Mysuru : ಮೀಸಲಾತಿ ನೀಡುವಲ್ಲಿ ಎಚ್‌ಡಿಡಿ ಕೊಡುಗೆ ಅಪಾರ

By Kannadaprabha NewsFirst Published Dec 6, 2022, 5:51 AM IST
Highlights

 ರಾಜ್ಯದಲ್ಲಿ ನಾಯಕ ಸಮುದಾಯದ ಮೀಸಲಾತಿ ಕೊಡಿಸಲು ಶ್ರಮಿಸಿದ್ದವರಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಕೂಡುಗೆ ಅಪಾರವಾಗಿದೆ,

  ಹುಣಸೂರು (ಡಿ.06):   ರಾಜ್ಯದಲ್ಲಿ ನಾಯಕ ಸಮುದಾಯದ ಮೀಸಲಾತಿ ಕೊಡಿಸಲು ಶ್ರಮಿಸಿದ್ದವರಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಕೂಡುಗೆ ಅಪಾರವಾಗಿದೆ, ಹಳೇ ಮೈಸೂರು ಪ್ರಾಂತ್ಯದಲ್ಲಿ ನಾಯಕ ಸಮುದಾಯಕ್ಕೆ ಮಾಜಿ ಶಾಸಕ ದಿ. ಎಸ್‌. ಚಿಕ್ಕಮಾದು ಅವರು ಶ್ರಮಿಸಿದ್ದಾರೆ ಎಂದು ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಪ್ರಸನ್ನಾನಂದ ಸ್ವಾಮೀಜಿ ಪ್ರಶಂಸಿದರು.

ಪಟ್ಟಣದ ಕಲ್ಕುಣಿಕೆಯ ನಾಯಕ ಸಮುದಾಯ ಭವನದಲ್ಲಿ ಸೋಮವಾರ ರಾಜನಹಳ್ಳಿಯಲ್ಲಿ ಫೆ. 8 ಮತ್ತು 9ರಂದು ನಡೆಯುವ 5ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆಗೆ ಆಹ್ವಾನ ಕೋರಿ ಭಿತ್ತಿಪತ್ರ  ಬಿಡುಗಡೆ ಮಾಡಿದ ನಂತರ ಅವರು ಮಾತನಾಡಿದರು.

ನಮ್ಮ ಸಮುದಾಯದ ಮೀಸಲಾತಿಗಾಗಿ (Resarvation)  ಎಚ್‌.ಡಿ. ದೇವೇಗೌಡರು (HD Devegowda)  ಮತ್ತು ಮಾಜಿ ಸಚಿವರಾದ ಜಿ.ಟಿ. ದೇವೇಗೌಡ, ಎಚ್‌. ವಿಶ್ವನಾಥ್‌ ಅವರು ಸಾಥ್‌ ನೀಡಿದ್ದಾರೆ. ಅಲ್ಲದೆ ಚಿಕ್ಕಮಾದು ಅವರ ಕೊಡುಗೆ ಸಮುದಾಯಕ್ಕೆ ಬಹಳ ಅಪಾರವಾಗಿದೆ ಎಂದರು.

ಫೆ. 8 ಮತ್ತು 9 ರಂದು ರಾಜನಹಳ್ಳಿಯಲ್ಲಿ ನಡೆಯುವ 5ನೇ ವರ್ಷದ ಜಾತ್ರೆಗೆ ರಾಜ್ಯದ ಮೂಲೆ ಮೂಲೆ ಯಿಂದ ಸಮುದಾಯವರು ಬರುತ್ತಾರೆ, ತಾವೆಲ್ಲರೂ ಆಗಮಿಸಿ ಕಾರ್ಯಕ್ರವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ಸಮುದಾಯದ ಭಾಂದವರಿಗೆ ಕರೆ ನೀಡಿದರು.

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಮತ್ತು ರಾಜ್ಯ ಅಪೆಕ್ಸ್‌ ಬಾಂಕ್‌ ಉಪಾಧ್ಯಕ್ಷ ಜಿ.ಡಿ. ಹರೀಶ್‌ಗೌಡ ಮತ್ತು ಮಾಜಿ ಶಾಸಕ ದಿ ಎಸ್‌. ಚಿಕ್ಕಮಾದು ಅವರ ಪುತ್ರಿ ರಂಜಿತಾ ಚಿಕ್ಕಮಾದು ಅವರು ಪ್ರತ್ಯೇಕವಾಗಿ ಇಬ್ಬರು ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಪ್ರಸನ್ನಾಂದ ಸ್ವಾಮೀಜಿ ಅವರನ್ನು ಅಭಿನಂದಿಸಿದರು.

ಸಮಾಜ ಸೇವಕ ದೇವರಾಜ ಒಡೆಯರ್‌, ತಾಲೂಕು ನಾಯಕರ ಸಂಘದ ಅಧ್ಯಕ್ಷ ಅಣ್ಣಯನಾಯಕ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದೇವರಾಜ…, ನಗರಸಭೆ ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಮುಖಂಡರಾದ ಲೋಕೇಶ್‌, ಜಗದೀಶ್‌, ಗವಿನಾಯಕ, ಮಯೂರ, ರಮೇಶ್‌, ಮಹದೇವ್‌, ನಗರಸಭೆ ಸದಸ್ಯ ದೇವನಾಯ್ಕ, ಸುರೇಂದ್ರ, ಸತೀಶ್‌ ಪಾಪಣ್ಣ , ಬಸವಲಿಂಗಯ್ಯ, ಅಸ್ವಾಳು ಕೆಂಪೇಗೌಡ, ಗರಡಿ ಮನೆ ಪ್ರಸನ್ನಕುಮಾರ್‌, ರಾಕೇಶ್‌ ಭಾಗವಹಿಸಿದ್ದರು.

ಕಲಬುರಗಿ : ಜಾತ್ಯತೀತ ಜನತಾದಳ ಪಕ್ಷ ಕರ್ನಾಟಕದಲ್ಲಿ ಹಣದಿಂದ ರಾಜಕೀಯ ಮಾಡುತ್ತಿಲ್ಲ, ಅಂತಹ ಅಗತ್ಯವೂ ಇಲ್ಲ, ಪಕ್ಷಕ್ಕೆ ಹಣಕ್ಕಿಂತ ಜನ ಮುಖ್ಯ. ಜನ ಕೇಂದ್ರಿತ ರಾಜಕೀಯ ನಮ್ಮದು ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ. ಆಳಂದದಲ್ಲಿ ಶುಕ್ರವಾರ ಆಯೋಜಿಸಿದ್ದ ಪಕ್ಷದ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜೆಡಿಎಸ್‌ ದುಡ್ಡು ನೋಡಿ ರಾಜಕೀಯ ಮಾಡೋದಿದ್ರೆ ಪಂಚರತ್ನ ಯಾತ್ರೆ ಯಾಕೆ ಮಾಡಬೇಕಿತ್ತು? ಜನತಾ ಜಲಧಾರೆ ಜನರಿಂದಲೇ ನಡೆಯುತ್ತಿದೆಯೇ ಹೊರತು ಹಣದಿಂದ ಅಲ್ಲ, ಹಣಕ್ಕಿಂತ ನಮಗೆ ಜನ ಮುಖ್ಯ ಎಂದರು.

ಜೆಡಿಎಸ್‌ ಹಣದಿಂದ ಉಳಿದಿಲ್ಲ, ಜನರಿಂದ ಉಳಿದಿದೆ. ಹಣದಿಂದಲಾದರೆ ಪಂಚರತ್ನ, ಜನತಾ ಜಲಧಾರೆಯಂತಹ ಕಾರ್ಯಕ್ರಮಗಳನ್ನು ವರ್ಷಗಟ್ಟಲೇ ನಡೆಸಲಾಗುತ್ತಿರಲಿಲ್ಲ. ಯಾರನ್ನೂ ನಾವು ಹಣ ಕೊಟ್ಟು ಕರೆಯಿಸುತ್ತಿಲ್ಲ. ಕಳೆದ ಬಾರಿ ಜೆಡಿಎಸ್‌ ಅಧಿಕಾರದಲ್ಲಿದ್ದಾಗ ರೈತರ 25 ಸಾವಿರ ಕೋಟಿ ರು. ಸಾಲಮನ್ನಾ ಮಾಡಿದ್ದು ಹಣಕ್ಕಾಗಿ ಅಲ್ಲ, ರೈತರ ಹಿತ ಕಾಪಾಡಲಿಕ್ಕಾಗಿ. ವಿರೋಧಿಗಳಿಗೆ ಆರೋಪ ಮಾಡಲು ಏನೂ ಇಲ್ಲ, ಇಲ್ಲದ್ದು ಆರೋಪಿಸುತ್ತ ಕಾಲಹರಣ ಮಾಡುತ್ತಿದ್ದಾರೆಂದರು. ರೌಡಿ ರಾಜಕೀಯ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡ ಗೈಡರು ಆ ಬಗ್ಗೆ ತಾವು ಪ್ರತಿಕ್ರಿಯೆ ನೀಡೋದಿಲ್ಲ ಎಂದರಲ್ಲದೆ ಯಾರು ರೌಡಿಗಳನ್ನು ಸೇರಿಸಿಕೊಳ್ಳುತ್ತಿದ್ದಾರೋ ಅವರನ್ನೇ ಕೇಳಿ ಎಂದರು.

ಕಾವೇರಿ: ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಅನ್ಯಾಯ: ಎಚ್‌.ಡಿ.ದೇವೇಗೌಡ

ಗಡಿ ವಿವಾದದ ವಿಚಾರದಲ್ಲಿ ಜೆಡಿಎಸ್‌ ಹಿಂದಿನ ನಿಲುವಿಗೆ ಕಟಿಬದ್ಧ. ಹಿಂದಿನ ಮಹಾಜನ್‌ ವರದಿಯೇ ಅಂತಿಮ ಎಂಬುದು ನಮ್ಮ ಪಕ್ಷದ ನಿಲುವಾಗಿದ್ದು ಇಂದಿಗೂ ಅದೇ ನಿಲುವಿಗೆ ನಾವು ಬದ್ಧ. ನಾವು ಅದೇ ನಿಲುವನ್ನು ಈಗಲೂ ಬೆಂಬಲಿಸುತ್ತೇವೆ. ವಿನಾಕಾರಣ ವಿವಾದಗಲು ಯಾಕೆ ಚುನಾವಣೆ ಪೂರ್ವ ಹುಟ್ಟು ಹಾಕೋದು, ಇಂತಹ ನಡತೆ ಯಾರಿಗೂ ಸರಿಯಲ್ಲ ಎಂದರು. ಮೊಮ್ಮಕ್ಕಳು ಬರೋ ಚುನಾವಣೆಯಲಿ ಕಣದಲ್ಲಿ ಇರುತ್ತಾರಾ ಎಂದು ಕೇಳಿದ ಪ್ರಶ್ನೆಗೆ ದೇವೇಗೌಡರು ಯಾವುದೇ ಉತ್ತರ ನೀಡಲಿಲ್ಲ. ಅನಿತಾ ಕುಮಾರಸ್ವಾಮಿ, ನಾಸೀರ್‌ ಹುಸೇನ್‌ ಉಸ್ತಾದ್‌ ಸೇರಿದಂತೆ ಅನೇಕರು ಇದ್ದರು.

ಚುನಾವಣೆ ಅಖಾಡಕ್ಕೆ ಇಳಿದು ಪ್ರಚಾರ ಮಾಡುವೇ: ನಾಡಿನ ಜನರ ಉತ್ತಮ ಬದುಕಿಗಾಗಿ ಪಾರದರ್ಶಕ ಆಡಳಿತ ನೀಡುವ ಜೆಡಿಎಸ್‌ ಸರ್ಕಾರ ರಚನೆಗಾಗಿ ಮುಂಬರುವ ಚುನಾವಣೆ ಅಖಾಡಕ್ಕಿಳಿದು ಪ್ರಚಾರ ಮಾಡುವೆ. ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣೆಯ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗುತ್ತೇನೆ. ಎಲ್ಲೆಡೆ ಪ್ರಚಾರಕ್ಕೆ ಹೋಗುತ್ತೇನೆಂದು ಗೌಡರು ಸ್ಪಷ್ಟಪಡಿಸಿದರು. ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ಎಲ್ಲ ನಾಯಕರು ಪಂಚರತ್ನ ರಥಯಾತ್ರೆಯಲ್ಲಿ ತೊಡಗಿದ್ದಾರೆ. ಯಾತ್ರೆ ಸಾಗುವ ಹಳ್ಳಿಗಳಲ್ಲಿ ಪಕ್ಷದ ಮುಖಂಡರುಗಳು, ಮಾಜಿ ಹಾಗೂ ಹಾಲಿ ಶಾಸಕರುಗಳು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಕಾರ್ಯಕರ್ತರಿಗೂ ಮನೆ, ಮನೆಗೂ ತೆರಳಿ ನಡೆಸುವಂತೆ ಹೇಳಿದ್ದೇನೆ ಎಂದರು.

click me!