IPL 2020: ಸತತ 4ನೇ ಸೋಲಿನ ಭೀತಿ​ಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್

Kannadaprabha News   | Asianet News
Published : Oct 31, 2020, 01:15 PM IST
IPL 2020: ಸತತ 4ನೇ ಸೋಲಿನ ಭೀತಿ​ಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್

ಸಾರಾಂಶ

13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 51ನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ ವಹಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ದುಬೈ(ಅ.31): ಆರಂಭ​ದಲ್ಲಿ ಅಬ್ಬ​ರಿಸಿ ನಿರ್ಣಾ​ಯಕ ಘಟ್ಟ​ದಲ್ಲಿ ಲಯ ಕಳೆ​ದು​ಕೊಂಡು ಸತತ 3 ಸೋಲು ಕಂಡಿ​ರುವ ಡೆಲ್ಲಿ ಕ್ಯಾಪಿ​ಟಲ್ಸ್‌, ಶನಿ​ವಾರ ಇಲ್ಲಿ ನಡೆ​ಯ​ಲಿ​ರುವ ಪಂದ್ಯ​ದಲ್ಲಿ ಈಗಾ​ಗಲೇ ಪ್ಲೇ-ಆಫ್‌ಗೆ ಅರ್ಹತೆ ಗಿಟ್ಟಿ​ಸಿ​ರುವ ಹಾಲಿ ಚಾಂಪಿ​ಯನ್‌ ಮುಂಬೈ ಇಂಡಿ​ಯನ್ಸ್‌ ತಂಡ​ವನ್ನು ಎದು​ರಿ​ಸ​ಲಿದೆ. 

ಡೆಲ್ಲಿ 12 ಪಂದ್ಯ​ಗ​ಳಿಂದ 14 ಅಂಕ ಗಳಿ​ಸಿದ್ದು, ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತಪಡಿ​ಸಿ​ಕೊ​ಳ್ಳ​ಲು ಬಾಕಿ ಇರುವ 2 ಪಂದ್ಯ​ಗ​ಳಲ್ಲಿ ಒಂದರಲ್ಲಿ ಗೆಲ್ಲ​ಬೇ​ಕಿದೆ. ಎರ​ಡ​ರಲ್ಲೂ ಸೋತ​ರೆ ನೆಟ್‌ ರನ್‌ರೇಟ್‌ ಲೆಕ್ಕಾ​ಚಾರ ಪರಿ​ಗ​ಣನೆಗೆ ಬರ​ಲಿದ್ದು, ಡೆಲ್ಲಿ ಹೊರ​ಬಿ​ದ್ದ​ರೂ ಬೀಳ​ಬ​ಹುದು. ಅಂತಹ ಸ್ಥಿತಿ ತಲು​ಪುವು​ದನ್ನು ತಪ್ಪಿ​ಸಿ​ಕೊ​ಳ್ಳಲು ಶ್ರೇಯಸ್‌ ಅಯ್ಯರ್‌ ಪಡೆ ಎದುರು ನೋಡು​ತ್ತಿದೆ. ಮತ್ತೊಂದೆಡೆ ಮುಂಬೈ ಉಳಿ​ದಿ​ರುವ 2 ಪಂದ್ಯ​ಗ​ಳಲ್ಲಿ ಜಯಿಸಿ, ಅಗ್ರಸ್ಥಾನ ಭದ್ರಪಡಿ​ಸಿ​ಕೊ​ಳ್ಳುವ ಗುರಿ ಹೊಂದಿ​ದೆ.

ಸ್ಟೋಕ್ಸ್, ಸ್ಯಾಮ್ಸನ್ ಆಟದೆದಿರು ಗೇಲ್ ಅಬ್ಬರ ಥಂಡಾ; ಗೆದ್ದು ಬೀಗಿದ ರಾಜಸ್ಥಾನ

ಪಿಚ್‌ ರಿಪೋರ್ಟ್‌: ಇಲ್ಲಿ 2 ದಿನ​ಗಳ ಹಿಂದೆ ನಡೆದ ಚೆನ್ನೈ-ಕೆಕೆ​ಆರ್‌ ಪಂದ್ಯ​ದಲ್ಲಿ ಪಿಚ್‌ ನಿಧಾ​ನಗತಿ​ಯ​ಲ್ಲಿ​ದ್ದಿದ್ದು ಸ್ಪಷ್ಟವಾಗಿತ್ತು. ಹೀಗಾಗಿ, ಕ್ರೀಸ್‌ನಲ್ಲಿ ನೆಲೆ​ಯೂರಿ ಆಡುವ ಬ್ಯಾಟ್ಸ್‌ಮನ್‌ಗಳ ಪಾತ್ರ ಮಹ​ತ್ವ​ದಾ​ಗ​ಲಿದೆ. 160-170 ಉತ್ತಮ ಮೊತ್ತ.

ಸಂಭ​ವ​ನೀಯ ಆಟ​ಗಾ​ರರ ಪಟ್ಟಿ

ಮುಂಬೈ ಇಂಡಿಯನ್ಸ್: ಕ್ವಿಂಟನ್ ಡಿ ಕಾಕ್‌, ಇಶಾನ್ ಕಿಶನ್‌, ಸೂರ್ಯಕುಮಾರ್ ಯಾದವ್, ಸೌರಭ್ ತಿವಾ​ರಿ, ಹಾರ್ದಿಕ್ ಪಾಂಡ್ಯ‌, ಕೃನಾಲ್ ಪಾಂಡ್ಯ‌, ಕೀರಾನ್ ಪೊಲ್ಲಾರ್ಡ್‌(ನಾ​ಯ​ಕ​), ಜೇಮ್ಸ್ ಪ್ಯಾಟಿ​ನ್ಸನ್‌, ರಾಹುಲ್ ಚಹರ್‌, ಟ್ರೆಂಟ್ ಬೌಲ್ಟ್‌, ಜಸ್ಪ್ರೀತ್ ಬುಮ್ರಾ.

ಡೆಲ್ಲಿ ಕ್ಯಾಪಿಟಲ್ಸ್: ಶಿಖರ್ ಧವನ್‌, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್‌(ನಾ​ಯ​ಕ), ರಿಷಭ್ ಪಂತ್‌, ಶಿಮ್ರೋನ್ ಹೆಟ್ಮೇ​ಯರ್‌, ಮಾರ್ಕಸ್ ಸ್ಟೋಯ್ನಿಸ್‌, ಅಕ್ಷರ್ ಪಟೇಲ್‌, ರವಿಚಂದ್ರನ್ ಅಶ್ವಿನ್‌, ಕಗಿಸೋ ರಬಾಡ, ಆನ್ರಿಚ್ ನೋಕಿಯಾ, ತುಷಾರ್ ದೇಶ​ಪಾಂಡೆ.

ಸ್ಥಳ: ದುಬೈ, 
ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರ್‌ಸಿಬಿ ಮ್ಯಾಚ್ ಬೆಂಗಳೂರು ಬಿಟ್ ಎಲ್ಲಿಗೂ ಶಿಫ್ಟ್ ಆಗೊಲ್ಲ! ಮಹತ್ವದ ಅಪ್‌ಡೇಟ್ಸ್‌ ಕೊಟ್ಟ ಬೆಂಗಳೂರು ಫ್ರಾಂಚೈಸಿ
ಸಂಜು ಸ್ಯಾಮ್ಸನ್ ಬ್ಯಾಟರ್‌ ಆಗಿ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಅಗತ್ಯವೇ ಇರಲಿಲ್ಲ ಎಂದ ಮಾಜಿ ಕ್ರಿಕೆಟಿಗ! ಹೀಗೆ ಹೇಳಲು ಕಾರಣವೂ ಇದೆ