ಒಳಗೊಳಗೆ ನಡೆಯುತ್ತಿದೆ JDSನಲ್ಲಿ ತಯಾರಿ : ಶೀಘ್ರ ನಿಖಿಲ್‌ ರಾಜಕೀಯ ಶುರು

By Kannadaprabha NewsFirst Published Nov 19, 2020, 3:59 PM IST
Highlights

ಜೆಡಿಎಸ್‌ನಲ್ಲಿ ಒಳಗೊಳಗೆ ತಯಾರಿಯು ನಡೆಯುತ್ತಿದೆ. ರಾಜಕೀಯ ಚಟುವಟಿಕೆಗಳು ಜೋರಾಗಿದ್ದು, ಹೊ ಸುದ್ದಿಗಳು ಹೊರಬರುತ್ತಿದೆ

ರಾಮ​ನ​ಗರ (ನ.19):  2023ರ ವಿಧಾ​ನ​ಸಭಾ ಕ್ಷೇತ್ರ ಚುನಾ​ವಣೆ ಹಾಗೂ ಜೆಡಿ​ಎಸ್‌ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಸ್ಪರ್ಧೆ ಬಗ್ಗೆಯಾಗಲಿ ಪಕ್ಷ​ದಲ್ಲಿ ಯಾವುದೇ ಚರ್ಚೆ​ಗಳು ನಡೆ​ದಿಲ್ಲ ಎಂದು ಶಾಸಕಿ ಅನಿತಾ ಕುಮಾ​ರ​ಸ್ವಾಮಿ ಪ್ರತಿ​ಕ್ರಿ​ಯಿ​ಸಿ​ದರು.

ನಗ​ರ​ದಲ್ಲಿ ಆರ್‌ಟಿಒ ಕಚೇ​ರಿ​ಗಾಗಿ ನೂತನ ಕಟ್ಟಡ ನಿರ್ಮಾ​ಣಕ್ಕೆ ಭೂಮಿ ಪೂಜೆ ನೆರೆ​ವೇ​ರಿಸಿದ ನಂತ​ರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ​ದ ಅವರು, ಪುತ್ರ ನಿಖಿಲ್‌ಗೆ ಕ್ಷೇತ್ರ ತ್ಯಾಗ ಮಾಡು​ವಿರಾ ಎಂಬ ಪ್ರಶ್ನೆಗೆ ಈಗ ಅದರ ಚರ್ಚೆ ಅಗ​ತ್ಯ​ವಿಲ್ಲ ಎಂದಷ್ಟೇ ಉತ್ತ​ರಿ​ಸಿ​ದ​ರು.

ರಾಮ​ನ​ಗರ ನಮ್ಮ ಕುಟುಂಬದ ಕರ್ಮ​ಭೂ​ಮಿ. ನಿಖಿಲ್‌ ಜೆಡಿ​ಎಸ್‌ ರಾಜ್ಯ ಯುವ ಘಟ​ಕದ ಅಧ್ಯ​ಕ್ಷ​ನಾಗಿ ಹಾಗೂ ಇಲ್ಲಿನ ಜನರ ಪ್ರೀತಿಗೆ ಪಾತ್ರ​ನಾಗಿದ್ದಾನೆ. ಪಕ್ಷ ಸಂಘಟನೆಯನ್ನು ಜಿಲ್ಲೆಯಿಂದಲೇ ಆರಂಭಿಸಬೇಕು ಎಂಬ ಕಾರಣಕ್ಕೆ ನಿಖಿಲ್ ಹೆಚ್ಚಿನ ಒತ್ತು ನೀಡುತ್ತಿದ್ದಾನೆ. ಜೊತೆಗೆ, ಪಕ್ಷ ಬಲಪಡಿಸುವ ಸಲುವಾಗಿ ರಾಜ್ಯದ ಎಲ್ಲೆಡೆ ಸಂಚಾರ ನಡೆಸುತ್ತಿದ್ದಾನೆ. ಇದರೊಟ್ಟಿಗೆ ರಾಮನಗರಕ್ಕೂ ಬಂದಿದ್ದಾನೆ ಎಂದು ಸಮರ್ಥಿಸಿಕೊಂಡರು.

ಕ್ಷೇತ್ರವನ್ನು ಪುತ್ರ ನಿಖಿಲ್ಗೆ ಬಿಟ್ಟು ಕೊಡಲು ಎಲ್ಲ ರೀತಿಯ ಸಿದ್ಧತೆಗಳನ್ನು ಒಳಗೊಳಗೆ ಜೆಡಿಎಸ್‌ ಪಕ್ಷ ಮಾಡಿಕೊಳ್ಳುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ರಾಮನಗರಲ್ಲಿ ನಿಖಿಲ್ ಕುಮಾರಸ್ವಾಮಿ ತಮ್ಮ ಕಾರ್ಯ ಚಟುವಟಿಕೆಗಳನ್ನು ಶುರು ಮಾಡಿಕೊಂಡಿದ್ದಾರೆ. ಈಗಾಗಲೇ ಸಿದ್ಧತೆಯಲ್ಲಿ ತೊಡ​ಗಿ​ರುವ ಅವರು ಜನರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಕುಮಾರಣ್ಣನ ಜತೆ ಮಾತನಾಡಿ ಬಗೆಹರಿಸಿಕೊಡುತ್ತೇನೆ ಎಂಬ ಭರವಸೆ ಕೊಡುತ್ತಿದ್ದಾರೆ.

ತಮ್ಮ ಅನಾರೋಗ್ಯ ಸಮಸ್ಯೆ ಬಗ್ಗೆ ತಿಳಿಸಿದ ಅನಿತಾ ಕುಮಾರಸ್ವಾಮಿ : ವೈದ್ಯರ ಸೂಚನೆ ಇತ್ತೆಂದ ಶಾಸಕಿ ..

ಡಿ.ಕೆ. ​ಶಿ​ವ​ಕು​ಮಾರ್‌ ಕಾಂಗ್ರೆ​ಸ್‌ ಪಕ್ಷದ ರಾಜ್ಯಾ​ಧ್ಯ​ಕ್ಷ​ರಾ​ಗಿ ತಮ್ಮ ಪಕ್ಷ ಸಂಘ​ಟ​ನೆಯಲ್ಲಿ ತೊಡ​ಗಿ​ಸಿ​ಕೊಂಡಿ​ದ್ದಾರೆ. ಎಚ್‌.​ಡಿ.​ಕು​ಮಾ​ರ​ಸ್ವಾಮಿ ಅವರು ತಮ್ಮ ಪಕ್ಷದ ಸಂಘ​ಟ​ನೆ​ಯಲ್ಲಿ ತೊಡ​ಗಿದ್ದಾರೆ. ಇಬ್ಬರು ತಮ್ಮ ತಮ್ಮ ಪಕ್ಷ​ಗ​ಳಿ​ಗಾಗಿ ಶ್ರಮಿ​ಸು​ತ್ತಿ​ದ್ದಾರೆ ಎಂದು ಪ್ರಶ್ನೆ​ಯೊಂದಕ್ಕೆ ಉತ್ತ​ರಿ​ಸಿ​ದರು.

ಕ್ಷೇತ್ರಕ್ಕೆ ತಿಂಗಳುಗಟ್ಟಲೆ ಬರ​ಲಿಲ್ಲ ಎಂದು ನಾಗ​ರೀ​ಕರು ಆಕ್ರೋ​ಶ​ಗೊಂಡಿ​ದ್ದಾರೆ ಎಂದು ಸುದ್ದಿ​ಗಾ​ರರು ಗಮನ ಸೆಳೆ​ದಾಗ ಪ್ರತಿ​ಕ್ರಿ​ಯಿ​ಸಿದ ಅನಿತಾ, ತಮಗೆ ಸೈನಸ್‌ ಸಮಸ್ಯೆ ಇದ್ದಿ​ದ್ದ​ರಿಂದ ವೈದ್ಯರು ಮೂರು ತಿಂಗ​ಳು​ಗಳ ಕಾಲ ವಿಶ್ರಾಂತಿ ಪಡೆ​ಯು​ವಂತೆ ಸೂಚಿ​ಸಿ​ದ್ದ​ರಿಂದ ಕ್ಷೇತ್ರಕ್ಕೆ ಬರ​ಲಾ​ಗ​ಲಿಲ್ಲ. ಆದರೆ, ಕ್ಷೇತ್ರದ ಅವ​ಶ್ಯ​ಕ​ತೆ​ಗಳ ಬಗ್ಗೆ ತಾವು ಅಧಿ​ಕಾ​ರಿ​ಗ​ಳೊಂದಿಗೆ ಸಂಪ​ರ್ಕ​ದಲ್ಲಿ ಇದ್ದ​ದ್ದಾಗಿ ತಿಳಿ​ಸಿ​ದರು. ಜೆಡಿ​ಎಸ್‌ ಮುಖಂಡ​ರಾದ ರಾಜ​ಶೇ​ಖರ್‌, ಬಿ.ಉ​ಮೇಶ್‌, ಅಜಯ್‌ ದೇವೇ​ಗೌ​ಡ, ಪಿ.ಅ​ಶ್ವಥ್‌, ಜಯ​ಕು​ಮಾರ್‌ , ರಾಜ​ಶೇ​ಖರ್‌ , ಕುಮಾರ್‌ ಗೌಡ ಮತ್ತಿತ​ರರು ಹಾಜ​ರಿ​ದ್ದರು.

click me!