ಭೂಹಗರಣ ತನಿಖೆಗೆ ಸಿಂಧೂರಿ ನೇಮಿಸಿ: ವಿಶ್ವನಾಥ್‌

Kannadaprabha News   | Asianet News
Published : Jun 11, 2021, 07:58 AM ISTUpdated : Jun 11, 2021, 09:01 AM IST
ಭೂಹಗರಣ ತನಿಖೆಗೆ ಸಿಂಧೂರಿ ನೇಮಿಸಿ: ವಿಶ್ವನಾಥ್‌

ಸಾರಾಂಶ

* ಚಾಮುಂಡಿಬೆಟ್ಟದ ಸುತ್ತಮುತ್ತ ಒತ್ತುವರಿ * ಭೂ ಅಕ್ರಮ ಸಂಬಂಧ 4 ಆದೇಶ ಹೊರಡಿಸಿದ್ದ ಹಿಂದಿನ ಡಿಸಿ ರೋಹಿಣಿ ಸಿಂಧೂರಿ * ಬಫರ್‌ ಜೋನ್‌ನಲ್ಲಿ ನಡೆಯುತ್ತಿದೆ ಅಕ್ರಮ 

ಮೈಸೂರು(ಜೂ.11): ಮೈಸೂರು ಸುತ್ತಮುತ್ತ ಭೂ ಹಗರಣಗಳ ತನಿಖೆಗೆ ರೋಹಿಣಿ ಸಿಂಧೂರಿಯನ್ನು ವಿಶೇಷಾಧಿಕಾರಿಯಾಗಿ ನೇಮಿಸಬೇಕು ಎಂದು ಬಿಜೆಪಿ ಎಂಎಲ್ಸಿ ಎಚ್‌.ವಿಶ್ವನಾಥ್‌ ಮನವಿ ಮಾಡಿದ್ದಾರೆ. 

ನಗರದಲ್ಲಿ ಮಾತನಾಡಿದ ಅವರು, ಚಾಮುಂಡಿಬೆಟ್ಟದ ಸುತ್ತಮುತ್ತ ಸಹ ಒತ್ತುವರಿಯಾಗಿದೆ. ಹೀಗಾಗಿ, ಈ ತನಿಖೆಗೆ 6 ತಿಂಗಳ ಕಾಲ ರೋಹಿಣಿ ಸಿಂಧೂರಿ ಅವರನ್ನು ವಿಶೇಷಾಧಿಕಾರಿಯಾಗಿ ನೇಮಿಸಬೇಕು. ಈ ಸಂಬಂಧ ಶನಿವಾರ ಅಥವಾ ಸೋಮವಾರ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ಎಚ್‌.ವಿಶ್ವನಾಥ್‌ ಹೇಳಿದ್ದಾರೆ. 

ರೋಹಿಣಿ ನಿವೃತ್ತಿಯಾಗಿ ಆಂಧ್ರಕ್ಕೆ ಹೋಗಿ ಅಡಿಗೆ, ಮಕ್ಕಳು ನೋಡ್ಕೊಂಡ್ ಇರ್ಲಿ : ಸಾರಾ ಚಾಲೇಂಜ್

ಹಿಂದಿನ ಡಿಸಿ ರೋಹಿಣಿ ಸಿಂಧೂರಿ ಭೂ ಅಕ್ರಮ ಸಂಬಂಧ 4 ಆದೇಶ ಹೊರಡಿಸಿದ್ದಾರೆ. ಇದನ್ನು ತುರ್ತಾಗಿ ಜಾರಿಗೊಳಿಸಬೇಕು. ಸುಪ್ರೀಂಕೋರ್ಟ್‌ ಆದೇಶ ಇದೆ. ಬಫರ್‌ ಜೋನ್‌ನಲ್ಲಿ ಅಕ್ರಮ ನಡೆಸಲಾಗುತ್ತಿದೆ. ಇದರ ಬಗ್ಗೆ ನಿಗದಿತ ಅವಧಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.

PREV
click me!

Recommended Stories

ಹಾಸನದಲ್ಲಿ ಮಾಜಿ ಶಾಸಕ ಪ್ರೀತಂ ಗೌಡ ಬೀದಿ ರಂಪಾಟಕ್ಕೆ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ!
ಭ್ರಷ್ಟರ ಬೇಟೆ: ರೆಡ್ ಹ್ಯಾಂಡ್‌ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಪಿಡಬ್ಲ್ಯೂಡಿ ಎಂಜಿನಿಯರ್ ಹಾಗೂ ಅಕೌಂಟೆಂಟ್!