chikkaballapura: ಭೂಕಂಪ ವಲಯದಿಂದ ಸುರಕ್ಷಿತ ಪ್ರದೇಶದಲ್ಲಿ ಜಿಲ್ಲೆ

Kannadaprabha News   | Asianet News
Published : Nov 13, 2021, 02:17 PM IST
chikkaballapura:   ಭೂಕಂಪ ವಲಯದಿಂದ ಸುರಕ್ಷಿತ ಪ್ರದೇಶದಲ್ಲಿ   ಜಿಲ್ಲೆ

ಸಾರಾಂಶ

ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಿಟ್ಟಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಪದೇ ಪದೇ ಕೇಳಿಬಂದಿರುವ ಭಾರೀ ಸದ್ದು ಭಾರೀ ಸದ್ದು ಭೂಕಂಪ ಅಲ್ಲ ಬರಿ ಗಾಳಿ, ಅನಿಲ ಸ್ಫೋಟ (ಏರ್‌ ಬ್ಲಾಸ್ಟ್) ಅಷ್ಟೆ

 ಚಿಕ್ಕಬಳ್ಳಾಪುರ (ನ.13):  ಜಿಲ್ಲೆಯ ಚಿಂತಾಮಣಿ (Chintamani)  ತಾಲೂಕಿನ ಮಿಟ್ಟಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ (village) ಪದೇ ಪದೇ ಕೇಳಿ ಬಂದಿರುವ ಭಾರೀ ಸದ್ದು ಭೂಕಂಪ (Earthquake) ಅಲ್ಲ ಬರಿ ಗಾಳಿ, ಅನಿಲ ಸ್ಫೋಟ (ಏರ್‌ ಬ್ಲಾಸ್ಟ್ Air Blast) ಅಷ್ಟೆ,ಆದ್ದರಿಂದ ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ರಾಜ್ಯ ನೈಸರ್ಗಿಕ ವಿಕೋಪ (Natural Desater) ಉಸ್ತುವಾರಿ ಕೇಂದ್ರದ ಹಿರಿಯ ವೈಜ್ಞಾನಿಕ ಅಧಿಕಾರಿ ಎಸ್. ಜಗದೀಶ್‌ (S Jagadish) ತಿಳಿಸಿದರು.

ಪದೇ ಪದೇ ಭಾರಿ ಶಬ್ದ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ತಂಡದೊಂದಿಗೆ ಮಿಟ್ಟಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗಣಿ ಮತ್ತು ಭೂ ವಿಜ್ಞಾನ (Department of Mines and Geology) ಇಲಾಖೆಯ ಅಧಿಕಾರಿಗಳಿಂದ , ತಾಲೂಕು ಆಡಳಿತದ ಅಧಿಕಾರಿಗಳು ಮತ್ತು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಹಾಗೂ ಭೂ ಕಂಪನ ಮಾಪನ ಕೇಂದ್ರಗಳಿಂದ ಕಲೆಹಾಕಿದ ಮಾಹಿತಿಗಳನ್ನು ಆಧರಿಸಿ ಪ್ರಾಥಮಿಕ ತನಿಖೆ ನಡೆಸಿ ಬಳಿಕ ಡೀಸಿಗೆ(DC) ವರದಿ ನೀಡಿ ಅವರು ಮಾತನಾಡಿದರು.

ಕಳೆದ 20-25 ವರ್ಷಗಳಿಂದ ಮಳೆ ಪ್ರಮಾಣ ಈ ಭಾಗದಲ್ಲಿ ಕಡಿಮೆ ಇತ್ತು ಇತ್ತೀಚೆಗೆ ಈ ಭಾಗದಲ್ಲಿ ವ್ಯಾಪಕ ಮಳೆಯಾಗಿದ್ದು ಮಳೆಯ ನೀರು (Rain water) ಭೂಮಿಯೊಳಗೆ ಪೂರಣವಾಗಿ ಇಂಗುವ ಸಂದರ್ಭದಲ್ಲಿ ಭೂ ಪದರಗಳ ಮಧ್ಯೆ ಇರುವ ಖಾಲಿ ಜಾಗಗಳಿಗೆ ಅಥವಾ ಬಿರುಕುಗಳಿಗೆ ನೀರು ಪ್ರವೇಶಿಸುವ ಸಂದರ್ಭದಲ್ಲಿ ಅಲ್ಲಿದ್ದ ಗಾಳಿ. ಅನಿಲ ಸ್ಫೋಟಗೊಂಡು ಭಾರಿ ಶಬ್ದ ಉಂಟಾಗಿರುವ ಸಾಧ್ಯತೆ ಹೆಚ್ಚಿರುತ್ತದೆ.ಈ ರೀತಿಯ ಶಬ್ದವು ಮುಂದಿನ ದಿನಗಳಲ್ಲೂ ಕಂಡುಬರುವ ಸಾಧ್ಯತೆ ಇದ್ದು,ಮತ್ತೆ ಈ ರೀತಿಯ ಶಬ್ದ ಉಂಟಾದಲ್ಲಿ ಜನರು ಭಯಪಡುವ ಅವಶ್ಯಕತೆ ಇಲ್ಲ ಎಂದರು.

ಯಾವ ಕೇಂದ್ರದಲ್ಲೂ ದಾಖಲಾಗಿಲ್ಲ

ರಾಜ್ಯದಲ್ಲಿ ಒಟ್ಟು 14 ಭೂ ಕಂಪನ ಮಾಪನ ಕೇಂದ್ರಗಳಿವೆ. ಈ ಮಾಪನಗಳ ವರದಿಯನ್ನು ತೆಗೆದುಕೊಂಡು ವಿಶ್ಲೇಷಣೆ ಮಾಡಿ ನೋಡಿದಾಗ ನವೆಂಬರ್‌ 9ರಿಂದ ಈವರೆಗೆ ಯಾವುದೇ ರೀತಿಯ ಭೂ ಕಂಪನದ ವಿವರ ದಾಖಲಾಗಿಲ್ಲ. ಭಾರಿ ಶಬ್ದ ಕೇಳಿ ಬಂದ ಘಟನೆ ಕುರಿತಂತೆ ಶೀಘ್ರವೇ ಸರ್ಕಾರಕ್ಕೆ ವರದಿ ನೀಡುವುದಾಗಿ ಜಗದೀಶ್‌ ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಕಿರಿಯ ವೈಜ್ಞಾನಿಕ ಅಧಿಕಾರಿ ಡಾ.ರಮೇಶ್‌ ದಿಕ್ಪಾಲ , ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಾದ ಕೃಷ್ಣವೇಣಿ, ಬೋರಪ್ಪ, ತಹಸೀಲ್ದಾರ್‌ ಹನುಮಂತರಾಯಪ್ಪ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು,ಸಿಬ್ಬಂದಿ ಉಪಸ್ಥಿತರಿದ್ದರು.

ಜಿಲ್ಲೆ ಸುರಕ್ಷಿತ ವಲಯದಲ್ಲಿದೆ

ಜಿಲ್ಲೆಯ ಚಿಂತಾಮಣಿಯ ತಾಲ್ಲೂಕಿನ ಯಾವುದೇ ಭಾಗದಲ್ಲಿ ಭಾರೀ ಶಬ್ದ ವನ್ನು ಹೊರತುಪಡಿಸಿ ಇನ್ನಾವುದೇ ರೀತಿಯ ಲಘು ಭೂಕಂಪವು ಸಹ ಆಗಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯು ಭೂಕಂಪ ವಲಯದ ವಿಶ್ಲೇಷಣೆಗೆ ಸಂಬಂಧಿಸಿದಂತೆ ಅತ್ಯಂತ ಸುರಕ್ಷಿತ ವಲಯದಲ್ಲಿದೆ. ಈ ಭಾಗದಲ್ಲಿ ಕಂಡುಬರುವ ಕಲ್ಲು ಮೆದುವಿನಿಂದ ಕೂಡಿರದೆ ಬಹಳ ಗಟ್ಟಿಇದೆ ಅಲ್ಲದೆ ನೂರಾರು ವರ್ಷಗಳ ಅಂಕಿಅಂಶಗಳನ್ನು ಅವಲೋಕಿಸಲಾಗಿದೆ. ಈ ಭಾಗದಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆ ತೀರಾ ವಿರಳ ಎಂದು ಅಧಿಕಾರಿಗಳು ತಿಳಿಸಿದರು.

  • ಭೂಮಿಯೊಳಗಿಂದ ಉಂಟಾದ ಶಬ್ದ ಭೂಕಂಪ ಅಲ್ಲ 
  • ಪದೇ ಪದೇ ಕೇಳಿ ಬಂದಿರುವ ಭಾರೀ ಸದ್ದು ಭೂಕಂಪ ಅಲ್ಲ ಬರಿ ಗಾಳಿ, ಅನಿಲ ಸ್ಫೋಟ (ಏರ್‌ ಬ್ಲಾಸ್ಟ್) ಅಷ್ಟೆ
  • ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿಲ್ಲ ಎಂದ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಹಿರಿಯ ವೈಜ್ಞಾನಿಕ ಅಧಿಕಾರಿ

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ