ಗಂಗಾವತಿ: ಅಡುಗೆಭಟ್ಟನನ್ನ ತಿಂದು ತೇಗಿದ್ದ ಚಿರತೆ ಸೆರೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು..!

Suvarna News   | Asianet News
Published : Jan 18, 2021, 09:49 AM ISTUpdated : Jan 18, 2021, 09:50 AM IST
ಗಂಗಾವತಿ: ಅಡುಗೆಭಟ್ಟನನ್ನ ತಿಂದು ತೇಗಿದ್ದ ಚಿರತೆ ಸೆರೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು..!

ಸಾರಾಂಶ

ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ| ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ದುರ್ಗಾಬೆಟ್ಟದ ಬಳಿ ಚಿರತೆ ಸೆರೆ| ಈ ಹಿಂದೆ ಚಿರತೆ ಹಿಡಿಯಲು ಅರಣ್ಯ ಇಲಾಖೆ ಗಜ ಪಡೆಯಿಂದ ನಡೆಸಿದ್ದ ಕಾರ್ಯಾಚರಣೆ ವಿಫಲವಾಗಿತ್ತು| 

ಗಂಗಾವತಿ(ಜ.18): ಕಳೆದ ಕೆಲವು ತಿಂಗಳುಗಳಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜನರ ನಿದ್ದೆಗಡೆಸಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದೆ. ಇದರಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ. 

ಇಂದು(ಸೋಮವಾರ) ಬೆಳಗಿನಜಾವ ತಾಲೂಕಿನ ಆನೆಗೊಂದಿ ದುರ್ಗಾಬೆಟ್ಟದ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ 6 ವರ್ಷದ ಗಂಡು ಚಿರತೆ ಬಿದ್ದಿದೆ ಎಂದು ತಿಳಿದು ಬಂದಿದೆ. 

'ಸಿಎಂ ಯಡಿಯೂರಪ್ಪ ವಚನಭ್ರಷ್ಟ ಆಗ್ತಾರೆ ಅನ್ನೋ ಅನುಮಾನ ಇದೆ'

ಕಳೆದ ಎರಡು ತಿಂಗಳ ಹಿಂದೆ ದುರ್ಗಾಬೆಟ್ಟದಲ್ಲಿ ದೇವಸ್ಥಾನದ ಅಡುಗೆದಾರನನ್ನು ಈ ಚಿರತೆ ತಿಂದು ಹಾಕಿತ್ತು. ಇಂದು ಬೆಳಗಿನ ಜಾವ ಚಿರತೆ ಬೋನಿಗೆ ಬಿದ್ದಿದೆ. ಈ ಹಿಂದೆ ಚಿರತೆಯನ್ನ ಹಿಡಿಯಲು ಅರಣ್ಯ ಇಲಾಖೆಯವರು ಗಜ ಪಡೆಯಿಂದ ನಡೆಸಿದ್ದ ಕಾರ್ಯಾಚರಣೆ ವಿಫಲವಾಗಿತ್ತು. ಚಿರತೆಯಿಂದ ಗ್ರಾಮಸ್ಥರಲ್ಲಿ ಭಯ ಮೂಡಿಸಿತ್ತು.
 

PREV
click me!

Recommended Stories

ಅಧಿಕಾರಿಗಳು 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು, ಆಡಳಿತ ಚುರುಕುಗೊಳಿಸಲು ಡಿಕೆಶಿ ಖಡಕ್ ಸೂಚನೆ
ಕಾಕ್ರೋಚ್ ಜನತಾ ಪಾರ್ಟಿ ಬೆಂಗಳೂರು ಹೋರಾಟಕ್ಕೆ ತಮಿಳಿಗರಿಗೆ ಆಹ್ವಾನ, ರಕ್ಷಣಾ ವೇದಿಕೆ ಖಡಕ್ ಎಚ್ಚರಿಕೆ