ವಿದ್ಯುತ್ ಬಾಕಿ ಬಿಲ್ ಪಾವತಿಗೆ ಇಂದೇ ಕೊನೆಯ ದಿನ: ಕಟ್ಟದಿದ್ರೆ ಗೃಹ ಜ್ಯೋತಿ ಯೋಜನೆ ಸಿಗಲ್ಲ..!

By Girish GoudarFirst Published Sep 30, 2023, 9:00 AM IST
Highlights

ವಿದ್ಯುತ್ ಬಾಕಿ ಉಳಿಸಿದ್ರೆ ಉಚಿತ ವಿದ್ಯುತ್ ಯೋಜನೆ ರದ್ದಾಗಲಿದೆ. ಸೆ.30 ಒಳಗೆ ವಿದ್ಯುತ್ ಪಾವತಿಗೆ ಜೆಸ್ಕಾಂ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಪಂಚಾಯ್ತಿ ಮೂಲಕ ವಿದ್ಯುತ್ ಬಾಕಿ ಬಿಲ್ ಪಾವತಿಗೆ ಮನವಿ ಜೆಸ್ಕಾಂ ಮಾಡಿದೆ. 

ಬಳ್ಳಾರಿ(ಸೆ.30): ವಿದ್ಯುತ್ ಬಾಕಿ ಬಿಲ್ ಪಾವತಿಗೆ ಇಂದೇ(ಸೆ.30) ಕೊನೆಯ ದಿನವಾಗಿದೆ. ಇಂದು ವಿದ್ಯುತ್ ಬಾಕಿ ಬಿಲ್ ಪಾವತಿ ಮಾಡದಿದ್ರೆ ಗೃಹ ಜ್ಯೋತಿ ಯೋಜನೆಯ ಲಾಭ ಸಿಗೋದಿಲ್ಲ ಎಂದು ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. 

ಇಂದು ಸಂಜೆಯೊಳಗೆ ಬಾಕಿ ವಿದ್ಯುತ್ ಪಾವತಿಸುವಂತೆ ಗ್ರಾಹಕರಿಗೆ ಜೆಸ್ಕಾಂ ಸೂಚನೆ ನೀಡಿದೆ. ಬಳ್ಳಾರಿ ನಗರದ ಕಸದ ವಾಹನಗಳ ಮೂಲಕ ಜೆಸ್ಕಾಂ ಅಧಿಕಾರಿಗಳು ಸಂದೇಶ ಸಾರುತ್ತಿದ್ದಾರೆ. 

ವಿದ್ಯುತ್‌ ಉತ್ಪಾದನೆ ಕುಸಿತ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ತರಾಟೆ

ವಿದ್ಯುತ್ ಬಾಕಿ ಉಳಿಸಿದ್ರೆ ಉಚಿತ ವಿದ್ಯುತ್ ಯೋಜನೆ ರದ್ದಾಗಲಿದೆ. ಸೆ.30 ಒಳಗೆ ವಿದ್ಯುತ್ ಪಾವತಿಗೆ ಜೆಸ್ಕಾಂ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಪಂಚಾಯ್ತಿ ಮೂಲಕ ವಿದ್ಯುತ್ ಬಾಕಿ ಬಿಲ್ ಪಾವತಿಗೆ ಮನವಿ ಜೆಸ್ಕಾಂ ಮಾಡಿದೆ. ವಿದ್ಯುತ್ ಬಿಲ್ ಬಾಕಿ ಉಳಿಸಿದ್ರೇ ಗೃಹ ಜ್ಯೋತಿ ಯೋಜನೆಯಿಂದ ಕೈ ಬಿಡ್ತಿವಿ ಎಂಬ ಸಂದೇಶ ಸಾರುತ್ತಿದೆ. 

click me!