
ಮಂಡ್ಯ(ಆ.16): ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿರುವುದರಿಂದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿರುವ ಕೆಆರ್ಎಸ್(ಕೃಷ್ಣರಾಜ ಸಾಗರ ಜಲಾಶಯ) ಅಣೆಕಟ್ಟೆಆ.15 ರಂದು ಸಂಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದೆ.
ಜಲಾಶಯ 124.80 ಅಡಿ ಎತ್ತರವಿದ್ದು, ಗುರುವಾರ 124.80 ಅಡಿ ಭರ್ತಿಯಾಗಿದೆ. 18978 ಕ್ಯುಸೆಕ್ ಒಳ ಹರಿವು ಬರುತ್ತಿದ್ದರೆ, ಕಾವೇರಿ ನದಿಗೆ 13,459 ಕ್ಯುಸೆಕ್ ಹಾಗೂ ನಾಲೆಗಳಿಗೆ 2761 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ.
ಒಂದೆಡೆ ಪ್ರವಾಹ; ಮತ್ತೊಂದೆಡೆ ಹನಿ ನೀರಿಗಾಗಿ ಜನರ ಪರಿತಾಪ!
ಆ.5ಕ್ಕೆ ಕೇವಲ 83 ಅಡಿ ಇದ್ದ ಜಲಾಶಯ 10 ದಿನಗಳಲ್ಲಿ 41 ಅಡಿ ಏರಿಕೆ ಕಂಡಿದೆ. ಕಳೆದ ವರ್ಷ ಜುಲೈ 25ಕ್ಕೆ ಜಲಾಶಯ ಸಂಪೂರ್ಣ ಭರ್ತಿಯಾಗಿತ್ತು. ಜಲಾಶಯದಿಂದ ನದಿ ಮೂಲಕ ತಮಿಳುನಾಡಿಗೆ ಸಾಕಷ್ಟುಪ್ರಮಾಣದಲ್ಲಿ ನೀರು ಬಿಡಲಾಗಿದೆ. ಆದರೆ, ನಾಲೆಗಳಿಗೆ ತಡವಾಗಿ ನೀರು ಹರಿಸಿದ್ದರಿಂದ ಕೆರೆ ಕಟ್ಟೆತುಂಬಲು ಇನ್ನೂ 15 ರಿಂದ 20 ದಿನಗಳ ಕಾಲ ಕಾಲಾವಕಾಶ ಬೇಕು.
ಮಳೆಗಾಗಿ ಹಾಡು ಹಾಡಿ ಪ್ರಾರ್ಥಿಸಿದ ಮಂಡ್ಯ ಶಾಸಕ