ಚುನಾವಣೆ : ಕಾಂಗ್ರೆಸ್ ಮುಖಂಡರು ಅವಿರೋಧ ಆಯ್ಕೆ

Kannadaprabha News   | Asianet News
Published : Sep 25, 2020, 12:32 PM IST
ಚುನಾವಣೆ : ಕಾಂಗ್ರೆಸ್ ಮುಖಂಡರು ಅವಿರೋಧ ಆಯ್ಕೆ

ಸಾರಾಂಶ

ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕಾಗಿವೆ. ಇದೇ ವೇಳೆ ಮೂವರು ಕಾಂಗ್ರೆಸ್ ಮುಖಂಡರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮದ್ದೂರು (ಸೆ.25): ಟಿಎಪಿಸಿಎಂಎಸ್‌ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಸೆ.30 ರಂದು ನಡೆಯುವ ಚುನಾವಣೆಯಲ್ಲಿ ಅಂತಿಮವಾಗಿ 20 ಮಂದಿ ಕಣದಲ್ಲಿ ಇದ್ದಾರೆ.

ಚುನಾವಣೆಯ ಎ ಮತ್ತು ಬಿ ತರಗತಿಯಿಂದ ಒಟ್ಟು 62 ಮಂದಿ ನಾಮಪತ್ರ ಸಲ್ಲಿಸಿದ್ದರು. ಎ ತರಗತಿಯಿಂದ 6 ಮಂದಿ, ಬಿ ತರಗತಿಯಿಂದ 14 ಮಂದಿ ಉಮೇದುವಾರಿಕೆ ಹಿಂಪಡೆದಿದ್ದಾರೆ. ಇದರಲ್ಲಿ 23 ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿಗಳಾದ ತಹಸೀಲ್ದಾರ್‌ ಎಚ್‌ .ವಿ.ವಿಜಯಕುಮಾರ್‌ ತಿಳಿಸಿದ್ದಾರೆ.

ಬಿ ತರಗತಿಯಿಂದ ಕೊಪ್ಪ, ಆತಗೂರು ಹಾಗೂ ಕಸಬಾ ಹೋಬಳಿ ಕ್ಷೇತ್ರಗಳಿಂದ 3 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಿಎ ಕೆರೆ ಹೋಬಳಿ ಎ ತರಗತಿ ಸಾಮಾನ್ಯ ಕ್ಷೇತ್ರದಿಂದ ನಂದೀಶ್‌, ಕೆ.ವಿ. ಶ್ರೀನಿವಾಸ, ಕೆ.ಟಿ.ಶೇಖರ್‌ , ಎಸ್‌ .ಡಿ.ಹೊನ್ನೇಗೌಡ ಕಣದಲ್ಲಿ ಉಳಿದಿದ್ದಾರೆ.

ಬಿಜೆಪಿಯೊಂದಿಗೆ ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ ಎಂದ ಜೆಡಿಎಸ್‌ ನಾಯಕ

ಬಿ ತರಗತಿ ಮಹಿಳಾ ಮತ್ತು ಸಾಮಾನ್ಯ ಕ್ಷೇತ್ರದಿಂದ ಕೆ.ಎಂ.ಅಮೂಲ್ಯ, ಎಚ್‌ .ಕೆ.ಇಂದಿರಾ, ಎ.ಕೃಷ್ಣ, ಗೌರಮ್ಮ, ಜಾವೀದ್‌ ಉಲ್ಲಾಖಾನ್‌ , ಮೊಹೆಬ್‌ ಪಾಷ, ಬೊಮ್ಮಲಿಂಗಯ್ಯ, ಎಸ್‌ .ಬಿ.ಮಹದೇವು, ಎಂ.ಎಂ.ಮಹೇಶ, ಎಸ್‌ .ಮಹೇಶ್‌ , ಎಂ.ಎ. ಮುರುಳಿ, ಎಸ್‌ .ಜಿ.ಮಂಜುಳಾ, ಸಿ.ಮಂಜುಳಾ, ರಾಮಕೃಷ್ಣ, ಬಿ.ಶ್ರೀನಿವಾಸಮೂರ್ತಿ, ಸಿ.ಪಿ.ಸುಧಾ, ಹನುಮಂತಸ್ವಾಮಿ ಕಣದಲ್ಲಿ ಇದ್ದಾರೆ. ಚುನಾವಣೆ ಸೆ.30 ರಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಡೆಯಲಿದೆ. ಆ ನಂತರ ಮತ ಎಣಿಕೆ ನಡೆದು ಫಲಿತಾಂಶ ಘೋಷಣೆ ಮಾಡಲಾಗುವುದು. ಈ ವೇಳೆ ಸಹಾಯಕ ಚುನಾವಣಾಧಿಕಾರಿ ರಾಜು ಇದ್ದರು.

BSY ಸರ್ಕಾರದ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ಮಂಡನೆ..! ...

ಮೂವರು ಕಾಂಗ್ರೆಸ್‌ ಬೆಂಬಲಿತರು ಆಯ್ಕೆ : ಮದ್ದೂರು: ಟಿಎಪಿಸಿಎಂಎಸ್‌ನ ಚುನಾವಣೆಯ ಕೊಪ್ಪ, ಆತಗೂರು ಹಾಗೂ ಕಸಬಾ ಕ್ಷೇತ್ರಗಳಿಂದ ಮೂವರು ಕಾಂಗ್ರೆಸ್‌ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೊಪ್ಪ ಸಾಮಾನ್ಯ ಎ ತರಗತಿ ಕ್ಷೇತ್ರದಿಂದ ಎಚ್‌ .ಕೆ.ಕರಿಯಪ್ಪ, ಆತಗೂರು ಹೋಬಳಿ ಸಾಮಾನ್ಯ ಕ್ಷೇತ್ರದಿಂದ ಶಂಕರಲಿಂಗಯ್ಯ, ಕಸಬಾ ಕ್ಷೇತ್ರದ ಸಾಮಾನ್ಯ ಎ ತರಗತಿಯಿಂದ ಬಿ.ರಾಘವ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂವರನ್ನು ಕೆಪಿಸಿಸಿ ಸದಸ್ಯ ಎಸ್‌ .ಗುರುಚರಣ್‌ , ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕದಲೂರು ರಾಮಕೃಷ್ಣ ಅಭಿನಂದಿಸಿದರು.

ನಂತರ ಜಂಟಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಕದಲೂರು ರಾಮಕೃಷ್ಣ, ಮೂರು ಕ್ಷೇತ್ರಗಳಿಂದ ಕಾಂಗ್ರೆಸ್‌ ಬೆಂಬಲಿತರು ಆಯ್ಕೆಯಾಗಿರುವುದರಿಂದ ಸಹಕಾರ ಸಂಘದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಉಳಿದ 5 ಕ್ಷೇತ್ರಗಳಿಂದ ಕಾಂಗ್ರೆಸ್‌ ಬೆಂಬಲಿತರು ಗೆಲುವು ಸಾಧಿಸಲಿದ್ದಾರೆ. ಮತದಾರರು ಕಾಂಗ್ರೆಸ್‌ ಬೆಂಬಲಿತರಿಗೆ ಮತ ನೀಡಿ ಆಯ್ಕೆಗೆ ಸಹಕಾರ ನೀಡಬೇಕು ಎಂದು ಕೋರಿದರು. ಈ ವೇಳೆ ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕ ಕೆ.ಜೋಗಿಗೌಡ, ತಾಪಂ ಮಾಜಿ ಸದಸ್ಯ ಕೆ.ಆರ್‌ .ಮಹೇಶ್‌ , ಮುಖಂಡರಾದ ಸತೀಶ್‌, ಸಿದ್ದು ಇದ್ದರು.

PREV
click me!

Recommended Stories

ಮಹಿಳೆ ಬಲಿ ಪಡೆದ ಚಿರತೆ ಕೊನೆಗೂ ಸೆರೆ, ದಾಳಿ ಮಾಡಿದ ಅದೇ ಸ್ಥಳದಲ್ಲೇ ಕಾರ್ಯಾಚರಣೆ
ಕುಕ್ಕೆ ದೇಗುಲದ ತೆರಿಗೆ ವಿವಾದ ತೆರೆ, ನೋಟಿಸ್‌ ಬೆನ್ನಲ್ಲೇ ಗ್ರಾಮ ಪಂಚಾಯತ್‌ಗೆ 2.67 ಕೋಟಿ ಪಾವತಿಸಿದ ಆಡಳಿತ ಮಂಡಳಿ