ಹೆಂಡ್ತಿ ಇದ್ದಂಗೆ ಮತ್ತೊಂದು ಮದುವೆ : ಮುಚ್ಚಿಡೋಕೆ ಮಾಡಿದ್ದು ಖತರ್ನಾಕ್ ಕೆಲಸ

Suvarna News   | Asianet News
Published : Oct 13, 2020, 08:57 AM ISTUpdated : Oct 13, 2020, 11:51 AM IST
ಹೆಂಡ್ತಿ ಇದ್ದಂಗೆ ಮತ್ತೊಂದು ಮದುವೆ : ಮುಚ್ಚಿಡೋಕೆ ಮಾಡಿದ್ದು ಖತರ್ನಾಕ್ ಕೆಲಸ

ಸಾರಾಂಶ

ತಾನು ಹೆತ್ತ ಮಗಳನ್ನೇ ಪಾಪಿ ತಂದೆಯೋರ್ವ ಕೊಂದು ಸಮಾಧಿ ಮಾಡಿದ ಹೇಯ ಕೃತ್ಯ ದಾವಣಗೆರೆಯಲ್ಲಿ ನಡೆದಿದೆ. 

ದಾವಣಗೆರೆ (ಅ.13): ತಾನು ಹೆತ್ತ ಮಗಳನ್ನೇ ಕೊಂದು ಪಾಪಿ ತಂದೆಯೋರ್ವ ಸಮಾಧಿ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. 
 
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗುತ್ತಿದುರ್ಗಗುತ್ತಿದುರ್ಗ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಿಂಗಪ್ಪ ಎನ್ನುವಾತ ಈ ಕೃತ್ಯ ಎಸಗಿದ್ದಾನೆ. 

ಗುತ್ತಿದುರ್ಗದ ಮಹಿಳೆ ಶಶಿಕಲಾಳನ್ನ ಎರಡನೇ ವಿವಾಹವಾಗಿದ್ದ ನಿಂಗಪ್ಪ ಮೊದಲ ಪತ್ನಿ ಹಾಗು ಇಬ್ಬರು ಗಂಡು ಮಕ್ಕಳಿದ್ದರೂ ಎರಡನೇ ವಿವಾಹವಾಗಿದ್ದ.

ಬೆಂಗಳೂರು; ಮನೆಗೆ ಬಂದ ಪ್ರಿಯಕರ ಪಿಪಿಇ ಕಿಟ್ ಧರಿಸಿದ್ದ.. ಗಂಡನೆದುರೆ ಟೆಕ್ಕಿ ಹೆಂಡತಿ ಪರಾರಿ! ..

ಒಂದು ತಿಂಗಳ ಹಿಂದೆ ಎರಡನೇ ಹೆಂಡತಿಯ ಹೆಣ್ಣು ಮಗು ಸಿರಿಶಾ(03)ಳನ್ನು ಕೊಂದು ಹಾಕಿದ್ದಾನೆ. ಬಳಿಕ ಶವವನ್ನು ಹೂತಿಟ್ಟಿದ್ದಾನೆ. 

ಇಪ್ಪತ್ತು ದಿನಗಳ ಹಿಂದೆ ಈ ಸಂಬಂಧ ಪತ್ನಿ ಶಶಿಕಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. ಗುತ್ತಿದುರ್ಗ ಗ್ರಾಮಸ್ಥರಿಂದ ಮಗು ಸಮಾಧಿ ಮಾಡಿರುವ ಬಗ್ಗೆ  ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಚಿತ್ರದುರ್ಗ ಮತ್ತು ದಾವಣಗೆರೆ ಪೊಲೀಸ್ ಅಧಿಕಾರಿಗಳು ಇಂದು ಗುತ್ತಿದುರ್ಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. 

PREV
click me!

Recommended Stories

ಮಣ್ಣಲ್ಲಿ ಮರೆಯಾಗಿದ್ದ ಜೈನರ ಕಾಲದ ಕಲ್ಯಾಣಿಗೆ ಮರುಜೀವ ನೀಡಿದ ಉದ್ಯೋಗ ಖಾತ್ರಿ ಯೋಜನೆ
ನಟಿ ಶಿಲ್ಪಾ ಶೆಟ್ಟಿ ಒಡೆತನದ ಪಬ್‌ನಲ್ಲಿ ಉದ್ಯಮಿಯಿಂದ ಗಲಾಟೆ; ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ!