ಶಿವಮೊಗ್ಗ: ಕುಡಿಯುವ ನೀರಿಗೆ ಒಳಚರಂಡಿ ನೀರು, ವಾಂತಿ-ಭೇದಿ

By Kannadaprabha NewsFirst Published Aug 20, 2023, 10:15 PM IST
Highlights

ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರ ಪ್ರಾಣಕ್ಕೆ ಸಂಕಷ್ಟ ಎದುರಾಗಿದೆ. ಉಷಾ ನರ್ಸಿಂಗ್‌ ಹೋಂ ಬಳಿಯ ರಾಘವೇಂದ್ರ ನರ್ಸಿಂಗ್‌ ಹೋಂ ಬಳಿಯ ಬೀದಿಯಲ್ಲಿ ಕುಡಿಯುವ ನೀರಿಗೆ ಒಳಚರಂಡಿ ನೀರು ಮಿಶ್ರಣವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೊಬ್ಬರು ಬಂದು ಪರಿಶೀಲನೆ ನಡೆಸುತ್ತಿಲ್ಲ. ಯಾವುದೇ ಕ್ರಮವೂ ಕೈಗೊಂಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.

ಶಿವಮೊಗ್ಗ(ಆ.20): ನಗರದ ರವೀಂದ್ರ ನಗರದ ಸವಳಂಗ ರಸ್ತೆಯ ರಾಘವೇಂದ್ರ ನರ್ಸಿಂಗ್‌ ಹೋಂ ಸುತ್ತಮುತ್ತ ಇರುವ ಮನೆ​ಗ​ಳಿಗೆ ಪೂರೈ​ಕೆ​ಯಾ​ಗುವ ಕುಡಿ​ಯುವ ನೀರಿ​ನಲ್ಲಿ ಒಳಚರಂಡಿ ನೀರು ಮಿಶ್ರಣಗುತ್ತಿದೆ. ಈ ಸಮಸ್ಯೆ ತಿಳಿಯದೇ ನಾಗ​ರಿ​ಕರು ಕಲುಷಿತ ನೀರನ್ನೇ ದುಸ್ಥಿ​ತಿ ನಿರ್ಮಾಣವಾಗಿದೆ. ಈಗಾ​ಗಲೇ ಕೆಲ ಮಹಿಳೆಯರು, ಹಿರಿಯರಲ್ಲಿ ವಾಂತಿ, ಭೇದಿ ಜೊತೆಗೆ ಆರೋಗ್ಯ ಸಮಸ್ಯೆಗಳು ಎದುರಾಗಿವೆ.

ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರ ಪ್ರಾಣಕ್ಕೆ ಸಂಕಷ್ಟ ಎದುರಾಗಿದೆ. ಉಷಾ ನರ್ಸಿಂಗ್‌ ಹೋಂ ಬಳಿಯ ರಾಘವೇಂದ್ರ ನರ್ಸಿಂಗ್‌ ಹೋಂ ಬಳಿಯ ಬೀದಿಯಲ್ಲಿ ಕುಡಿಯುವ ನೀರಿಗೆ ಒಳಚರಂಡಿ ನೀರು ಮಿಶ್ರಣವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೊಬ್ಬರು ಬಂದು ಪರಿಶೀಲನೆ ನಡೆಸುತ್ತಿಲ್ಲ. ಯಾವುದೇ ಕ್ರಮವೂ ಕೈಗೊಂಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.

ಇಡೀ ರಾಜ್ಯ ಬರಗಾಲಪೀಡಿತ ಎಂದು ಘೋಷಿಸಿ: ಸಂಸದ ರಾಘವೇಂದ್ರ ಆಗ್ರ​ಹ

15 ದಿನಗಳಿಂದ ಜಲಮಂಡಳಿ ಪೂರೈಸುತ್ತಿರುವ ನೀರಿನಲ್ಲಿ ಒಳಚರಂಡಿ ನೀರು ಮಿಶ್ರಣವಾಗುತ್ತಿದೆ. ಎರಡು ದಿನಗಳಿಂದ ನೀರಿನಲ್ಲಿ ದುರ್ವಾಸನೆ ಬರುತ್ತಿದೆ. ನೀರು ಸಹ ಕುಡಿಯಲು ಯೋಗ್ಯವಾಗಿಲ್ಲ. ಈ ಗಂಭೀರ ಸಮಸ್ಯೆ ಬಗ್ಗೆ ಪಾಲಿಕೆ ಅಧಿಕಾರಿಗಳ ಗಮಕ್ಕೆ ತರಲಾ​ಗಿದೆ. ಆದರೆ, ಇದು ನಮ್ಮ ವ್ಯಾಪ್ತಿಗೆ ಬರೋದಿಲ್ಲ ಅಂತ ಒಬ್ಬರ ಮೇಲೋಬ್ಬರು ಹೇಳುತ್ತ ಜವಾ​ಬ್ದಾ​ರಿ​ಯಿಂದ ನುಣು​ಚಿ​ಕೊ​ಳ್ಳುತ್ತಿದ್ದಾರೆ. ಕಲುಷಿತ ನೀರು ಕುಡಿದ ಕೆಲವರಿಗೆ ವಾಂತಿ, ಭೇದಿ ಶುರುವಾಗಿದೆ. ಹೆಚ್ಚು ಕಮ್ಮಿಯಾದರೆ ಯಾರು ಹೊಣೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಿ​ಶೀ​ಲಿಸಿ ಕ್ರಮ: ಭರ​ವಸೆ

ಸವ​ಳಂಗ ರಸ್ತೆ​ಯಲ್ಲಿ ಫ್ಲೈಓವರ್‌ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ವೇಳೆ ಪೈಪ್‌ಲೈನ್‌ ಡ್ಯಾಮೇಜ್‌ ಆಗಿ ಆ ರೀತಿ ಕೊಳ​ಕು ನೀರು ಪೂರೈಕೆ ಆಗುತ್ತಿರಬಹುದು. ಈ ಬಗ್ಗೆ ಏನಾಗಿದೆ ಎಂಬುದನ್ನು ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕುಡಿಯುವ ನೀರು ಸರಬರಾಜು ಮಂಡಳಿ ಅಧಿಕಾರಿಯೊಬ್ಬರು ಭರ​ವಸೆ ನೀಡಿ​ದ್ದಾರೆ.

click me!