ತುಂಗಭದ್ರಾ ಎಡ ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿ ಸಿಂಧನೂರು ಬಂದ್

Published : Nov 25, 2019, 09:10 AM IST
ತುಂಗಭದ್ರಾ ಎಡ ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿ ಸಿಂಧನೂರು ಬಂದ್

ಸಾರಾಂಶ

ಐಸಿಸಿ ಸಭೆಯಲ್ಲಿ ಮಾರ್ಚ ಅಂತ್ಯದವರೆಗೂ ನೀರು ಬಿಡಲು ನಿರ್ಧರಿಸಲಾಗಿತ್ತು| ಏಪ್ರಿಲ್ 10 ರವರೆಗೆ ನೀರು ಬಿಡುವಂತೆ ಬೇಡಿಕೆ ಇಡಲಾಗಿತ್ತು| ನೀರು ಬಿಡುವ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬಾರದ ಹಿನ್ನಲೆಯಲ್ಲಿ ಬಂದ್ ಗೆ ಸೂಚನೆ| ನೀರಿಗಾಗಿ ಪಕ್ಷಾತೀತವಾಗಿ ಬಂದ್ ಗೆ ಬೆಂಬಲ|

ರಾಯಚೂರು(ನ.25): ತುಂಗಭದ್ರಾ ಎಡ ನಾಲೆಗೆ ನೀರು ಬಿಡುವಂತೆ ಆಗ್ರಹಿಸಿ ಕಾಂಗ್ರೆಸ್‌ ಪಕ್ಷ ಇಂದು(ಸೋಮವಾರ) ಸಿಂಧನೂರು ನಗರ ಬಂದ್ ಗೆ ಕರೆ ನೀಡಿದೆ. ತುಂಗಭದ್ರಾ ಐಸಿಸಿ ಸಭೆಯಲ್ಲಿ ನಾಲೆಗೆ ನೀರು ಬಿಡುವ ಬಗ್ಗೆ ಸ್ಪಷ್ಟ ನಿರ್ಧಾರ ಬಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಸಿಂಧನೂರು ಬಂದ್ ಗೆ ಕರೆ ನೀಡಿದೆ. 

ಐಸಿಸಿ ಸಭೆಯಲ್ಲಿ ಮಾರ್ಚ ಅಂತ್ಯದವರೆಗೂ ನೀರು ಬಿಡಲು ನಿರ್ಧರಿಸಲಾಗಿತ್ತು. ಆದರೆ, ಏಪ್ರಿಲ್ 10 ರವರೆಗೆ ನೀರು ಬಿಡುವಂತೆ ಬೇಡಿಕೆ ಇಡಲಾಗಿತ್ತು. ಆದರೆ, ನೀರು ಬಿಡುವ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬಾರದ ಹಿನ್ನಲೆಯಲ್ಲಿ ಬಂದ್ ಗೆ ಸೂಚನೆ ನೀಡಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇಂದು ಬೆಳಗ್ಗೆಯಿಂದಲೇ ಬಹುತೇಕ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿವೆ. ನೀರಿಗಾಗಿ ಪಕ್ಷಾತೀತವಾಗಿ ಬಂದ್ ಗೆ ಬೆಂಬಲ ವ್ಯಕ್ತವಾಗುತ್ತಿದೆ. ಆದರೆ, ಇಂದು ನಡೆಯಲಿರುವ ಪದವಿ ಪರೀಕ್ಷೆಗಳಿಗೆ ಯಾವುದೇ ತೊಂದರೆ ಇಲ್ಲ, ಹಾಗೂ ಎಂದಿನಂತೆ ಬಸ್ ಸಂಚಾರ ಆರಂಭವಾಗಿದೆ. 
 

PREV
click me!

Recommended Stories

RGUHS ಅಡಿ ಬರುವ ಕಾಲೇಜುಗಳಲ್ಲಿ ಪರೀಕ್ಷಾ ಶುಲ್ಕ ಹಗರಣ; ವಿದ್ಯಾರ್ಥಿಗಳ ಆಕ್ರೋಶ!
ಕ್ಷೇತ್ರ ಪುನರ್‌ವಿಂಗಡಣೆ ಹಿಂದುತ್ವವಾದಿಗಳ ಜನಸಂಖ್ಯೆ ಹೆಚ್ಚಳದ ಅಜೆಂಡಾಕ್ಕೆ ಪೂರಕ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿಳಿಮಲೆ