ಚುನಾವಣೆ ಕೇಸ್‌ ರದ್ದುಪಡಿಸಲು ಕೋರಿದ್ದ ಪ್ರಕಾಶ್‌ ರೈ ಅರ್ಜಿ ವಜಾ

Kannadaprabha News   | Asianet News
Published : Oct 13, 2020, 08:31 AM IST
ಚುನಾವಣೆ ಕೇಸ್‌ ರದ್ದುಪಡಿಸಲು ಕೋರಿದ್ದ ಪ್ರಕಾಶ್‌ ರೈ ಅರ್ಜಿ ವಜಾ

ಸಾರಾಂಶ

ನಟ ಪ್ರಕಾಶ್‌ ರೈ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌| ಪ್ರಕಾಶ್‌ ರೈ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರಿದ್ದ ಏಕಸದಸ್ಯಪೀಠ| 2019ರ ಲೋಕಸಭಾ ಚುನಾವಣೆ ವೇಳೆ ಎಂ.ಜಿ ರಸ್ತೆಯಲ್ಲಿ ಅನುಮತಿ ಇಲ್ಲದೇ ಪ್ರತಿಭಟನೆ ನಡೆಸಿದ್ದ ನಟ ಪ್ರಕಾಶ್‌ ರೈ| 

ಬೆಂಗಳೂರು(ಅ.13): ಕಳೆದ ಲೋಕಸಭೆ ಚುನಾವಣೆಯ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸುವಂತೆ ಕೋರಿ ನಟ ಪ್ರಕಾಶ್‌ ರೈ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಈ ಕುರಿತು ಪ್ರಕಾಶ್‌ ರೈ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ಮರಳಿ ಮಣ್ಣಿಗೆ: ಪ್ರಕಾಶ್‌ ರೈ ಲಾಕ್‌ಡೌನ್‌ ದಿನಗಳನ್ನು ಹೀಗೆ ಕಳೆಯುತ್ತಿದ್ದಾರೆ ನೋಡಿ!

2019ರ ಲೋಕಸಭಾ ಚುನಾವಣೆ ವೇಳೆ ಎಂ.ಜಿ ರಸ್ತೆಯಲ್ಲಿ ಅನುಮತಿ ಇಲ್ಲದೇ ನಟ ಪ್ರಕಾಶ್‌ ರೈ ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ಬಿಬಿಎಂಪಿ ಫ್ಲೈಯಿಂಗ್‌ ಸ್ಕ್ವಾಡ್‌ ಕೇಸ್‌ ದಾಖಲಿಸಿತ್ತು. ನಂತರ ತನಿಖೆ ನಡೆಸಿದ್ದ ಪೊಲೀಸರು ಆರೋಪಪಟ್ಟಿ ದಾಖಲಿಸಿದ್ದರು. ಆ ಪ್ರಕರಣ ರದ್ದು ಕೋರಿ ಪ್ರಕಾಶ್‌ ರೈ ಹೈಕೋರ್ಟ್‌ ಮೊರೆ ಹೋಗಿದ್ದರು.
 

PREV
click me!

Recommended Stories

ಪ್ರವಾಸದ ನಡುವೆ ಟಿ ಕುಡಿಯುತ್ತಾ ನಿಂತಿದ್ದ ಸ್ನೇಹಿತರ ಮೇಲೆ ಯಮನಂತೆ ಬಂದ ಇನ್ನೋವಾ, ಓರ್ವ ಸಾವು
ಮಡಿಕೇರಿ ಬೆನ್ನಲ್ಲೇ ಚಿಕ್ಕಮಗಳೂರು ಚಂದ್ರದ್ರೋಣ ಪರ್ವತದಲ್ಲಿ ಪ್ರವಾಸಿ ಯುವತಿ ನಾಪತ್ತೆ