ಕಲಬುರಗಿ: ನಕಲಿ ಗನ್‌ನೊಂದಿಗೆ ಬ್ಯಾಂಕ್‌ಗೆ ನುಗ್ಗಿದ ಕುಡುಕ, ಬೆಚ್ಚಿಬಿದ್ದ ಮ್ಯಾನೇಜರ್‌..!

Kannadaprabha News   | Asianet News
Published : Aug 17, 2020, 03:00 PM IST
ಕಲಬುರಗಿ: ನಕಲಿ ಗನ್‌ನೊಂದಿಗೆ ಬ್ಯಾಂಕ್‌ಗೆ ನುಗ್ಗಿದ ಕುಡುಕ, ಬೆಚ್ಚಿಬಿದ್ದ ಮ್ಯಾನೇಜರ್‌..!

ಸಾರಾಂಶ

ನಕಲಿ ಗನ್‌ ಜೊತೆಗೆ ಐಸಿಐಸಿಐ ಬ್ಯಾಂಕ್‌ಗೆ ನುಗ್ಗಿದ ಪಾನಮತ್ತ ಯುವಕ| ಕಲಬುರಗಿ ನಗರದಲ್ಲಿ ನಡೆದ ಘಟನೆ| ನಶೆಯಲ್ಲಿ ಬ್ಯಾಂಕ್‌ ಡೆಪ್ಯೂಟಿ ಮ್ಯಾನೇಜರ್‌ ಚೇಂಬರ್‌ ಹೊಕ್ಕಿದ್ದ ಆರೋಪಿ| ಯುವಕನ ವರ್ತನೆಗೆ ಬೆಚ್ಚಿಬಿದ್ದ ಮ್ಯಾನೇಜರ್‌| 

ಕಲಬುರಗಿ(ಆ.17): ನಕಲಿ ಗನ್‌ ಜೊತೆಗೆ ನಗರದ ನೆಹರು ಗಂಜ್‌ನಲ್ಲಿರುವ ಐಸಿಐಸಿಐ ಬ್ಯಾಂಕ್‌ಗೆ ನುಗ್ಗಿದ ಪಾನಮತ್ತ ಯುವಕನೊಬ್ಬ ಪೊಲೀಸ್‌ ಅತಿಥಿಯಾಗಿರುವ ಪ್ರಸಂಗ ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿಯ ಮುಜಗುರಿ ಬಡಾವಣೆ ನಿವಾಸಿ ಸುಲ್ತಾನ್‌ ಎಂಬ ಯುವಕನೇ ಈ ಅವಾಂತರ ಹುಟ್ಟು ಹಾಕಿದ್ದಾನೆಂದು ಗೊತ್ತಾಗಿದೆ. ಈತ ಪಾನಮತ್ತನಾಗಿದ್ದ, ಅದೇ ನಶೆಯಲ್ಲಿ ಬ್ಯಾಂಕ್‌ ಡೆಪ್ಯೂಟಿ ಮ್ಯಾನೇಜರ್‌ ಚೇಂಬರ್‌ ಹೊಕ್ಕಿದ್ದ ಆರೋಪಿ, ಚೆಂಬರ್‌ ಪ್ರವೇಶದ ನಂತರ ಕುರ್ಚಿ ರಿಪೇರಿ ಮಾಡುವವನೆಂದು ಹೇಳುತ್ತ ಶಂಕೆಯಿಂದ ಅಲ್ಲೇ ಠಲಾಯಿಸಿದಾಗ ತಕ್ಷಣ ಈ ಯುವಕನ ವರ್ತನೆಯಿಂದ ಬೆಚ್ಚಿಬಿದ್ದಿದ್ದ ಮ್ಯಾನೇಜರ್‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ದಾವಿಸಿದ ಪೊಲೀಸರು ಪಾನಮತ್ತ ಯುವಕನನ್ನು ವಶಕ್ಕೆ ಪಡೆದಿದ್ದಾರೆ. 

ದೇಶದ ಅಖಂಡತೆಗೆ ಬದ್ಧರಾಗಿರಬೇಕು, ವೋಟ್‌ ಬ್ಯಾಂಕ್‌ ರಾಜಕಾರಣಕ್ಕಲ್ಲ: ಡಿಕೆಶಿಗೆ ಕಾರಜೋಳ ತಿರುಗೇಟು

ಬ್ಯಾಂಕಿನ ಯಾವುದೇ ಕುರ್ಚಿ ರಿಪೇರಿಗೆ ತಾವು ಸೂಚಿಸಿಲ್ಲ, ಯಾರನ್ನು ಕೆರದಿಲ್ಲ, ಈ ಯುವಕ ಆಗಂತುಕನೆಂದು ಮ್ಯಾನೇಜರ್‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕಿಗೆ ಧಾವಿಸಿ ಬಂದ ಪೊಲೀಸರು ಸ್ಥಳದಲ್ಲಿ ನಶೆಯಲ್ಲಿದ್ದ ಯುವಕನಿಗೆ ಲಾಠಿ ರುಚಿ ತೋರಿಸಿದಾಗ ಆತ ತಾನು ನಶೆಯಲ್ಲಿ ಬ್ಯಾಂಕ್‌ಗೆ ನುಗ್ಗಿದ್ದಾಗಿ ಹೇಳಿದ್ದಾನಲ್ಲದೆ ಕುಡಿದ ಅಮಲು ಹೆಚ್ಚಾಗಿದ್ದರಿಂದ ಈ ಅವಾಂತರ ಸಂಭವಿಸಿದೆ ಎಂಬುದನ್ನು ಒಪ್ಪಿಕೊಂಡಿದ್ದಾನೆ. ಚೌಕ್‌ ಪೊಲೀಸ್‌ ಠಾಣೆ ಪೊಲೀಸರು ಈ ಯುವಕನಿಂದ ತಪ್ಪಾಗಿರುವ ಮುಚ್ಚಳಿಗೆ ಪತ್ರ ಬರೆಯಿಸಿಕೊಂಡು ಬಿಡುಗಡೆ ಮಾಡಿದ್ದಾರೆ.
 

PREV
click me!

Recommended Stories

ಮಳೆಗಾಗಿ ಕಾಯುವ ದಿನ ಮುಗಿದಿದೆ.. ಹವಾಮಾನ ಇಲಾಖೆಯಿಂದ ಬಿಗ್ ಅಪ್‌ಡೇಟ್ಸ್
ಆರೋಗ್ಯ ಸಚಿವ ಯುಟಿ ಖಾದರ್ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ, ಗಂಭೀರವಾಗಿ ಗಾಯಗೊಂಡ ರೈಡರ್