಚಿತ್ರೀಕರಣದ ವೇಳಾಪಟ್ಟಿಯಂತಹ ಅನೇಕ ಸವಾಲುಗಳೂ ಇರುತ್ತವೆ. ಕೆಲವೊಮ್ಮೆ ಸೂರ್ಯೋದಯ ಅಥವಾ ಸೂರ್ಯಾಸ್ತದಂತಹ ನಿರ್ದಿಷ್ಟ ಸಮಯದಲ್ಲಿ ಮಾತ್ರ ಚಿತ್ರೀಕರಣ ಮಾಡಬೇಕಾಗುತ್ತದೆ.
04:35 PM (IST) Jun 23
ತಮಿಳು ಸಿನಿಮಾದ ಕೆಲವು ಸ್ಟಾರ್ಗಳು ಶಾಲೆಯಲ್ಲಿ ಒಟ್ಟಿಗೆ ಓದಿದ್ದಾರೆ. ಅವರು ಯಾರು ಯಾರು?
04:28 PM (IST) Jun 23
ಮಾದಕ ದ್ರವ್ಯ ಸೇವನೆ ಪ್ರಕರಣದಲ್ಲಿ ನಟ ಶ್ರೀಕಾಂತ್ ಅವರನ್ನು ಪೊಲೀಸರು ಬಂಧನ ಮಾಡಿದ್ದಾರೆ ಎಂದು ವರದಿಯಾಗಿದೆ.
04:02 PM (IST) Jun 23
‘ಜನ ನಾಯಕನ್’ ಸಿನಿಮಾ ವಿಜಯ್ಗೆ ಕೊನೆಯ ಸಿನಿಮಾ ಅಂತ ಎಲ್ಲರೂ ಅಂದುಕೊಂಡಿದ್ದಾರೆ. ಆದ್ರೆ ನಟಿ ಮಮಿತಾ ಬೈಜು ವಿಜಯ್ ತೆಗೆದುಕೊಂಡ ನಿರ್ಧಾರದ ಬಗ್ಗೆ ಹೊಸ ವಿಷ್ಯ ಹೇಳಿದ್ದಾರೆ.
03:50 PM (IST) Jun 23
03:41 PM (IST) Jun 23
ವಿಜಯ್ ಅಭಿನಯದ GOAT ಚಿತ್ರದ ಲೈಫ್ ಟೈಮ್ ಕಲೆಕ್ಷನ್ ದಾಖಲೆಯನ್ನು ಧನುಷ್ ಅವರ ಕುಬೇರಾ ಚಿತ್ರ ಮುರಿದಿದೆ.
03:29 PM (IST) Jun 23
ತಿಲಕ್ ಶೇಖರ್ ಹಾಗೂ ಪ್ರಿಯಾ ಹೆಗ್ಡೆ ನಟನೆಯ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ‘ಉಸಿರು’ ಚಿತ್ರದ ಟೀಸರನ್ನು ಶ್ರೀನಗರ ಕಿಟ್ಟಿ ಹಾಗೂ ನಿರ್ದೇಶಕ ರವಿ ಆರ್ ಗರಣಿ ಬಿಡುಗಡೆ ಮಾಡಿದರು.
02:54 PM (IST) Jun 23
ಚಂದನ್ ರಾಜ್ ನಟಿಸಿರುವ, ವೀರೇಶ್ ಬೊಮ್ಮಸಾಗರ ನಿರ್ದೇಶನದ ‘ರಾಜ ರತ್ನಾಕರ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಜಯರಾಮ ಸಿ.ಮಾಲೂರು ಈ ಸಿನಿಮಾ ನಿರ್ಮಿಸಿದ್ದಾರೆ.
02:40 PM (IST) Jun 23
ಆಮಿರ್ ಖಾನ್ ಅವರ 'ಸಿತಾರೆ ಜಮೀನ್ ಪರ್' ಸ್ಪ್ಯಾನಿಷ್ ಚಿತ್ರ 'ಚಾಂಪಿಯನ್ಸ್' ನ ಹಿಂದಿ ರಿಮೇಕ್. ಆಮಿರ್ ಈ ಹಿಂದೆಯೂ ಹಲವು ವಿದೇಶಿ ಚಿತ್ರಗಳ ರಿಮೇಕ್ಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ 8 ಚಿತ್ರಗಳನ್ನು ನೋಡೋಣ...
02:19 PM (IST) Jun 23
ನಟಿ ಕಾಜಲ್ ಅಗರ್ವಾಲ್ ತಮ್ಮ ಕುಟುಂಬದೊಂದಿಗೆ ಮಾಲ್ಡೀವ್ಸ್ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಅವರು ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾ ಮೂಲಕ ಧನ್ಯವಾದ ತಿಳಿಸಿದ್ದಾರೆ.
01:42 PM (IST) Jun 23
ಹಿಂದಿಯ ಅನುಪಮಾ ಸೀರಿಯಲ್ ಸೆಟ್ನಲ್ಲಿ ಅಗ್ನಿದುರಂತ ಸಂಭವಿಸಿದ್ದು, ಸಂಪೂರ್ಣ ಸೆಟ್ ಧಗಧಗಿಸಿ ಉರಿದಿದೆ. ಆಗಿದ್ದೇನು?
01:25 PM (IST) Jun 23
01:17 PM (IST) Jun 23
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಂಗಾರಮ್ಮನ ಮಗಳು ವಸು ಪಾತ್ರದಲ್ಲಿ ನಟಿಸುತ್ತಿರುವ ಸೌಮ್ಯಾ ಮೆಂಡನ್ ಅವರು ನಿಶ್ಚಿತಾರ್ಥಕ್ಕೆ ಕಾಲಿಟ್ಟಿದ್ದಾರೆ.
01:08 PM (IST) Jun 23
300 ಕೋಟಿಗೂ ಹೆಚ್ಚು ಗಳಿಕೆ ಕಂಡ ಹಾರರ್ ಸಿನಿಮಾ ಒಟಿಟಿಗೆ ಬರುತ್ತಿದೆ. ಏಪ್ರಿಲ್ನಲ್ಲಿ ಬಿಡುಗಡೆಯಾದ ಈ ಚಿತ್ರ ಇಬ್ಬರು ಅವಳಿ ಸೋದರರ 1930ರ ಘಟನೆಯನ್ನಾಧರಿಸಿದ ಕಥೆಯನ್ನು ಹೊಂದಿದೆ.
01:05 PM (IST) Jun 23
ಈಗಾಗಲೇ ಆಶಿಕಾ ರಂಗನಾಥ್ ಈ ಚಿತ್ರದಲ್ಲಿ ನಟಿಸಿದ್ದು, ನಿಶ್ವಿಕಾ ನಾಯ್ಡು ಅವರು ಐಟಂ ಸ್ಪೆಷಲ್ ಹೆಜ್ಜೆ ಹಾಕಲಿದ್ದಾರೆ ಎನ್ನುವ ಸುದ್ದಿ ಇದೆ.
12:57 PM (IST) Jun 23
12:35 PM (IST) Jun 23
ಸಾಮಾನ್ಯವಾಗಿ ಡಿವೋರ್ಸ್ ಆದ ಬಳಿಕ ಪತಿ ಹಾಗು ಮುಂದಿನ ಸಂಬಂಧಗಳ ಜೊತೆ ಅನ್ಯೋನ್ಯತೆಯನ್ನು ಬಯಸುವುದು ತುಂಬಾ ಅಪರೂಪ. ಅನ್ಯೋನ್ಯತೆ ಹಾಗಿರಲಿ, ಸಾಮಾನ್ಯವಾಗಿ ಮಾಜಿ ಪತಿ, ಪತ್ನಿ ಹಾಗೂ ಹಾಲಿ ಪತಿ-ಪತ್ನಿ ನಡುವೆ ವೈಮನಸ್ಯ ಇರುವುದೇ ಹೆಚ್ಚು. ಆದರೆ, ಕರಿಷ್ಮಾ ಕುಟುಂಬ ಹಾಗೂ ಪ್ರಿಯಾ ಕುಟುಂಬಗಳ ಮಧ್ಯೆ..
12:27 PM (IST) Jun 23
ಇನ್ನೂ ಹೆಸರಿಡದ ಅಜಯ್ ರಾವ್ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ಮುಹೂರ್ತ ಆಗಿದೆ. ಯೋಗರಾಜ್ ಭಟ್ ಹಾಗೂ ದಿನಕರ್ ತೂಗುದೀಪ ಚಿತ್ರಕ್ಕೆ ಚಾಲನೆ ನೀಡಿದರು.
12:03 PM (IST) Jun 23
ಸ್ಯಾಂಡಲ್ವುಡ್ನಲ್ಲಿ ಮದುವೆ ಸುಗ್ಗಿ ಶುರು ಆದಂತಿದೆ. ಒಬ್ಬರಾದ ಮೇಲೆ ಒಬ್ಬರಂತೆ ಕಲಾವಿದರು ನಿಶ್ಚಿತಾರ್ಥ ಮಾಡಿಕೊಳ್ತಿದ್ದಾರೆ, ಮದುವೆ ಆಗ್ತಿದೆ. ಅಷ್ಟೇ ಅಲ್ಲದೆ ಕಲಾವಿದರ ಮನೆಗೆ ಹೊಸ ಸದಸ್ಯರ ಆಗಮನವೂ ಆಗುತ್ತಿದೆ.
11:36 AM (IST) Jun 23
ಯಾರು ಒಳ್ಳೆಯವರು, ಕೆಟ್ಟವರು ಅಂತ ಭಗವಂತ ನೋಡಿಕೊಳ್ಳಲಿ ಬಿಡಿ. ಅವರು ಅಷ್ಟೆಲ್ಲಾ ಹೇಳಿದ್ದಾರೆ, ಅವರೇ ದೊಡ್ಡೋರು, ನಾನೇ ಕೆಟ್ಟವನು ಎಂದು ನಿರ್ದೇಶಕ ನಾಗಶೇಖರ್ ಹೇಳಿದ್ದಾರೆ.
11:30 AM (IST) Jun 23
ಈ ವಾರ ಪ್ರೈಮ್ ವಿಡಿಯೋ, ನೆಟ್ಫ್ಲಿಕ್ಸ್, ಜಿಯೋ ಹಾಟ್ಸ್ಟಾರ್, ZEE5, ಸನ್ NXT ವೇದಿಕೆಗಳಲ್ಲಿ ಹೊಸ ಕಂಟೆಂಟ್ ಬಿಡುಗಡೆಯಾಗಲಿದೆ. ಈ ವಾರ ಬಿಡುಗಡೆಯಾಗಲಿರುವ ಸಿನಿಮಾ ಮತ್ತು ವೆಬ್ ಸೀರೀಸ್ಗಳ ವಿವರ ಇಲ್ಲಿದೆ.
11:10 AM (IST) Jun 23
ಮಾಜಿ ಪತಿ ನಿಧನದಿಂದ ಕರಿಷ್ಮಾ ಹೃದಯ ಮತ್ತಷ್ಟು ಭಾರವಾಗಿದೆ. ಪತಿಯಿಂದ ದೂರವಾಗಿರುವ ಕರೀಷ್ಮಾ ವೈಯುಕ್ತಿಕ ಬದುಕಿನಲ್ಲಿ ಕಣ್ಣೀರ ಕತೆಗಳೇ ಹೆಚ್ಚು. ಈ ಪೈಕಿ ಅಭಿಷೇಕ್ ಬಚ್ಚನ್ ಜೊತೆಗಿನ ಪ್ರೀತಿ , ಬಿರುಕು ತನ್ನನ್ನು ಏಕಾಂಗಿಯಾಗಿಸಿತು. ಈ ನೋವುಮಾತ್ರ ಘನಘೋರ ಎಂದಿದ್ದಾರೆ. ಅಷ್ಟಕ್ಕೂ ಏನಾಗಿತ್ತು?
11:07 AM (IST) Jun 23
`ಕುಬೇರ` ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ನಾಗಾರ್ಜುನ ಮಾಡಿದ್ದ ಕಾಮೆಂಟ್ಸ್ ಟ್ರೋಲ್ಸ್ಗೆ ಗುರಿಯಾಗಿದ್ದಕ್ಕೆ ಸ್ಪಷ್ಟನೆ ನೀಡಿದ್ದಾರೆ. `ಕುಬೇರ` ಸಕ್ಸಸ್ ಈವೆಂಟ್ನಲ್ಲಿ ಆಸಕ್ತಿಕರ ಹೇಳಿಕೆ ನೀಡಿದ್ದಾರೆ.
11:05 AM (IST) Jun 23
ಹಾಲಿವುಡ್ ನಿರ್ಮಾಪಕನ ಸಾಥ್ನಿಂದ ನಿತೀಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ರಾಮಾಯಣ’ಕ್ಕೆ ಹೆಚ್ಚಿನ ಬಲ ಬಂದಿದ್ದು ಈ ಸಿನಿಮಾ ಕಲ್ಪನೆಯನ್ನೂ ಮೀರಿ ಅದ್ದೂರಿತನದಿಂದ ತೆರೆಗೆ ಬರುವ ಸಾಧ್ಯತೆ ಇದೆ.
10:38 AM (IST) Jun 23
ಮೆಗಾಸ್ಟಾರ್ ಚಿರಂಜೀವಿ ಸೆನ್ಸೇಷನಲ್ ಹೇಳಿಕೆ ಕೊಟ್ಟಿದ್ದಾರೆ. ನಾಗಾರ್ಜುನ್ ಹಾದಿಯಲ್ಲೇ ತಾವೂ ಹೋಗ್ತೀವಿ ಅಂತ ಹೇಳಿದ್ದಾರೆ. ಹಾಗೇ ಪಾತ್ರಗಳು ಮಾಡೋಕೆ ರೆಡಿ ಅಂತಿದ್ದಾರೆ.
10:22 AM (IST) Jun 23
07:19 AM (IST) Jun 23
ಬೆಂಗಳೂರಿನ ಹಲವು ಸಮಸ್ಯೆಗಳ ಕುರಿತು ಈಗಾಗಲೇ ವಿಡಿಯೋ ಮೂಲಕ ಹೋರಾಟ ಮಾಡುತ್ತಿರುವ ನಟ ಅನಿರುದ್ಧ ಇದೀಗ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.