ಮದುವೆ ವಿಚಾರ ಇಷ್ಟು ಬೆಳೆಯಿತು : ಸಾವು ಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಿತು ಕುಟುಂಬ

By Kannadaprabha NewsFirst Published Nov 4, 2020, 11:17 AM IST
Highlights

ವಿವಾಹ ವಿಚಾರವಾಗಿ ಕುಟುಂಬ ಒಂದು ಇದೀಗ ಸಾವಿಗಾಗಿ ಮನವಿ ಮಾಡಿಕೊಂಡಿದೆ. ಮರಣ ದಯಪಾಲಿಸಿ ಎಂದು ಕೇಳುತ್ತಿದೆ. 

ರಾಮ​ನ​ಗ​ರ (ನ.04): ಮಗನ ಮದು​ವೆಗೆ ಕರೆ​ಯ​ಲಿಲ್ಲ ಎಂಬ ನೆಪ​ವೊಡ್ಡಿ ಕುಟುಂಬದವ​ರಿಗೆ ಸಮು​ದಾಯ ಬಹಿ​ಷ್ಕಾರ ಹಾಕಿ​ದವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಿ, ಇಲ್ಲವೆ ದಯಾ ಮರಣ ಹೊಂದಲು ಅನು​ಮತಿ ನೀಡು​ವಂತೆ ಒತ್ತಾ​ಯಿಸಿ ನೊಂದ ಕುಟುಂಬ​ವೊಂದು ಜಿಲ್ಲಾ​ಧಿ​ಕಾ​ರಿ​ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿ​ಕಾ​ರಿ​ಗ​ಳ ಮೂಲಕ ರಾಜ್ಯ​ಪಾ​ಲ​ರಿಗೆ ಮನವಿ ಸಲ್ಲಿ​ಸಿದೆ.

ಕನ​ಕ​ಪುರ ತಾಲೂಕು ಕೋಡಿ​ಹಳ್ಳಿ ಗ್ರಾಮದ ತಿಗಳ ಸಮು​ದಾ​ಯಕ್ಕೆ ಸೇರಿದ ಕೆಂಚೇ​ಗೌಡ ಕುಟುಂಬ ದಯಾ​ಮ​ರಣಕ್ಕೆ ಅನು​ಮತಿ ನೀಡು​ವಂತೆ ಕೋರಿ​ಕೊಂಡಿ​ದೆ. ಅಲ್ಲದೆ, ಈ ನೊಂದ ಕುಟುಂಬ ಗ್ರಾಮದ ನಂಜೇ​ಗೌಡ, ಕೆ.ರ​ಮೇಶ್‌ , ಮಹ​ದೇ​ವಯ್ಯ, ಮುನಿ​ಗೌಡ, ಲಕ್ಷ್ಮ​ಣ ವಿರುದ್ಧ ಸಮು​ದಾಯದಿಂದ ಬಹಿ​ಷ್ಕಾರ ಹಾಕಿದ ಆರೋಪ ಮಾಡಿದೆ.

‘ನಾವು ಪಾಕಿಸ್ತಾನದವರು’ ಎಂದು ಕೂಗಾಡಿ ವ್ಯಕ್ತಿಯ ಮೇಲೆ ಹಲ್ಲೆ ...

ಏನಿದು ಘಟನೆ?  ತಿಗಳ ಸಮು​ದಾ​ಯಕ್ಕೆ ಸೇರಿದ ಈ ಐದು ಮಂದಿ ಸ್ವಯಂ ಘೋಷಿತ ತಿಗಳ ಸಂಘ​ಟ​ನೆಯ ವಿವಿಧ ಹುದ್ದೆಯ ಹೆಸ​ರಿ​ನಲ್ಲಿ ಅಮಾ​ಯಕ ತಿಗಳ ಸಮು​ದಾ​ಯದ ಹಲ​ವಾರು ಜನ​ರಿಂದ ಕುಟುಂಬ ಬಹಿ​ಷ್ಕಾರ ಎನ್ನುವ ಹೆಸ​ರಿ​ನಲ್ಲಿ ಲಕ್ಷಾಂತರ ರುಪಾಯಿಗಳನ್ನು ದಂಡದ ರೂಪ​ದಲ್ಲಿ ವಸೂಲಿ ಮಾಡು​ತ್ತಿ​ದ್ದರು. ಮೊದ​ಲಿ​ನಿಂದಲೂ ನಾವು ಇವರ ಕಾರ್ಯ​ವೈ​ಖರಿ ವಿರೋ​ಧಿ​ಸುತ್ತಾ ಬಂದಿ​ದ್ದ​ವು. ಈಗ ಐವರು ಗ್ರಾಮ​ದಲ್ಲಿ ನಮ್ಮ ಕುಟುಂಬ​ದೊಂದಿಗೆ ಬೆಂಕಿ, ನೀರು ಸೇರಿ​ದಂತೆ ಯಾವುದೇ ವಸ್ತು ನೀಡ​ಬಾ​ರದು, ಅವ​ರಿಂದ ಪಡೆ​ಯ​ಬಾ​ರದು, ಯಾರು ಅವ​ರೊಂದಿಗೆ ಮಾತ​ನಾ​ಡ​ಬಾ​ರದು. ಯಾವುದೇ ಶುಭ ಅಶುಭ ಕಾರ್ಯ​ಗ​ಳಿಗೆ ಆಹ್ವಾನ ಮಾಡ​ಬಾ​ರ​ದೆಂದು ಪಂಚಾ​ಯಿತಿ ನಿರ್ಣಯ ಮಾಡಿ ಸಮು​ದಾ​ಯ​ದಿಂದ ಬಹಿ​ಷ್ಕಾ​ರದ ಫತ್ವಾ ಹೊರ​ಡಿ​ಸಿ​ದ್ದಾ​ರೆ.

ಚಿಕ್ಕೇ​ನ​ಹಳ್ಳಿಯ ಸಿದ್ದಪ್ಪ ಪುತ್ರಿ ಮಹಾ​ಲಕ್ಷ್ಮೇ ಮತ್ತು ನನ್ನ ಎರ​ಡನೇ ಪುತ್ರ ಕೆ.ದೇ​ವ​ರಾಜು ವಿವಾಹವನ್ನು ಮೇ 31ರಂದು ​ಕೋ​ವಿಡ್‌ ನಿಯ​ಮಾ​ವಳಿ ಅನು​ಸಾರ ನೆರ​ವೇ​ರಿ​ಸ​ಲಾ​ಗಿತ್ತು. ಜೂನ್‌ 8ರಂದು ನನ್ನ ಮಗನ ವಿವಾಹ ಸಂಬಂಧ​ವಾ​ಗಿಯೇ ಐವರು ಪಂಚಾ​​ಯಿತಿ ಇಟ್ಟಿ​ಕೊಂಡಿ​ದ್ದರು. ಆ ದಿನ ಬೀಗರ ಮನೆ​ಯಲ್ಲಿ ಮಗನ ನಿಷೇಕ ಶಾಸ್ತ್ರ ಇದ್ದ ಕಾರಣ ಪಂಚಾ​ಯಿತಿಗೆ ಹಾಜ​ರಾ​ಗಿ​ರ​ಲಿಲ್ಲ. ಮರು ದಿನ ಗ್ರಾಮಕ್ಕೆ ಬರು​ವ​ಷ್ಟ​ರಲ್ಲಿ ಮಗನ ಮದು​ವೆಗೆ ತಿಗಳ ಜನಾಂಗ​ದ​ವ​ರಿಗೆ ವೀಳ್ಯ ನೀಡಿ ಕರೆ​ದಿ​ಲ್ಲ​ವೆಂದು ಪಂಚಾಯಿತಿ ನಿರ್ಣಯ ಮಾಡಿ​ಕೊಂಡು ನಮ್ಮ ಕುಟುಂಬಕ್ಕೆ ಬಹಿ​ಷ್ಕಾರ ಹಾಕಿ​​ದ್ದಾರೆ.

ಗ್ರಾಮ​ದಲ್ಲಿ ನೆಮ್ಮ​ದಿಯ ಜೀವನ ನಡೆ​ಸಲು ಬಿಡದೆ ನೀಡು​ತ್ತಿ​ರುವ ಮಾನ​ಸಿಕ ಹಿಂಸೆ​ಯಿಂದ ಕುಟುಂಬ ಆತ್ಮ​ಹತ್ಯೆ ಮಾಡಿ​ಕೊ​ಳ್ಳುವ ಹಂತಕ್ಕೆ ತಲು​ಪಿದೆ. ಈ ಐವರ ವಿರುದ್ಧ ಕ್ರಿಮಿ​ನಲ್‌ ಮೊಕ​ದ್ದಮೆ ಹೂಡಿ, ಕ್ರಮ ಕೈಗೊ​ಳ್ಳ​ಬೇಕು. ನಮ್ಮ ಕುಟುಂಬ ನೆಮ್ಮ​ದಿ​ಯಿಂದ ಜೀವನ ನಡೆ​ಸಲು ಅವ​ಕಾಶ ಮಾಡಿ​ಕೊ​ಡುವ ಜತೆಗೆ ಸೂಕ್ತ ರಕ್ಷಣೆ ನೀಡ​ಬೇಕು. ಇಲ್ಲ​ದಿ​ದ್ದರೆ ರಾಜ್ಯ​ಪಾ​ಲ​ರಿಂದ ದಯಾ​ಮ​ರಣ ಹೊಂದಲು ಅನು​ಮತಿ ಕೊಡಿ​ಸು​ವಂತೆ ನಂಜೇ​ಗೌಡ ಕುಟುಂಬ ಮನವಿ ಮಾಡಿ​ಕೊಂಡಿದೆ.

click me!