ಹಾಸ್ಯ​ಧಾರೆ ವೇಳೆಯೇ ಕಲಾವಿದ ಸಾವು, ನಟನೆ ಎಂದು ಸುಮ್ಮನಿದ್ದ ಪ್ರೇಕ್ಷಕರು!

Published : Jul 22, 2019, 09:26 AM IST
ಹಾಸ್ಯ​ಧಾರೆ ವೇಳೆಯೇ ಕಲಾವಿದ ಸಾವು, ನಟನೆ ಎಂದು ಸುಮ್ಮನಿದ್ದ ಪ್ರೇಕ್ಷಕರು!

ಸಾರಾಂಶ

ದುಬೈ​ನಲ್ಲಿ ವೇದಿಕೆ ಮೇಲೆ ಹಾಸ್ಯ ಮತ್ತು ನಟನೆ ಮಾಡುತ್ತಿದ್ದಾಗ ಹೃದಯಾಘಾತ| ಹಾಸ್ಯ​ಧಾರೆ ವೇಳೆಯೇ ಕಲಾವಿದ ಸಾವು, ನಟನೆ ಎಂದು ಸುಮ್ಮನಿದ್ದ ಪ್ರೇಕ್ಷಕರು| 

ದುಬೈ[ಜು.22]: ಭಾರತ ಮೂಲದ ಹಾಸ್ಯ​ನಟ ಮಂಜು​ನಾಥ್‌ ನಾಯ್ಡು (36) ದುಬೈ​ನಲ್ಲಿ ವೇದಿಕೆ ಮೇಲೆ ಹಾಸ್ಯ ಮತ್ತು ನಟನೆ ಮಾಡು​ತ್ತಲೇ ಹೃದಯ ಸ್ತಂಭ​ನ​ದಿಂದ ಸಾವಿ​ಗೀ​ಡಾದ ಘಟನೆ ಶುಕ್ರ​ವಾರ ನಡೆ​ದಿದೆ. ಆದರೆ ಇದನ್ನು ವೀಕ್ಷಿ​ಸು​ತ್ತಿದ್ದ ಸಭಿ​ಕರು ಇದೂ ಕೂಡ ನಟ​ನೆಯ ಭಾಗ ಎಂದು ಅದನ್ನು ನೋಡು​ತ್ತಲೇ ಕುಳಿ​ತಿ​ದ್ದರು.

ಕೆಲ ಹೊತ್ತಿನ ನಂತರ ನಾಯ್ಡು ಜತೆ​ಗಾ​ರರು ಹೋಗಿ ನೋಡಿ​ದಾಗ ಆಗಲೇ ಮಂಜು​ನಾಥ ಪ್ರಾಣ​ಪಕ್ಷಿ ಹಾರಿ​ಹೋ​ಗಿದ್ದು ಬೆಳಕಿಗೆ ಬಂದಿದೆ. ವೇದಿಕೆ ಮೇಲೆ ಬೆಂಚ್‌ ಮೇಲೆ ಕುಳಿತು ಹಾಸ್ಯ​ಧಾರೆ ಹರಿ​ಸು​ತ್ತಿದ್ದ ಮಂಜು​ನಾಥ್‌, ಮಾತಿನ ಮಧ್ಯೆ ತಮ್ಮ ಆರೋ​ಗ್ಯದ ಸ್ಥಿತಿ ಗಂಭೀ​ರ​ವಾ​ಗಿದೆ, ಅದರ ಬಗ್ಗೆ ತಮಗೆ ಭಯಂಕರ ಆತಂಕ​ವಿದೆ ಎಂದು ಹೇಳಿ​ಕೊ​ಳ್ಳು​ತ್ತಿ​ದ್ದರು.

ಹೀಗೆ ಹೇಳಿ​ಕೊ​ಳ್ಳು​ತ್ತಲೇ ಬೆಂಚ್‌​ನಿಂದ ನೆಲಕ್ಕೆ ಮಂಜು​ನಾಥ್‌ ಉರುಳಿದ್ದು, ಅದು ಹಾಸ್ಯದ ಭಾಗ ಎಂದೇ ತಿಳಿ​ದಿದ್ದ ಸಭಿ​ಕರಿಗೆ ನಂತ​ರ​ದಲ್ಲಿ ನೈಜತೆಯ ಅರಿ​ವಾ​ಗಿ​ದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?