Kalaburagi: ನ್ಯಾಯ ಸಮ್ಮತ ಚುನಾವಣೆಗೆ ಅಧಿಕಾರಿಗಳು ಕಾರ್ಯ ತತ್ಪರರಾಗಿ: ಡಿಸಿ ಯಶವಂತ ಗುರುಕರ್

Published : Feb 10, 2023, 11:39 PM IST
Kalaburagi: ನ್ಯಾಯ ಸಮ್ಮತ ಚುನಾವಣೆಗೆ ಅಧಿಕಾರಿಗಳು ಕಾರ್ಯ ತತ್ಪರರಾಗಿ: ಡಿಸಿ ಯಶವಂತ ಗುರುಕರ್

ಸಾರಾಂಶ

ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗಾಗಿ ಜಿಲ್ಲೆಯ ಎಲ್ಲಾ ಮತಗಟ್ಟೆಗಳಿಗೆ ಮೂಲ ಸೌಕರ್ಯ ಒದಗಿಸಿ ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. 

ಕಲಬುರಗಿ (ಫೆ.10): ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗಾಗಿ ಜಿಲ್ಲೆಯ ಎಲ್ಲಾ ಮತಗಟ್ಟೆಗಳಿಗೆ ಮೂಲ ಸೌಕರ್ಯ ಒದಗಿಸಿ ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. ಕಲಬುರಗಿ ನಗರದ ಎಸ್‌.ಎಂ.ಪಂಡಿತ ರಂಗಮಂದಿರಲ್ಲಿ ಸೆಕ್ಟರ್ ಅಧಿಕಾರಿಗಳ ತರಬೇತಿಯಲ್ಲಿ ಮಾತನಾಡಿದ ಡಿಸಿ ಯಶವಂತ ಗುರುಕರ್, ಸೆಕ್ಟರ್ ಅಧಿಕಾರಿಗಳು ತಮ್ಮ ಕರ್ತವ್ಯ ಪಾಲನೆ ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಪೋಲಿಂಗ್ ಸ್ಟೇಶನಲ್ಲಿ ವಿದ್ಯುಚ್ಚಕ್ತಿ, ಸಮಸ್ಯೆ ಹಾಗೂ ಕಟ್ಟಡ ದುರಸ್ತಿ ಏನಾದರೂ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಬೇಕು. 

ತಮಗೆ ನಿರ್ವಹಿಸಿದ ಕಾರ್ಯವನ್ನು ಈಗಿನಿಂದಲ್ಲೇ ಅಲ್ಲಿನ ಸಮಸ್ಯೆಗಳು ಅರಿತುಕೊಳ್ಳಬೇಕೆಂದು ಹೇಳಿದರು. ತಮಗೆ ನೀಡಲಿರುವ ತರಬೇತಿಯನ್ನು ತಿಳಿದುಕೊಂಡು ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು. ಸಹಾಯಕ ಪ್ರಾಧ್ಯಾಪಕರು ಹಾಗೂ ರಾಷ್ಟ್ರಮಟ್ಟದ ತರಬೇತಿದಾರರಾದ ಡಾ.ಶಶಿಶೇಖರರೆಡ್ಡಿ ತರಬೇತಿದಾರರಾಗಿ ಮಾತನಾಡಿ,ಮತಗಟ್ಟೆ ಅಧಿಕಾರಿಗಳು, ಮಾರ್ಗಾಧಿಕಾರಿಗಳು ಬಿಎಲ್‌ಓಗಳು ಹಾಗೂ ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಇಆರ್‌ಓ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗಳ ಮಧ್ಯೆ ಸಮನ್ವಯತೆ ಸಾಧಿಸಿ ಜಿಲ್ಲಾಧಿಕಾರಿಯವರಿಗೆ ಕಾಲಕಾಲಕ್ಕೆ ವರದಿ ನೀಡಬೇಕೆಂದರು. 

4 ವರ್ಷ ಕಳೆದರೂ ಸಿಗದ ನೆರೆ ಪರಿಹಾರ: ತಾಲೂಕು ಕಚೇರಿಯಲ್ಲಿ ವಿಷ ಕುಡಿಯಲು ಮುಂದಾದ ನೆರೆ ನಿರಾಶ್ರಿತರು

ಚುನಾವಣೆಯ ಸಂದರ್ಭದಲ್ಲಿ 10 ರಿಂದ 12 ಮತಗಟ್ಟೆಗಳ ಜವಾಬ್ದಾರಿಯನ್ನು ಸೆಕ್ಟರ್ ಅಧಿಕಾರಿಗಳು ಹೊಂದಿರುತ್ತಾರೆ. ರಾಜ್ಯ ಮತ್ತು ಕೇಂದ್ರದ ಕೆಲವು ಇಲಾಖೆಗಳ ಅಧಿಕಾರಿಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳು ಸೆಕ್ಟರ್ ಅಧಿಕಾರಿ ಎಂದು ನೇಮಕ ಮಾಡುತ್ತಾರೆ ಸೆಕ್ಟರ್ ಗುರಿ ಮತ್ತು ಉದ್ದೇಶಗಳು ಎಂದರೆ ಚುನಾವಣೆಯ ನಿರ್ವಹಣೆ, ಕಾನೂನು ಸುವ್ಯವಸ್ಥೆ ಕಾಪಾಡುವುದು, ಮಾದರಿ ನೀತಿ ಸಂಹಿತೆ, ಚುನಾವಣಾ ಕಾರ್ಯಗಳ ಸುಗಮ ನಿರ್ವಹಣೆ, ಇವಿಎಂ ಗಳ ಕಾರ್ಯನಿರ್ವಹಣೆ, ಎಲ್ಲಾ ಅಧಿಕಾರಿಗಳು ಮಧ್ಯೆ ಸಮನ್ವಯತೆ ಸಾಧಿಸುವುದರ ಬಗ್ಗೆ ತಿಳಿಸಿದರು. ಚುನಾವಣೆ ಘೋಷಣೆಯಾದ ದಿನ ಅಥವಾ ಅದಕ್ಕೂ ಮೊದಲಿನಿಂದ ಪ್ರಾರಂಭವಾಗಿ ಫಲಿತಾಂಶ ಘೋಷಣೆಯಾಗುವವರೆಗೆ ಸಮರ್ಥವಾಗಿ ಕಾರ್ಯ ನಿರ್ವಹಿಸಬೇಕು. 

ಮತಗಟ್ಟೆಗಳು ಎಲ್ಲೆಲ್ಲಿ ಇವೆ ಮತ್ತು ಯಾವ ಮಾರ್ಗದಿಂದ ಕ್ರಮವಾಗಿ ಕ್ಷಿಪ್ರವಾಗಿ ಸಂಚರಿಸಬಹುದು ಎಂಬುದನ್ನು ಗುರುತಿಸಬೇಕೆಂದರು. ಮತದಾನದ ಬಗ್ಗೆ ಜಾಗೃತಿ ಮೂಡಿಸುವುದು, ಮತಯಂತ್ರಗಳ ಕಾರ್ಯ ವಿಧಾನದ ಬಗ್ಗೆ ಮಾಹಿತಿ ನೀಡುವುದು, ಮತದಾರರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು, ಹೊಸದಾಗಿ ಸ್ಥಾಪಿಸಲ್ಪಟ್ಟ ಮತಗಟ್ಟೆಗಳಿದ್ದರೆ ಮತದಾರರಿಗೆ ಅವುಗಳ ಬಗ್ಗೆ ಸಾಕಷ್ಟು ಮೊದಲೇ ಮಾಹಿತಿ ನೀಡುವುದು. ಮತದಾನಕ್ಕೆ 7 ದಿನಗಳ ಮೊದಲೇ ಸೆಕ್ಟರ್ ಅಧಿಕಾರಿಗೆ ವಲಯ ಮ್ಯಾಜಿಸ್ಟ್ರೇಯಲ್ ಅಧಿಕಾರಗಳನ್ನು ನೀಡಲಾಗುತ್ತದೆ, ಸಿಆರ್‌ಪಿಸಿ ಅನುಚ್ಛೇದ 144 ರ ಪ್ರಕಾರ, ತುರ್ತು ಸನ್ನಿವೇಶಗಳು ಉಂಟಾದರೆ ಪರಿಸ್ಥಿತಿಯನ್ನು ಹತೋಟಿಗೆ ತರಲು ತಕ್ಷಣ ಆದೇಶಗಳನ್ನು ಹೊರಡಿಸಬಹುದು. 

ಕೊಡಗಿಗೆ ಬರಲು ಹೆದರಿದ್ರಾ ಸಿದ್ದು, ಡಿಕೆಶಿ ಜೋಡಿಯ ಪ್ರಜಾಧ್ವನಿ ಯಾತ್ರೆ!

ಮತಗಟ್ಟೆಗಳಿಗೆ ತಲಪಲು ಇರುವ ವಿವಿಧ ಮಾರ್ಗಗಳನ್ನು ಗುರುತಿಸಬೇಕು, ಪರ್ಯಾಯ ಮಾರ್ಗಗಳನ್ನು ಗುರುತಿಸಬೇಕು, ಶೀಘ್ರ ಮತ್ತು ಸುರಕ್ಷತವಾಗಿ ತಲುಪುವ ಮಾರ್ಗಗಳನ್ನು ಅಂತಿಮಗೊಳಿಸಬೇಕು ರಸ್ತೆ, ಸೇತುವೆ, ನಾಲೆಗಳ ಸ್ಥಿತಿಗತಿ ತಿಳಿದುಕೊಳ್ಳಬೇಕು ತರಬೇತಿಯಲ್ಲಿ ಎಲ್ಲಾ ರೀತಿಯ ಸಲಹೆ ಸೂಚನೆಗಳನ್ನು ನೀಡಿದರು. ವೇದಿಕೆ ಮೇಲೆ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಡಿ ಬದೋಲೆ, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ, ಸೇರಿದಂತೆ, ಎ.ಸಿ.ಪಿ. ದೀಪನ್, ಸಹಾಯಕ ಆಯುಕ್ತ ಮಮತಾ ಕುಮಾರಿ ಲಬುರಗಿ ಗ್ರೇಡ್-1 ತಹಶೀಲ್ದಾರ ಮಾಧುರಾಜ ಸೇರಿದಂತೆ ಪೋಲಿಸ ಇಲಾಖೆ ಅಧಿಕಾರಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.

PREV
Read more Articles on
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!