ಗುಡ್ಡ ಕುಸಿತ: ಮಾರ್ಗ ಮಧ್ಯೆ ಸಿಲುಕಿದ ನಿಜಾಮುದ್ದೀನ್‌-ಗೋವಾ ಎಕ್ಸಪ್ರೆಸ್‌ ರೈಲು

Kannadaprabha News   | Asianet News
Published : Aug 07, 2020, 10:16 AM IST
ಗುಡ್ಡ ಕುಸಿತ: ಮಾರ್ಗ ಮಧ್ಯೆ ಸಿಲುಕಿದ ನಿಜಾಮುದ್ದೀನ್‌-ಗೋವಾ ಎಕ್ಸಪ್ರೆಸ್‌ ರೈಲು

ಸಾರಾಂಶ

ಗುಡ್ಡ ಕುಸಿತದಿಂದ ಮಾರ್ಗ ಮಧ್ಯೆ ಸಿಲುಕಿದನಿಜಾಮುದ್ದೀನ್‌-ಗೋವಾ ಎಕ್ಸಪ್ರೆಸ್‌ ರೈಲು| ಪ್ರಯಾಣಿಕರ ಪರದಾಟ| ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕ್ಯಾಸಲ್‌ರಾಕ್‌-ಕರಂಜೋಳ ಬಳಿ ನಡೆದ ಘಟನೆ| ರೇಲ್ವೆ ಸಿಬ್ಬಂದಿಯ ಸತತ 12 ಗಂಟೆಗಳ ಕಾರ್ಯಾಚರಣೆಯ ಬಳಿಕ ಮಾರ್ಗ ತೆರವು| 

ಜೋಯಿಡಾ(ಆ.07):  ರೇಲ್ವೆ ಮಾರ್ಗದ ಮಧ್ಯೆ ಬುಧವಾರ ರಾತ್ರಿ ಗುಡ್ಡ ಕುಸಿತವಾಗಿ ನಿಜಾಮುದ್ದೀನ್‌-ಗೋವಾ ಎಕ್ಸಪ್ರೆಸ್‌ ರೈಲು ಮಾರ್ಗ ಮಧ್ಯೆ ಸಿಲುಕಿ ಪ್ರಯಾಣಿಕರು ಪರದಾಡಿದ ಘಟನೆ ನಿನ್ನೆ(ಗುರುವಾರ) ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕ್ಯಾಸಲ್‌ರಾಕ್‌-ಕರಂಜೋಳ ಬಳಿ ನಡೆದಿದೆ.

ರೇಲ್ವೆ ಸಿಬ್ಬಂದಿಯ ಸತತ 12 ಗಂಟೆಗಳ ಕಾರ್ಯಾಚರಣೆಯ ಬಳಿಕ ಮಾರ್ಗ ತೆರವುಗೊಳಿಸಿ ರೇಲ್ವೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. 

ವರುಣನ ಆರ್ಭಟ: ಕೊಡಗು ಜಿಲ್ಲೆಯಲ್ಲಿ ಸತತ ಮೂರನೇ ವರ್ಷ ಪ್ರಕೃತಿ ದುರಂತ..!

ಈ ವೇಳೆ ಎಂಜಿನ್‌ ಒಳಗೆ ಮಣ್ಣು ಸಿಲುಕಿಕೊಂಡಿತ್ತು, ಮಾರ್ಗವನ್ನು ತೆರವುಗೊಳಿಸಿದ ನಂತರ ಪುನಃ ಕ್ಯಾಸಲ್‌ರಾಕ್‌ ರೈಲ್ವೆ ನಿಲ್ದಾಣಕ್ಕೆ ತಂದು ಬೇರೆ ಎಂಜಿನ್‌ ಅಳವಡಿಸಿ ಗೋವಾಕ್ಕೆ ಕಳುಹಿಸಲಾಯಿತು.
 

PREV
click me!

Recommended Stories

ರಾಷ್ಟ್ರಧ್ವಜ ತಯಾರಿಸ್ತಿದ್ದ ಕೈಗಳಲ್ಲೀಗ ಕೆಲಸವಿಲ್ಲ!
40 ಎಕರೆ, ಕಣದಲ್ಲಿ 30 ಮಾರು ಉದ್ದದ ಎರಡು ಮೆದೆ: ಎತ್ತುಗಳನ್ನು ಬಳಸಿ ರಾಗಿ ಬೆಳೆದ ರೈತ